ಕುಂದಾಪುರ ವಾಲಿಬಾಲ್ ಅಕಾಡೆಮಿಯ ಉದ್ಘಾಟನೆ, ಅಕಾಡೆಮಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ತರಬೇತಿಯ ಸಮಾರೋಪ

ಕುಂದಾಪುರ ವಾಲಿಬಾಲ್ ಅಕಾಡೆಮಿಯ ಉದ್ಘಾಟನೆ ಹಾಗೂ, ವಾಲಿಬಾಲ್ ಅಕಾಡೆಮಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದೆ ವಾಲಿಬಾಲ್ ತರಬೇತಿಯ ಸಮಾರೋಪ ಸಮಾರಂಭ . ಮೇ 27 . ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನೂತನ ” ಕುಂದಾಪುರ ವಾಲಿಬಾಲ್ ಅಕಾಡೆಮಿ ಯ ಉದ್ಘಾಟನೆಯನ್ನು ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಯ ಮೊಕ್ತೇಸರ, ಮಾಜಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಶ್ರೀ ಜಯಾನಂದ ಖಾರ್ವಿ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಅಥ್ಲೆಟ್ ಶ್ರೀ ಪರಮೇಶ್ವರ ಖಾರ್ವಿ ಉಪ್ಪುಂದ , ಮತ್ತು ಹುಣ್ಸೆಮಕ್ಕಿಯ ವಾಲಿಬಾಲ್ ಪ್ರೋತ್ಸಾಹಕ ಶ್ರೀ ಸಂದೇಶ್ ಜೋಗಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ್ರೀಡಾಧಿಕಾರಿ ಶ್ರೀ ಕುಸುಮಾಕರ್ ಶೆಟ್ಟಿ, ದೈಹಿಕ ಶಿಕ್ಷಕ , ತರಬೇತುದಾರ ಜೀವನ್ ಕುಮಾರ್ ಶೆಟ್ಟಿ, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ಶ್ರೀ ರಮಾನಂದ .ಕೆ . ದೈಹಿಕ ಶಿಕ್ಷಕ , ಕೋಚ್ ಶ್ರೀ ಗಣೇಶ್ ಶೆಟ್ಟಿ ಕಟ್ಕೆರೆ, ಗೋಲ್ಡನ್ ಮಿಲ್ಲರ್ ಸ್ಪೋರ್ಟ್ಸ್ ಕ್ಲಬ್ ವಡೇರಹೋಬಳಿ ಅಧ್ಯಕ್ಷ ಶ್ರೀ ಕೃಷ್ಣ ಪೂಜಾರಿ, ದೈಹಿಕ ಶಿಕ್ಷಕ ಶ್ರೀ ಸತ್ಯಾನಂದ್ ಸಾಲಿನ್ಸ್, ವಾಲಿಬಾಲ್ ಅಕಾಡೆಮಿಯ ಮಹಮ್ಮದ್ ಸಮೀರ್, ಇಲಿಯಾಸ್.ಬಿ. ಮೆಲ್ವಿನ್ ರೆಬೆಲ್ಲೊ, ಶ್ರೀಧರ್ ಆಚಾರ್, ವಿಖ್ಯಾತ್ ಕಂಡ್ಲೂರ್, ಜೋಯ್ ಜೆ ಕರ್ವಾಲೋ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಶಿಬಿರಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಪಂದ್ಯಾಟಗಳನ್ನು ಏರ್ಪಡಿಸಿ ಪಾರಿತೋಷಕಗಳನ್ನು ವಿತರಿಸಲಾಯಿತು.

ಕುಂದಾಪುರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಈರಯ್ಯ. ಬಿ. ಬಹುಮಾನ ವಿತರಿಸಿದರು. 14 ರಿಂದ 19 ವಯಸ್ಸಿನ ಸುಮಾರು 45 ಹುಡುಗರು ತರಬೇತಿಯಲ್ಲಿ ಭಾಗವಹಿಸಿದ್ದರು.ಶ್ರೀ ಹನೀಫ್ ವೀಕ್ಷಕ ವಿವರಣೆ ಗೈದು, ಇಲಿಯಾಸ್ ಬಿ. ಕಾರ್ಯಕ್ರಮ ನಿರ್ವಹಿಸಿದರು.