ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬೈಂದೂರು ಶಾಖೆಯ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ

JANANUDI.COM NETWORK

ಕುಂದಾಪುರ, ಫೆ:8: ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ |ವಂ|ಸ್ಟ್ಯಾನಿ ತಾವ್ರೊ ಮತ್ತು ಬೈಂದೂರು  ಚರ್ಚಿನ ಧರ್ಮಗುರು ವಂ|ವಿನ್ಸೆಂಟ್ ಕುವೆಲ್ಲೊ ಇವರುಗಳು ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಬೈಂದೂರು ಯಡ್ತರೆ ರಸ್ತೆಯಲ್ಲಿನ ಜಾಗದಲ್ಲಿ, ಬೈಂದೂರು ಶಾಖೆಯ ಸ್ವಂತ ಕಟ್ಟಡಕ್ಕೆ ಆಶಿರ್ವಚನಗೈದು ಶಿಲಾನ್ಯಾಸ ನೆರವೇರಿಸಿದರು. |ವಂ|ಸ್ಟ್ಯಾನಿ ತಾವ್ರೊ   “ರೋಸರಿ ಅಮ್ಮನವರ ಹೆಸರಲ್ಲಿರು ಈ ಸೊಸೈಟಿಯ ಶಾಕೆಗೆ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ,ಬೈಂದೂರು ಇಗರ್ಜಿ ಕೂಡ, ರೋಜರಿ ಮಾತ ಇಗರ್ಜಿಯ ಶಾಖೆಯಾಗಿದ್ದು,ಎಲ್ಲವೂ ಒಳಿತಾಗುತ್ತದೆ,ಎಲ್ಲಿ ನ್ಯಾಯಪರವಾದ ಕೆಲಸಗಳಾಗುತ್ತವೊ ಅಲ್ಲಿ ಒಳ್ಳೆದೆ ಆಗುತ್ತೆ’ ಎಂದು ಅವರು ಹರಸಿದರು.  

 ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷರಾದ ಜಾನ್ಸನ್ ಡಿ ಆಲ್ಮೆಡಾ ಸ್ವಾಗತಿಸಿ, ಉಪಾಧ್ಯಕ್ಷ ಕಿರಣ್ ಲೋಬೊ ಜೊತೆಗೆ ಶಿಲಾನ್ಯಸ ಗೈದರು ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕಿ  ಬೈಂದುರಿನ ಶಾಂತಿ ಡಾಯಸ್, ಬಸ್ರೂರು,   ಶಾಖೆಯ ಉಸ್ತುವಾರಿ, ಸೊಸೈಟಿ ನಿರ್ದೇಶಕ ಫಿಲಿಪ್ ಡಿಕೋಸ್ತಾ,  ನಿರ್ದೇಶಕರುಗಳಾದ ವಿಲ್ಫ್ರೆಡ್ ಮಿನೇಜೆಸ್, ಪ್ರಕಾಶ್ ಲೋಬೊ, ಸೊಸೈಟಿಯ ಪ್ರಧಾನ ನಿರ್ವಹಣ ವ್ಯವಸ್ಥಾಪಕ ಪಾಸ್ಕಲ್ ಡಿಸೋಜಾ, ಸೊಸೈಟಿಯ ಸಹ ನಿರ್ವಹಣ ವ್ಯವಸ್ಥಾಪಕಿ ಮೇಬಲ್ ಪುಟಾರ್ಡೊ, ಬೈಂದೂರು ಶಾಖಾ ವ್ಯವಸ್ಥಾಪಕಿ  ವಿನೀತಾ ಡಿಸೋಜಾ, ಸೊಸೈಟಿ ಸಿಬಂದಿ ವರ್ಗ, ವಾಳೆಯ ಗುರಿಕಾರ್ಣಿ ಜೋಸ್ಪಿನ್ ರೊಡ್ರಿಗಸ್, ಕಟ್ಟಡದ ಕಂಟ್ರ್ಯಾಕ್ಟರ್ ಕ್ಲೆಮೆಂಟ್ ರೊಡ್ರಿಗಸ್, ಇಂಜಿನಿಯರ್ ರವೀಂದ್ರ ಕಾವೇರಿ ಮತ್ತು ಇತರರು ಹಾಜರಿದ್ದರು.. ಸೊಸೈಟಿ ನಿರ್ದೇಶಕಿ  ಡಾಯನಾ ಡಿಆಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಾಕಿ ಶಾಂತಿ ಕರ್ವಾಲ್ಲೊ ವಂದಿಸಿದರು.