ಲಾರಿ-ಕಾರಿನ ನಡುವೆ ಭೀಕರ ಅವಘಡ:ಕಾರಿನಲ್ಲಿದ್ದ 10 ಜನರ ದುರ್ಮರಣ

JANANUDI.COM NETWORK

ಆನಂದ್, ಜೂ.16: ಗುಜರಾತ್​ ರಾಜ್ಯದ ಆನಂದ್​ ಜಿಲ್ಲೆಯ ಇಂದ್ರಾನಾಜ್​ ಎಂಬ ಗ್ರಾಮದ ಬಳಿ ಲಾರಿ​ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಕಾರಿನಲ್ಲಿದ್ದ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದ ದಾರುಣ ಘಟನೆ ನಡೆದಿದೆ

    ತಾರಾಪುರ ಮತ್ತು ಅಹಮದಾಬಾದ್ ಜಿಲ್ಲೆಯ ವಟಮಾನ್​​ ’ಎಂಬ ಉರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.ಲಾರಿಯು ಬಹಳ ವೇಗವಾಗಿ ಬಂದು  ಕಾರಿಗೆ ಡಿಕ್ಕಿ ಹೊಡೆದಿದೆ.

   ಕಾರಿನೊಳಗಿದ್ದ ಮೃತದೇಹಗಳು ನಜ್ಜುಗುಜ್ಜಾಗಿದ್ದು, ಕಾರಿನಿಂದ ಹೊರತೆಗೆಯುವ ಮತ್ತು ಮೃತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ.