ಆಟೋರಿಕ್ಷಾ ,ಟ್ಯಾಕ್ಸಿ ,ಮೆಟಾಡೊರ್, ಡ್ರೈವರ್ ಅಸೋಸಿಯೇಷನ್ ನಿಂದ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ: ಆಟೋರಿಕ್ಷಾ ,ಟ್ಯಾಕ್ಸಿ ,ಮೆಟಾಡೊರ್, ಡ್ರೈವರ್ ಅಸೋಸಿಯೇಷನ್ ನಿಂದ ಸ್ವಾತಂತ್ರ್ಯ 77 ನೇ ದಿನಾಚರಣೆಯನ್ನು ಆಚರಿಸಲಾಯಿತು. ’ಸ್ವಾತಂತ್ರ್ಯ ,ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಲವು ರೀತಿಯಲ್ಲಿ ಧಕ್ಕೆ ಬರುತ್ತಿದೆ. ನಾವೆಲ್ಲರೂ ಒಂದಾಗಿ ಇವುಗಳ ಸಂರಕ್ಷಣೆಯ ಸಂಕಲ್ಪ ತೊಡಬೇಕಾಗಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಯವರು ಮಾತನಾಡಿ ದೇಶದ ಇಂದಿನ ಸರ್ವತೋಮುಖ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಹೇಳಿ ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು.
ಸಭೆಯಲ್ಲಿ ಪುರಸಭೆ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಅಬು ಅಹಮ್ಮದ್, ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಷನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಅಶ್ವತ್ ಕುಮಾರ್, ಮುನಾಫ್ ಕೋಡಿ, ಶಶಿಕುಮಾರ್, ಮಾಜಿ ಪುರಸಭಾ ಅಧ್ಯಕ್ಷರಾದ ಹಾರುನ್ ಸಾಹೇಬ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ, ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ವಕ್ವಾಡಿ ಭಾಸ್ಕರ್ ಪೂಜಾರಿ ,ಉಪಾಧ್ಯಕ್ಷರಾದ ಶೇಖರ ಪೂಜಾರಿ ತಲ್ಲೂರು, ಜೇಮ್ಸ್ ರೆಬೆಲ್ಲೊ ಹೆಮ್ಮಾಡಿ ,ವಿ ಎನ್ ಗುಂಡ ಪಾರಿಜಾತ, ಭಾಸ್ಕರ ಪೂಜಾರಿ ಕಂಡ್ಲೂರು ,ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಎಚ್ ಗಂಗಾಧರ ಶೆಟ್ಟಿ, ಅಭಿಜಿತ್ ಪೂಜಾರಿ, ಅಶೋಕ್ ಸುವರ್ಣ, ಮಧುಕರ, ಆಶಾ ಕರ್ವಾಲ್ಲೊ, ಸುಭಾಷ್ ಪೂಜಾರಿ, ಸದಾನಂದ ಖಾರ್ವಿ, ಜ್ಯೋತಿ ಕೆ, ಶೋಭಾ ಸಚ್ಚಿದಾನಂದ, ಸುವರ್ಣ ಅಲ್ಮೇಡಾ, ಶಶಿ ರಾಜ್ ಪೂಜಾರಿ, ಕೇಶವ ಭಟ್, ವೇಲಾ ಬ್ರಗಾಂಜ , ಜ್ಯೋತಿ ಮೊಗವೀರ, ಜೋಸೆಫ್ ರೆಬೆಲ್ಲೊ, ಡೊಲ್ಫಿ ಡಿಕೋಸ್ತ, ವಿವೇಕಾನಂದ, ಕೆ ಸುರೇಶ, ನಾಗರಾಜ ನಾಯ್ಕ, ಪ್ರೀತಮ್ ಕರ್ವಾಲ್ಲೊ ,ದಿನೇಶ್ ಬೆಟ್ಟ, ಗುಲಾಬಿ, ಡೆಪೋಡಿಲ್ ಕ್ರಾಸ್ಟೋ , ಸೂರ್ಯನಾರಾಯಣ, ಇಬ್ರಾಹಿಂ, ಸಂತೋಷ್ ಖಾರ್ವಿ ,ಬಾಲಾ ಬಸ್ರೂರ್, ನರೇಂದ್ರ ಗಾಣಿಗ, ಪ್ರಕಾಶ್, ಸುರೇಶ್ ಸಂಗಮ್, ಭಾಸ್ಕರ, ಆನಂದ ,ಅಜಿತ್ ಕುಮಾರ್, ರತ್ನಾಕರ್ ಶೆಟ್ಟಿ ,ಜನಾರ್ದನ್ ಖಾರ್ವಿ, ಕೆ ಅಶೋಕ್ ,ಮಂಜುನಾಥ , ಪಿಯುಸ್ ಡಿಸೋಜ, ವಿಶ್ವನಾಥ ಪೂಜಾರಿ, ಎಂ ಉದಯಕುಮಾರ್, ಶಶಿಧರ, ಕಿರಣ್, ಬಸ್ತು, ಅಶೋಕ ಡಿಸೋಜಾ ವಿಜಯ ಪೂಜಾರಿ ತಲ್ಲೂರು ಫೆಲಿಕ್ಸ್ ತಲ್ಲೂರು ಇನ್ನಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರೂಪಿಸಿ, ಅಸೋಶಿಯೇಶನ್ ನಾ ಕಾರ್ಯದರ್ಶಿ ಮಾಣಿ ಉದಯ್ ಅವರು ವಂದಿಸಿದರು. ಸಭೆಯ ನಂತರ ಅಸೋಸಿಯೇಷನ್ ನಾ ಸದಸ್ಯರು ವಾಹನಗಳ ಜಾಥ ಕುಂದಾಪುರದ ಪ್ರಮುಖ ರಸ್ತೆಯಲ್ಲಿ ನಡೆಸಿದರು.