ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ:ಎಸ್.ಎನ್.ಆರ್.ಬಾಬುರೆಡ್ಡಿ

ಶ್ರೀನಿವಾಸಪುರ: ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಗಿಸಿಕೊಂಡಿದ್ದ ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದು ಜಿಲ್ಲಾ ಎಎಪಿ ಮುಖಂಡ ಎಸ್.ಎನ್.ಆರ್.ಬಾಬುರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಎಎಪಿ ಘಟಕದ ವತಿಯಿಂದ ಭಾನುವಾರ ಸ್ವಂತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಎಲ್ಲರಿಗು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ಎಎಪಿ ಬೆಂಬಲಿಸಬೇಕು ಎಂದು ಹೇಳಿದರು.
ಮುಖಂಡರಾದ ಶಶಿಕುಮಾರ್, ಪ್ರಕಾಶ್, ಶ್ರೀನಿವಾಸರೆಡ್ಡಿ, ಶಿವಾರೆಡ್ಡಿ, ಚಲಪತಿ, ರಾಜೇಶ್, ಜನಾರ್ಧನ್, ಕಟೇಶ್, ರೆಡ್ಡಪ್ಪ, ನಾಗರಾಜ್, ಸೋಮಶೇಖರ್ ಇದ್ದರು.
ಬೈಕ್ ರ್ಯಾಲಿ: ಎಎಪಿ ಕಾರ್ಯಕರ್ತರು ಪಟ್ಟಣದಲ್ಲಿ ರಾಷ್ಟ್ರಧ್ವಜ ಹೊತ್ತು ಬೈಕ್ ರ್ಯಾಲಿ ನಡೆಸಿದರು