ರಾಜ್ಯಕ್ಕೆ ನೂರು ಬಾರಿ ಅಮಿತ್ ಶಾ , ಮೋದಿ ಬಂದ ಕಾಂಗ್ರೆಸ್ ಅಧಿಕಾರಕ್ಕೇರುವದು ಖಚಿತ : ಸಿದ್ದರಾಮಯ್ಯ

ಕೋಲಾರ : ಪ್ರಜಾಧ್ವನಿ ಯಾತ್ರೆಯಲ್ಲಿ ಸೇರಿದ ಜನರನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ನೂರು ಬಾರಿ ಅಮಿತ್ ಶಾ , ಮೋದಿ ಬಂದ ಕಾಂಗ್ರೆಸ್ ಅಧಿಕಾರಕ್ಕೇರುವದು ಖಚಿತ ಎಂದರು.

ನಗರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಮಾತನಾಡಿದ ಅವರು , 13 ನೇ ಜಿಲ್ಲೆಯ ಪ್ರವಾಸ ಪ್ರತಿ ಜಿಲ್ಲೆಯಲ್ಲಿಯೂ ಪ್ರಜಾಧ್ವನಿಗೆ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಸ್ಪಂದನೆ ಜನಸಮೂಹದಿಂದ ಹರಿದು ಬರುತ್ತಿದೆ.

ರಾಜ್ಯದ ಜನ ಬಿಜೆಪಿ ಸರಕಾರದ ಆಡಳಿತದಿಂದ ಬೇಸತ್ತಿದ್ದಾರೆ , ನೊಂದಿದ್ದಾರೆ , ಅನೇಕ ಕಷ್ಟಗಳ ಅನುಭವಿಸುತ್ತಿದ್ದಾರೆ , ಯಾವುದೇ ಕೆಲಸ ಲಂಚ ನೀಡದೆ ಆಗುತ್ತಿಲ್ಲ ಎಂದು ಟೀಕಿಸಿದರು .

ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರಕಾರ ಬಿಜೆಪಿ ಸರಕಾರದ್ದಾಗಿದೆ . ಶೇ .40 ಪರ್ಸೆಂಟ್ ಕಮೀಷನ್ ಬಗ್ಗೆ ಮೂರು ಬಾರಿ ಸದನದಲ್ಲಿ ಚರ್ಚೆಗೆ ಕೋರಿದರೂ ಅವಕಾಶ ನೀಡಲಿಲ್ಲ , ಹೋಟೆಲ್ ತಿಂಡಿಗಳ ಮಾದರಿ ಪ್ರತಿ ಕೆಲಸಕ್ಕೂ ಲಂಚ ನಿಗದಿಪಡಿಸಲಾಗಿದೆ , ವಿಧಾನಸೌಧದ ಗೋಡೆ ಲಂಚ ಲಂಚ ಎಂದು ಪಿಸುಗುಡುತ್ತಿದೆ. ತಮ್ಮ ಅವಧಿಯ ಲಂಚದ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದರು .

ದೇಶದ ಯುವಕರೇ ಉದ್ಯೋಗ ಕೊಡದ ಬಿಜೆಪಿಯನ್ನು ನಂಬಬೇಡಿ , ಸಣ್ಣ ಕೈಗಾರಿಕೆ , ಮಧ್ಯಮ ಕೈಗಾರಿಕೆಗಳು ಮುಚ್ಚಿ ಹೋದವು. 60 ಲಕ್ಷ ಉದ್ಯೋಗಳು ಕಡಿತಗೊಂಡವು ಎಂದರು. 2 ವರ್ಷ 10 ತಿಂಗಳು ಮುಖ್ಯಮಂತ್ರಿ ಯಾಗಿದ್ದಾಗ ಕುಮಾರಸ್ವಾಮಿಗೆ ರೈತರು ಜ್ಞಾಪಕ ಬರಲಿಲ್ಲವಾ , ಈಗ ಜೆಡಿಎಸ್ ಪಂಚರತ್ನ ಎಂದು ಓಡಾಡುತ್ತಿದೆ.

ಕೆಸಿ ವ್ಯಾಲಿಗಾಗಿ ಜಿಲ್ಲೆಯ ಎಲ್ಲಾ ಮುಖಂಡರು ಬೇಡಿಕೆ ಮೇರೆಗೆ 1400 ಕೋಟಿ ನೀಡಿ ಕೆ.ಸಿ.ವ್ಯಾಲಿ ನೀರಿನಿಂದ ಕೆರೆಗಳ ತುಂಬಿಸಿದ್ದೇ ಕಾರಣ. ಈ ನೀರು ವಿಷ ಎನ್ನುತ್ತಿದ್ದಾರೆ ಕುಮಾರಸ್ವಾಮಿ , ಎತ್ತಿನ ಹೊಳೆಗೂ ವಿರೋಧ ಮಾಡಿದವರು ಕುಮಾರಸ್ವಾಮಿಯೇ ,
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎತ್ತಿನ ಹೊಳೆ ನೀರು ಹರಿಸಿ ಕುಡಿಯುವ ನೀರು ಕೊಡುತ್ತೇನೆ ಎಂದರು.

ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಮೋದಿ ಭರವಸೆ ಮಾಡಿದರು . ರೈತರ ಸಾಲ ಮನ್ನಾ ಮಾಡದೆ ಉದ್ಯಮಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ , ಮನಮೋಹನ್‌ಸಿಂಗ್ 78 ಸಾವಿರಕೋಟಿ ಸಾಲವನ್ನು ಮನ್ನಾ ಮಾಡಿದ್ದರು.

ರಾಜ್ಯದಲ್ಲಿ 27 ಲಕ್ಷ 27 ಸಾವಿರ ರೈತರಿಗೆ 50 ಸಾವಿರ ರೂ ಸಾಲ 8150 ಕೋಟಿ ಸಾಲ ಮನ್ನಾ ಮಾಡಿದ್ದೆ . ಎಸ್‌ ಸಿ ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವಂತೆ ಕಾನೂನು ಮಾಡಿದ್ದು , ನಮ್ಮ ಸರಕಾರ ಹಿಂದೆ ಯಾವ ಸರಕಾರವೂ ಮಾಡಿಲ್ಲ . ಪರಿಶಿಷ್ಟ ಜಾತಿ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ , ಬಡ್ಡಿ ಮೀಸಲಾತಿ , ದಲಿತರ ಕೈಗಾರಿಕೋದ್ಯಮಕ್ಕೆ ಸಹಕರಿಸಿದ್ದು ನಮ್ಮಸರಕಾರ ಎಂದು ವಿವರಿಸಿದರು.

ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವೆ

ಕೋಲಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , ಕೆ.ಸಿ ವ್ಯಾಲಿ ಮೂರನೇ ಬಾರಿಸಂಸ್ಕರಣೆ , ಸಹಕಾರ ಸಂಘಗಳ ಮೂಲಕ ಸ್ತ್ರೀಶಕ್ತಿ ಸಂಘಗಳು ಪಡೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವ ತೀರ್ಮಾನ ಮಾಡುತ್ತೇವೆ. ಮತ್ತೇ ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ರೂಗಳನ್ನು ಅಲ್ಪಸಂಖ್ಯಾತರಿಗೆ ನೀಡುತ್ತೇವೆ ಎಂದರು.

ಜೆಡಿಎಸ್ ಬಿಜೆಪಿಯನ್ನು ಸೋಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿ , ಕೋಲಾರದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕು , ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಪುನರುಚ್ಛರಿಸಿ ಭಾಷಣ ಮುಗಿಸಿದರು.