![](https://jananudi.com/wp-content/uploads/2023/03/0-jananudi-network-editor-7.jpg)
![](https://jananudi.com/wp-content/uploads/2023/03/000000.jpg)
ಕುಂದಾಪುರ, ಮಾ.14: ಕುಂದಾಪುರ ಚರ್ಚ್ ರಸ್ತೆಗೆ ಸಂಬಂಧಿಸಿದ ಕಾನ್ವೆಂಟ್ ಕ್ರಾಸ್ ರಸ್ತೆಯ ಒಸ್ವಲ್ಡ್ ಕರ್ವಾಲ್ಲೊ ಮನೆಯ ನೆರೆಮನೆಯ ಆವರಣದಲ್ಲಿ ನಿನ್ನೆ ರಾತ್ರಿ ಹೆಬ್ಬಾವು ಕಂಡು ಬಂದಿದೆ. ಕೊನೆಗೆ ಅದನ್ನು ಹಿಡಿಯಲಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುವುದೇ ಈ ವಾರ್ತೆಯ ಮುಖ್ಯ ಉದ್ದೇಶ.
ಸ್ಥಳೀಯ ಪ್ರದೇಶದಲ್ಲಿ ಈಗ ತಾಪಮಾನ ಹೆಚ್ಚಾಗಿದ್ದು, ಬಿಲ, ಪೊದೆಯಲ್ಲಿ, ಮಣ್ಣಿನ ಒಳಗಡೆ ಇರುವ ಸರಿಸ್ರಪಗಳು, ತಾಪಮಾನ ತಾಳದೆ ಹೊರಗೆ ಬರುತ್ತವೆ, ನಮ್ಮ ಪರಿಸರದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಬಂದು ಸುತ್ತಾಡುತ್ತೀವೆ ಎಂದು ತಿಳಿದು ಬಂದಿದೆ, ಹಾಗಾಗಿ ಜನ ಜಾಗ್ರತೆ ವಹಿಸಬೇಕು. ಸಂಜೆ, ರಾತ್ರೆ ಹೊತ್ತು ನಿಮ್ಮ ಮನೆ ಆವರಣದಲ್ಲಿ, ದಾರಿ, ರಸ್ತೆ ಬದಿಯಲ್ಲಿ ನೆಡೆಯುವಾಗ ಅಥವ ತಮ್ಮ ಕೆಲಸಗಳನ್ನು ಮಾಡುತ್ತೀರುವಾಗ, ಅಥವಾ ವಾಕಿಂಗ್ ಮಾಡುತ್ತೀರುವಾಗ ಜಾಗ್ರತೆ ವಹಿಸಬೇಕು. ಭಯಂಕ ವಿಷಜಂತುಗಳು ಹೊರಬಂದು ಅಡಗಿಕೊಂಡಿರುವ ಸಾಧ್ಯತೆ ಇದೆ. ಆದರಿಂದ ಜನರು ಜಾಗ್ರತೆಯನ್ನು ವಹಿಸಬೇಕು