ಭಾರತೀಯ ರೆಡ್ ಕ್ರಾಸ್ – ಕುಂದಾಪುರ ವಿಶೇಷ ಚೇತನ ಬಾಲಕನ ವೈದ್ಯಕೀಯ ಚಿಕಿತ್ಸೆಗೆ ರೂ. 30,000 – ದೇಣಿಗೆ

JANANUDI.COM NETWORK

ಕುಂದಾಪುರ,ಮೇ.20: ದಿನ ಭಾರತೀಯ ರೆಡ್ ಕ್ರಾಸ್ ಕುಂದಾಪುರ ತಾಲೂಕು ಶಾಖೆ, ವಿಶೇಷ ಚೇತನ ಬಾಲಕ, ಕೋಟೇಶ್ವರ ಸುಬ್ರಮ್ಹಣ್ಯನವರ ಪುತ್ರ ಪ್ರಜ್ವಲ್ ಗೆ ವೈದ್ಯಕೀಯ ಚಿಕಿತ್ಸೆ ಗಾಗಿ ರೂಪಾಯಿ 30,000/- ದೇಣಿಗೆಯನ್ನು ನೀಡಲಾಯಿತಯ. ಈ ದೇಣಿಗೆಯನ್ನು ಸಭಾಪತಿ ಗಳಾದ ಶ್ರೀಯುತ ಜಯಕರ ಶೆಟ್ಟಿ ಯವರು ಬಾಲಕನ ತಂದೆಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ, ಈ ದೇಣಿಗೆಯ ಪ್ರಾಯೋಜಕ ರಾದ ಆವರ್ಸೆ ಮುತ್ತಯ್ಯ ಶೆಟ್ಟಿ,ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಮಿತಿ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಸೀತಾರಾಮ ನಕ್ಕತ್ತಾಯ, ನಾರಾಯಣ ದೇವಾಡಿಗ ಮತ್ತು JCI ಸದಸ್ಯರುಗಳು ಹಾಜರಿದ್ದರು.