

ರಾಯಲ್ಪಾಡು 1 : ಸಮೀಪದ ಕೆ.ಗೊಲ್ಲಪಲ್ಲಿ ಬೆಟ್ಟಗುಡ್ಡಗಳಲ್ಲಿ ಭಾನುವಾರ ಚಿರತೆ ಮತ್ತು ಚಿರತೆ ಮರಿಯು ಕಾಣಿಸಿರುವ ಬಗ್ಗೆ ಸ್ಥಳಿಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ . ಸೋಮವಾರ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಶ್ರೀನಾಥ್ ಪತ್ರಿಕೆಯೊಂದಿಗೆ ಮಾತನಾಡಿ ಭಾನುವಾರ ಗ್ರಾಮಸ್ಥರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಲಾಗಿದ್ದು, ಇದುವೆರಗೂ ನಮಗೆ ಅದರ ಚಲವಲನಗಳ ಬಗ್ಗೆ ಮಾಹಿತಿ ಲಭ್ಯವಾಗುತಿಲ್ಲ ಎಂದರು.
ಕೆ.ಗೊಲ್ಲಪಲ್ಲಿ ಗ್ರಾಮದ ಬೆಟ್ಟಗುಡ್ಡಗಳು ನೆರೆಯ ಆಂದ್ರಕ್ಕೆ ಹೊಂದಿಕೊಂಡಿದ್ದು, ಸ್ಥಳೀಯರ ಮಾತಿನಂತೆ ನಾವು ಇದೇ ಮೊದಲ ಭಾರಿಗೆ ಈ ಭಾಗದಲ್ಲಿ ಚಿರತೆಯನ್ನು ನೋಡಿದ್ದೇವೆ ಎನ್ನುತ್ತಾರೆ . ಈ ಚಿರತೆಯೊಂದಿಗೆ ಮರಿ ಚಿರತೆ ಇದ್ದ ಬಗ್ಗೆ ಮಾಹಿತಿ ನೀಡಿದರು. ದಾರಿ ತಪ್ಪಿ ಬಂದಿರಬಹುದು ಬಂದ ದಾರಿಯಲ್ಲಿ ಪುನಃ ಹೊರಟು ಹೋಗಬಹುದು ಎನ್ನುತ್ತಾರೆ. ಸ್ಥಳೀಯರು
ಯಾವುದೇ ಏನು ಆಗಲಿ ನಾವು ನಮ್ಮ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವರ ಮಾರ್ಗದರ್ಶನದಂತೆ ಚಿರತೆಯನ್ನು ಹಿಡಿಯಲಾಗುವುದು ಎಂದು ಮಾಹಿತಿ ನೀಡಿದರು.