ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಬಿ ಎಸ್ ಸಿ ವಿದ್ಯಾಭ್ಯಾಸ ಪಡೆದು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿ ನಿಶ್ಚಿತಳಗಿ ಸನ್ಮಾನ

ಶ್ರೀನಿವಾಸಪುರ :ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಬಿ ಎಸ್ ಸಿ ವಿದ್ಯಾಭ್ಯಾಸವನ್ನು ಪಡೆದ ಹೆಚ್ಚು ಅಂಕಗಳಿಸಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ನಾರಾಯಣಸ್ವಾಮಿ ಹಾಗೂ ಮಂಜುಳ ದಂಪತಿಗಳ ಪುತ್ರಿ ಕುಮಾರಿ ನಿಶ್ಚಿತ ಎಂಬ ವಿದ್ಯಾರ್ಥಿ ನಾಲ್ಕು ಚಿನ್ನದ ಪದಕ ಪಡೆದಿದ್ದಾಳೆ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಅಂಕ ಪಡೆದ ಕಾರಣ ಒಂದು ಚಿನ್ನದ ಪದಕ ಪಡೆದಿದ್ದರೆ ಇನ್ನು ಮೂರು ಚಿನ್ನದ ಪದಕ ಗಳು ಸ್ಪಂಸರ್ಸ್ ನಿಂದ ಪಡೆದಿರುವ ವಿದ್ಯಾರ್ಥಿ ನಿಶ್ಚಿತ ಳನ್ನು ನೇತಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ ಇನ್ನೂ ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ನಿಶ್ಚಿತ ನಾನು ಈ ಮಟ್ಟಕ್ಕೆ ಬೆಳೆಯಲು ಚಿನ್ನದ ಪದಕ ಪಡೆಯಲು ಕಾರಣಕರ್ತರಾದ ಪೋಷಕರು ಹಾಗೂ ನಮ್ಮ ಕಾಲೇಜಿನ ಉಪನ್ಯಾಸಕರಿಗೆ ಧನ್ಯವಾದಗಳು ತಿಳಿಸಿದಳು ನೇತಾಜಿ ಚಾರಿಟೇಬಲ್ ಕೃಷ್ಣ ಅಧ್ಯಕ್ಷರಾದ ನಾಗೇಂದ್ರ ರಾವ್  ವಿದ್ಯಾರ್ಥಿ ನಿಶ್ಚಿತಲಾನ್ನು ಸನ್ಮಾನಿಸಿ ಶುಭ ಆರೈಸಿ ಮಾತನಾಡಿ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಪಡೆದಿರುವುದು ತಾಲೂಕಿಗೆ ಹೆಮ್ಮೆಯ ವಿಷಯ ಇವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಓದಬೇಕು ಹಾಗೂ ತಾಲೂಕಿನ ಕೀರ್ತಿ ಹಾಗೂ ಪೋಷಕರ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ತಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎನ್.ಎನ್.ಆರ್. ನಾಗರಾಜ್, ಗಂಗಾಧರ್ ರೆಡ್ಡಿ, ನವೀನ್, ಶ್ರೀನಿವಾಸ್ ರೆಡ್ಡಿ, ಮನು, ಕೊಲಿಮಿ ಮಂಜುನಾಥ್, ಹಾಗೂ ನೇತಾಜಿ ಚರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರು ಇದ್ರಪ್ರಕಾಶರೆಡ್ಡಿ, ಕಾರ್ಯದರ್ಶಿ ಸುನೀಲ್, ಖಜಾನೆ ಕೃಷ್ಣರೆಡ್ಡಿ ವಿ ಹಾಗೂ ಸಂಘದ  ಸದಸ್ಯರು ಸನ್ಮಾನಿಸಿ ಶುಭ ಆರೈಸಿದರು.