ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನೆ

JANANUDI.COM NETWORK


ಕುಂದಾಪುರ, ನ.2: ಕಥೊಲಿಕ್ ಸಭಾಉಡುಪಿ ಪ್ರದೇಶ್ (ರಿ)ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್(ರಿ) ಸಂಸ್ಥೆಯ ನೂತನಕಛೇರಿಉದ್ಘಾಟನೆಜೆ.ಬಿ.ಎಲ್‍ರಸ್ತೆಯ ಸದ್ಗುರುಟವರ್ ನಲ್ಲಿಕಥೊಲಿಕ್ ಸಭಾಕುಂದಾಪುರ ವಲಯ ಮಾಜಿಅಧ್ಯಕ್ಷರಾದ ವಲೇರಿಯನ್ ಮಿನೇಜೆಸ್ ಉದ್ಘಾಟಿಸಿ ಶುಭಕೋರಿದರು.
ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಫಾ| ಸ್ಟ್ಯಾನಿ ತಾವ್ರೊ ಆಶಿರ್ವಚನ ಮಾಡಿ “ನೀವು ಪ್ರೀತಿ ಬಾಂಧವ್ಯದ ಜೊತೆ ಸಮಾಧಾನದ ಜೀವನವನ್ನು ನಡೆಸಬೇಕು, ಇವತ್ತು ದೀಪ ಬೆಳಗಿಸಿ ಈ ಕಚೇರಿಗೆ ಚಾಲನೆಯನ್ನು ನೀಡಿದ್ದಿರಿ, ಹಾಗೇ ದೀಪಗಳಂತೆ ನೀವು ಸಮಾಜದಲ್ಲಿ ಇತರ ಜೀವನದಲ್ಲಿ ಬೆಳಕಾಗಿರಿ. ನೀವು ಉತ್ತಮ ಸಮಾಜಕ್ಕೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರಿ, ಮುಂದೆ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಿರಿ” ಎಂದು ಸಂದೇಶ ನೀಡಿದರು.
ಕಥೊಲಿಕ್ ಸಭಾ ಕೇಂದ್ರಿಯ ಸಮಿತಿಯ ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೊ ಶುಭ ಕೋರಿದರು. ಭಾರತೀಯ ಕ್ರೈಸ್ತ ಮಾನವ ಹಕ್ಕುಗಳ ರಾಜ್ಯ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತನ್ನ, ಕಾರ್ಯದರ್ಶಿ ಗ್ಲ್ಯಾಡ್ಸನ್, ಕಟ್ಟಡ ಮಾಲೀಕರಾದ ಚಂದ್ರಶೇಖರ್, ಅಜಿತ್ ಲುವಿಸ್, ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನಿಯೋಜಿತೆ ಅಧ್ಯಕ್ಷೆ ಶಾಂತಿ ಪಿರೇರಾ, ಸಹಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಮಾಜಿ ಅಧ್ಯಕ್ಷರಾದ ಜಾನ್ಸನ್ ಡಿಆಲ್ಮೇಡಾ, ಕಿರಣ್ ಕ್ರಾಸ್ತಾ, ಜೆರಾಲ್ ್ಡಕ್ರಾಸ್ತಾ, ಡಾ|ಸೋನಿ ಡಿಕೋಸ್ತಾ, ಕಥೊಲಿಕ್ ಸಭಾದ ಘಟಕಗಳ ಅಧ್ಯಕ್ಷರಾದ ಬರ್ನಾಡ್ ಡಿಕೋಸ್ತಾ,ಕುಂದಾಪುರ, ತೊಮಸ್ ಡಿಮೆಲ್ಲೊ, ಕೋಟೇಶ್ವರ, ಲಾರೆನ್ಸ್ ಡಿಸೋಜಾ, ಕಂಡ್ಲೂರು, ಕುಂದಾಪುರ ಘಟಕದ ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಸ್ವಾಗತಿಸಿದರು, ಕಾರ್ಯದರ್ಶಿ ಡಯಾನ ಸೆರಾವೊ ವಂದಿಸಿದರು. ಶೆವೊಟ್ ಪ್ರತಿಷ್ಟಾನದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.