ರೋಜರಿ ಕ್ರೆಡಿಟ್ ಕೋ.-ಆಪರೆಟೀವ್ ಸೊಸೈಟಿ. ಲಿ. ಬೈಂದೂರು ಶಾಖೆಯ ನೂತನ ಸ್ವಂತ ಕಟ್ಟಡ ಉದ್ಘಾಟನೆ

JANANUDI.COM NETWORK


ಕುಂದಾಪುರ,ಡಿ19: ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಈ ಸಂಸ್ಥೆಗೆ 8 ಶಾಖೆಗಳಿದ್ದು, ಬೈಂದೂರಿನಲ್ಲಿ ಈ ಮೊದಲೇ ಶಾಖೆ ಇದ್ದು ಬಾಡಿಗೆ ಕಟ್ಟಡದಲ್ಲಿ ವ್ಯಹರಿಸುತಿತ್ತು, ಈಗ ಈ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣಗೊಂಡು ಸುಸಜ್ಜಿತವಾದ ರೋಜರಿ ಸೊಸೈಟಿ ಬೈಂದೂರು ಶಾಖೆಯ ಕಡ್ಡಡವನ್ನು ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ ಇವರು ಭಾನುವಾರದಂದು (19-12-21) ಉದ್ಘಾಟಿಸಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಅವರು ‘ನೀವು ಬೈಂದೂರಿನಲ್ಲಿ ನಿಮ್ಮ ಶಾಖೆಗೆ ಹೊಸ ಸ್ವಂತ ಕಟ್ಟಡ ಕಟ್ಟಿ ಉದ್ಘಾಟಿಸಿದ್ದು, ಉತ್ತಮ ಬೆಳವಣಿಗೆ, ಬಾಡಿಗೆ ಮನೆಯಲ್ಲಿರುವರು, ನಮ್ಮ ಸ್ವಂತ ಮನೆಗೆ ಹಾತೊರೆಯುತ್ತಿದ್ದಾರೆ, ಸ್ವಂತ ಮನೆಯಲ್ಲಿ ನಮಗೆ ಅತ್ಯಂತ ಖುಷಿ ಕೊಡುವ ವಿಚಾರ, ಅದರಂತೆ ನೀವು ರೋಸರಿ ಸೊಸೈಟಿ ಸಂಸ್ಥೆಯವರು ಇವತ್ತು ತಮ್ಮ ಇನ್ನೊಂದು ಶಾಖೆಯ ಸ್ವಂತ ಕಟ್ಟಡವನ್ನು ನಿರ್ಮಿಸಿ ಸಂತುಷ್ಟರಾಗಿದ್ದಿರಿ, ನೀವು ಎಲ್ಲರಿಗೂ ನಗು ಮುಖದ ಸಂತೋಷ ಭರಿತ ಸೇವೆ ನಿಮ್ಮದಾಗಲಿ, ಅದರಿಂದ ನೀವು ಇನ್ನೂ ಉತ್ತಮ ಸಾಧನೆ ಮಾಡಿ ಇನ್ನೂ ಎತ್ತರಕ್ಕೆ ಅಗಲಕ್ಕೆ ಬೆಳೆಯಿರಿ” ಎಂದು ಶುಭ ಕೋರಿದರು.
ಸ್ಥಳೀಯ ಬೈಂದೂರು ಪವಿತ್ರ ಶಿಲುಭೆ ಚರ್ಚಿನ ಧರ್ಮಗುರು ವಂ.ವಿನ್ಸೆಂಟ್ ಕುವೆಲ್ಲೊ ಕಟ್ಟಡಡ ಮತ್ತು ಶಾಖೆಯನ್ನು ಆಶಿರ್ವಾಚನವನ್ನು ಮಾಡಿ ಹರಸಿದರು. ರೋಜರಿ ಸೊಸೈಟಿಯ ಅಧ್ಯಕ್ಷರಾದ ಜೋನ್ಸನ್ ಡಿಆಲ್ಮೇಡಾ ಕುಂದಾಪುರ ವಲಯ ಕಥೊಲಿಕ್ ಸಭಾದ ಹಿರಿಯರು ದೂರದರ್ಶಿತ್ವ ಇಟ್ಟುಕೊಂಡು ನಮ್ಮ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಅಲ್ಪ ಮೊತ್ತದೊಂದಿಗೆ ಆರಂಭಗೊಂಡು, ಸಂಸ್ಥೆ ಇಂದು ಬಹು ಎತ್ತರಕ್ಕೆ ಬೆಳೆದಿದೆ, ನಮ್ಮ ಸಂಸ್ಥೆಯ ಗ್ರಾಹಕರಿಗೆ ನಾವು ಉತ್ತಮ ಸೇವೆ ನೀಡಲು ಯಾವತ್ತೂ ಬದ್ದ, ನೀವು ನಮ್ಮ ತಮ್ಮ ಕಾರ್ಯಕ್ಕಾಗಿ ನಮ್ಮ ಮುಖ್ಯ ಕಚೇರಿಗೂ ಕೂಡ ಭೇಟಿ ಮಾಡಬಹುದು, ನಿಮಗಾಗಿ ನಮ್ಮ ಪ್ರಮಾಣಿಕ ನಿಸ್ವಾರ್ಥ ಸೇವೆ ನೀಡಲು ಸದಾ ಸಿದ್ದರುದ್ದೇವೆ. ಇವತ್ತಿನ ಈ ಬೆಳವಣಿಗೆಗೆ ಆಡಳಿತ ಮಂಡಳಿಯ ನಿರ್ದೇಶನ ಸಹಕಾರ ಮತ್ತು ಸಿಂಬಂದಿ ಉತ್ತಮ ಸೇವೆಯಿಂದ ಕಾರಣವಾಗಿದೆ’ ಎಂದು ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿದ ಸೊಸೈಟಿಯ ಅಧ್ಯಕ್ಷರಾದ ಜೊನ್ಸನ್ ಡಿಆಲ್ಮೇಡಾ ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜು ಪೂಜಾರಿಯನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಪ್ರಕಾಶ್ ಲೋಬೊ, ವಿಲ್ಫ್ರೆಡ್ ಮಿನೇಜೆಸ್, ಶಾಂತಿ ಕರ್ವಾಲ್ಲೊ, ಬ್ಯಾಪ್ಟಿಸ್ಟ್ ಡಾಯಸ್ ಇನ್ನಿತರರು ಉಪಸ್ಥಿತರಿದ್ದರು. ಬೈಂದೂರು ಶಾಖಾ ಸಭಾಪತಿ ಶಾಂತಿ ಡಾಯಸ್ ಸ್ವಾಗತಿಸಿ. ಉಪಾಧ್ಯಕ್ಷ ಕಿರಣ್ ಲೋಬೊ ಅತಿಥಿಗಳಿಗೆ ಹೂ ಗುಚ್ಚ ನೀಡಿದರು. ಸೊಸೈಟಿಯ ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಮೇಬಲ್ ಪುಟಾರ್ಡೊ ವಂದಿಸಿದರು. ನಿರ್ದೇಶಕಿ ಡಾಯ್ನಾ ಡಿಆಲ್ಮೇಡಾ ನಿರೂಪಿಸಿದರು.