ಶ್ರೀನಿವಾಸಪುರ : ಪೌರಕಾರ್ಮಿಕರು ದಿನ ಬೆಳಗಾದರೆ ಪಟ್ಟಣದಲ್ಲಿ ಸ್ವಚ್ಚತೆ ಮಾಡಿ ನಮ್ಮೆಲ್ಲರನ್ನೂ ಆರೋಗ್ಯ ಜೀವನವನ್ನು ನಡೆಸಲು ಕಾರಣೀಬೂತರಾಗಿರುವ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಡವಾಗಿರಬೇಕು ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಅಮಾನಿಕೆರೆ ಕ್ರೀಡಾಂಗಣದಲ್ಲಿ ಸೋಮವಾರ ಪುರಸಭೆಯ ಪೌಕಾರ್ಮಿಕರಿಗೆ ಹಮ್ಮಿಕೊಳ್ಳಾದ ಕ್ರೀಡಾಕೂಟವನ್ನು ಉದ್ಗಾಟಿಸಿ ಮಾತನಾಡಿದರು.
ಗಿಡಮರಗಳು ಆಮ್ಲಜನಕವನ್ನು ಉತ್ಪತ್ತಿ ಮಾಡಲು ಎಷ್ಟು ಮುಖ್ಯವೋ, ಪಟ್ಟಣದಲ್ಲಿ ಸ್ಚಚ್ಚತೆ ಮಾಡಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರು ಅಷ್ಟೆ ಮುಖ್ಯ ಎಂದರು.
ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಪೌರಕಾರ್ಮಿಕರು ದೈಹಿಕವಾಗಿ, ಮಾನಸಿಕವಾಗಿ ಸದೃಡವಾಗಿರಲು ಒಂದಿಷ್ಟು ಉಲ್ಲಾಸವಾಗಿರುಲು ಕ್ರೀಡೆಗಳು ಸಹಕಾರಿಯಾಗುತ್ತದೆ. ಪೌರಕಾರ್ಮಿಕರು ಆರೋಗ್ಯವಂತರಾಗಿದ್ದರೆ ನಗರವನ್ನು ಆರೋಗ್ಯವನ್ನು ಕಾಪಾಡುವುದರ ನಗರವನ್ನು ಸ್ವಚ್ಚವಾಗಿ , ಸುಂದರವಾಗಿ ಇಡಲು ಸಾಧ್ಯವಾಗುತ್ತದೆ.
ಉಪಾಧ್ಯಕ್ಷೆ ಸುನಿತಾ, ಸದಸ್ಯ ಉನಿಕಿಲಿ ಎನ್ಎನ್ಆರ್ ನಾಗರಾಜ್, ಆರೋಗ್ಯ ಅಧಿಕಾರಿ ಕೆ.ಜೆ.ರಮೇಶ್, ಕಂದಾಯ ನಿರೀಕ್ಷಕ ಶಂಕರ್, ಕಚೇರಿ ಸಿಬ್ಬಂದಿ ವರ್ಗದವರಾದ ನಾಗೇಶ್, ಸುರೇಶ್, ಸಂತೋಷ್, ಶಿವಪ್ರಸಾದ್, ಶಾರದ, ಭಾಗ್ಯಮ್ಮ, ಗೌತಮ್, ಮನೋಜ್, ಚಂದು, ವೇದಾಂತ್, ಮುಖಂಡರಾದ ಮಂಜುನಾಥ್,ನವಾಜ್,ಪೌರಕಾರ್ಮಿಕರ ಅಧ್ಯಕ್ಷ ಬಾಲಕೃಷ್ಣ, ಹಾಗು ಪೌರಕಾರ್ಮಿಕರು ಇದ್ದರು.
.
HOLY ROSARY CHURCH, KUNDAPUR – 450 th JUBILEE SOUVENIR 2021
ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ವಾರದ ಆರು ದಿನ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಿಗೆ ಚಾಲನೆ
ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ವಾರದ ಆರು ದಿನ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಿಗೆ ಚಾಲನೆ ಕುಂದಾಪುರ:ರಾಜ್ಯ ಸರಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜಿಂ ಪ್ರೇಮಜೀ ಫೌಂಡೇಶನ್ ಬೆಂಗಳೂರು ಇವರ ಅನುದಾನದ ಸಹಭಾಗಿತ್ವದಲ್ಲಿ ವಾರದ ಆರು ದಿನ ವಿದ್ಯಾರ್ಥಿ ಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಬುಧವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು. ಶಾಲಾ ಸಂಚಾಲಕರೂ,ಕುಂದಾಪುರ ವಲಯದ ಧರ್ಮಗುರು ಅತೀ ವಂ.ಪಾ.ಪೌಲ್ ರೋಗೋ ಚಾಲನೆ ನೀಡಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಶಾಲಾ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಸಿಸ್ಟರ್ ಚೇತನಾ, ಪ್ರೀತಿ ಪಾಯಸ್,ಸ್ಮಿತಾ ಡಿ ಸೋಜಾ,ಸುಶೀಲಾ, ಡೀನಾ ಪಾಯಸ್ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬಾರ್ಕೂರು NJC ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ/ Annual General Meeting of Barkur NJC Alumni Association
ಬಾರ್ಕೂರು: NJC ಬಾರ್ಕೂರ್ ಹಿಂದಿನ ವಿದ್ಯಾರ್ಥಿಗಳು ಒಟ್ಟುಗೂಡುತ್ತಿದ್ದಂತೆ, ಕ್ರಿಯೆಯಲ್ಲಿ ಶ್ರೀಮಂತ ಪರಂಪರೆ: ಒಂದುಗೂಡಿಸಿ, ಪ್ರೇರೇಪಿಸಿ ಮತ್ತು ಸಾಧಿಸಿ….
NJC ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ, 22ನೇ ಸೆಪ್ಟೆಂಬರ್, 2024 ರಂದು ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಿತು. ಶ್ರೀಮತಿ ನಾಗರತ್ನ ಮತ್ತು ಶ್ರೀಮತಿ ಗೌರಿಯವರ ಭಾವಪೂರ್ಣ ಸ್ತೋತ್ರದ ಮೂಲಕ ಸರ್ವಶಕ್ತ ಪ್ರಭುಗಳ ಆಶೀರ್ವಾದವನ್ನು ಕೋರುವ ಮೂಲಕ ಕಾರ್ಯಕ್ರಮವನ್ನು ಪ್ರಾರ್ಥನಾಪೂರ್ವಕವಾಗಿ ಪ್ರಾರಂಭಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ಹರೀಂದ್ರನಾಥ ಶೆಟ್ಟಿಯವರು ಎಲ್ಲಾ ಅತಿಥಿಗಳು ಮತ್ತು ಪ್ರತಿನಿಧಿಗಳನ್ನು ಆತ್ಮೀಯವಾಗಿ ಮತ್ತು ಆತ್ಮೀಯವಾಗಿ ಸ್ವಾಗತಿಸಿದರು.
ನಿವೃತ್ತ ಪ್ರಾಂಶುಪಾಲರಾದ ಶ್ರೀ ಬಾಲಕೃಷ್ಣ ಹೆಗಡೆ ಎನ್ಜೆಸಿ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ವಾರ್ಷಿಕ ವರದಿಯನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಿದರು.
NJC OSA ಯ ಜಂಟಿ ಕಾರ್ಯದರ್ಶಿ ಪ್ರೊ.ಪಿ ಆರ್ಚಿಬಾಲ್ಡ್ ಫುರ್ಟಾಡೊ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು, ಇದನ್ನು ಹಾಜರಿದ್ದ ಸದಸ್ಯರು ಸರಿಯಾಗಿ ಅನುಮೋದಿಸಿದರು.
ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಸಾಮಾನ್ಯವಾಗಿ ಹೆಚ್ಚು ನಿಯಮಿತ ಸಭೆಗಳನ್ನು ನಡೆಸಲು ಒಪ್ಪಿಕೊಂಡರು, ಹಿಂದಿನ ವಿದ್ಯಾರ್ಥಿಗಳನ್ನು ಆಜೀವ ಸದಸ್ಯರನ್ನಾಗಿ ದಾಖಲಿಸಲು ಮತ್ತು ರಾಷ್ಟ್ರೀಯ ಸಂಸ್ಥೆಗಳ ಕಲ್ಯಾಣಕ್ಕಾಗಿ ಹಣವನ್ನು ಸಂಗ್ರಹಿಸಲು ವ್ಯಾಪಕವಾಗಿ ತಲುಪಿದರು. ಸಾಮಾನ್ಯವಾಗಿ ಕಳೆದ ಕೆಲವು ವರ್ಷಗಳಲ್ಲಿ ನಡೆಸಿದ ವಿವಿಧ ಚಟುವಟಿಕೆಗಳು ವಿಶೇಷವಾಗಿ – ಸಮವಸ್ತ್ರಗಳು, ವಿವಿಧ ವಿದ್ಯಾರ್ಥಿವೇತನಗಳು, ಶಿಕ್ಷಕರ ದಿನಾಚರಣೆಗಳು, ವನಮಹೋತ್ಸವ, CET ಮತ್ತು NEET ಕೋರ್ಸ್ಗಳಿಗೆ ಹಣಕಾಸಿನ ನೆರವು ಮತ್ತು ಹೀಗೆ… ಸದಸ್ಯರಲ್ಲಿ ಸಂವಹನವನ್ನು ಸುಧಾರಿಸಲು ವಿವಿಧ ಸಲಹೆಗಳು, ಹೆಚ್ಚಿನ ಕಾರ್ಯಕ್ರಮಗಳೊಂದಿಗೆ ಉತ್ತಮ ಒಳಗೊಳ್ಳುವಿಕೆ ಇತ್ಯಾದಿ. ಎಂಬುದನ್ನೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
NJC OSA ಯ ಡೈನಾಮಿಕ್ ಅಧ್ಯಕ್ಷ ಸಂಕಾಡಿ ಕರುಣಾಕರ ಶೆಟ್ಟಿ ಅವರು ಪ್ರಸ್ತುತ ಮತ್ತು ಮುಂಬರುವ ಶೈಕ್ಷಣಿಕ ವರ್ಷದ ಕಾರ್ಯಕಾರಿ ಮಂಡಳಿಗಳ ಯೋಜನೆ ಮತ್ತು ಪ್ರಕ್ಷೇಪಗಳ ಕುರಿತು ಸುದೀರ್ಘವಾಗಿ ಮಾತನಾಡಿದರು ಮತ್ತು ಅದರ ಯಶಸ್ಸಿಗೆ ಸದಸ್ಯರ ಸಹಕಾರ ಮತ್ತು ಕೊಡುಗೆಯನ್ನು ಕೋರಿದರು. ರಾಷ್ಟ್ರೀಯ ಹೈಸ್ಕೂಲ್ ಮತ್ತು ನಿರ್ದಿಷ್ಟವಾಗಿ ಎನ್ಪಿಯುಸಿ ಮತ್ತು ಸಾಮಾನ್ಯವಾಗಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ನೋಂದಾಯಿಸಿದ ಶ್ಲಾಘನೀಯ ಫಲಿತಾಂಶಗಳನ್ನು ಅವರು ಶ್ಲಾಘಿಸಿದರು. NJC ಬಾರ್ಕೂರಿನ ಮಾಜಿ ಪ್ರಾಂಶುಪಾಲರಾದ ಶ್ರೀ ಬಿ ಸೀತಾರಾಮ ಶೆಟ್ಟಿಯವರು ತಮ್ಮ ಭಾವನೆಗಳನ್ನು ಹಂಚಿಕೊಂಡರು ಮತ್ತು ಸಂಸ್ಥೆಗಳ ಧ್ವಜವನ್ನು ಎತ್ತರದಲ್ಲಿ ಹಾರಲು ಸಂಘವು ಮಾಡುತ್ತಿರುವ ಉತ್ತಮ ಕಾರ್ಯವನ್ನು ಶ್ಲಾಘಿಸಿದರು.
NJC – OSA ಯ ಕೋಶಾಧಿಕಾರಿ, ಶ್ರೀಮತಿ ಜ್ಯೋತಿ ಶೆಟ್ಟಿ ಅವರು ಕಾರ್ಯವೈಖರಿಯನ್ನು ಸೂಕ್ತವಾಗಿ ನಿರೂಪಿಸಿದರು, ಇದು 11.45 ರ ಸುಮಾರಿಗೆ ಮುಕ್ತಾಯಗೊಂಡಿತು, ಅಲ್ಲಿ ಹಾಜರಿದ್ದ ಎಲ್ಲರಿಗೂ ಉಪಾಹಾರವನ್ನು ನೀಡಲಾಯಿತು.
Annual General Meeting of Barkur NJC Alumni Association
As NJC Barkur past students gather together, rich legacy in action: Unite, inspire and achieve….
Annual General Body Meeting of NJC Old Students Association held on Sunday, 22nd September, 2024 in the College Auditorium at 10.30 am. The Programme was given a prayerful start by invoking Almighty Lords blessings by a soulful hymn by Mrs Nagarathna and Mrs Gauri. Mr Harindranath Shetty, the Vice President of the Association extended a cordial and homely welcome to all the guests and delegates.
Retired Principal Mr Balakrishna Hegde the Secretary of the NJC Old Students Association presented the annual report and got it approved unanimously.
Joint Secretary of NJC OSA Prof P Archibald Furtado tabled the annual accounts which were duly approved by the members attended.
The Members exchanged their views and generally agreed to have more regular meetings, reach out extensively to past students to enrol them as life members and raise funds for the welfare of the National Institutions. In general all appreciated various activities conducted during past few years especially – Uniforms, various scholarships, Teachers Day celebrations, Vanamahotsava, financial support towards CET and NEET Courses and so on…Various suggestions for improving communication within the members, better involvement with more events etc too were discussed on this occasion.
Dynamic President of NJC OSA Sankady Karunakar Shetty spoke in length about the Executive Boards plan and projections for ongoing and forth coming academic year and sought members’ cooperation, contribution for its success. He lauded the praiseworthy results registered by the National High School and NPUC in particular and National educational institutions in general. Former Principal of NJC Barkur Mr B Seetharama Shetty shared his feelings and appreciated the good work Association is doing to keep the Institutions flag flying high.
To conclude the Meeting Mr J. Shetty, Vice President proposed heartfelt gratitude’s to all who present in spite of various engagements being Sunday.
Treasurer of NJC – OSA, Mrs Jyothi Shetty aptly anchored the proceedings which were concluded around 11.45 am with refreshments served to all present.
Reported by: P. Archibald Furtado Photographs courtesy: Subhanu Photos, Barkur
ಪಾವುರು ಉಳಿಯ, ರಾಣಿಪುರ ಹಾಗೂ ಉಳ್ಳಾಲ ಹೊಯಿಗೆ ದ್ವೀಪದಲ್ಲಿ ಮರಳುಗಾರಿಕೆಯಿಂದ ದ್ವೀಪನಾಶ
ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವುದಕ್ಕೆ ಶ್ರಮಿಸಿ – ತಹಶೀಲ್ದಾರ್ ಜಿ.ಎನ್.ಸುದೀಂದ್ರ
ಶ್ರೀನಿವಾಸಪುರ : ತಾಲೂಕಿನ ರಾಯಲ್ಪಾಡು ಸಮೀಪ ಇತ್ತೀಚಿಗೆ ಮಹಿಳಾ ಆಯೋಗದ ರಾಜ್ಯಧ್ಯಕ್ಷೆ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡದೆ ಸರ್ಕಾರ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ತಾಲೂಕೂ ಆಡಳಿತವು ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು .
ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವ ವ್ಯವಸ್ಥೆ ಮಾಡುವ ಉದ್ದೇಶದಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶ್ರಮಿಸುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸೂಚಿಸಿದರು.
ರಾಯಲ್ಪಾಡು ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ
ಶನಿವಾರ ತಾಲೂಕು ಆಡಳಿತವತಿಯಿಂದ ಹಮ್ಮಿಕೊಳ್ಳಲಾದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮವು ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ಗ್ರಾಮಕ್ಕೆ ಒಳ್ಳೇಯ ಪರಿಸರವೂ ಸಹ ಇದೆ. ತುಂಬಾ ಯುವಕರು ಮನಸ್ಥಿತಿಗಳು ಬದಲಾವಣೆಗಳು ಆಗಬೇಕಾಗಿದೆ ಇದಕ್ಕೆ ಒಂದಿಷ್ಟು ಎನ್ಜಿಒಗಳ ಸಹ ಯುವಕರ ಮನಸ್ಥಿತಿಗಳ ಬಗ್ಗೆ ಅವಲೋಕಿಸಿ, ಅವರ ಮನಃ ಸ್ಥಿತಿಯನ್ನು ಬದಲಿಸಬೇಕಿದೆ ಎಂದರು.
ಗ್ರಾಮದಲ್ಲಿನ ಮಕ್ಕಳಲ್ಲಿ ಜನಟಿಕ್ಸ್ ಅಥವಾ ನೀರಿನಲ್ಲಿನ ಫ್ಲೋರೈಡ್ ಅಂಶ ಜಾಸ್ತಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಏಳು ಎಂಟು ಜನಕ್ಕೆ ಅಂಗವೈಕಲ್ಯದ ಸಮಸ್ಯೆಗಳು ಇದ್ದು ಅದನ್ನ ಪರಿಶೀಲಿಸಬೇಕಿದೆ.
ಗ್ರಾಮದಲ್ಲಿ ಶೈಕ್ಷಣಿಕವಾಗಿ ಒತ್ತು ನೀಡುತ್ತಿಲ್ಲ .ಕಾರಣ ನೀವು ವಲಸೆಗೆ ಹೋಗುತ್ತೀರಾ ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದರು.
ಆದ್ದರೀವಂದ ಮಕ್ಕಳ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕವಾಗಿ ಪೋತ್ಸಾಹಿಸುವಂತೆ ಮನವಿ ಮಾಡಿದರು. ನಮಗೆ ವ್ಯವಸಾಯಕ್ಕೆ ಬೇಕಾದ ಭೂಮಿಗಳ ದಾಖಲೆಗಳು ಇಲ್ಲವೆಂದು ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಸದರಿಗೆ ಒಂದು ಅರ್ಜಿ ಸಲ್ಲಿಸುವಂತೆ ಹಾಗು ಜಿಲ್ಲಾಧಿಕಾರಿಗಳ , ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು. ನಾವು ನಿಮಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾನೂನು ರೀತ್ಯ ನಮ್ಮಿಂದ ಆಗುವ ಸಹಾಯ ಹಸ್ತವನ್ನ ನೀಡುತ್ತೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ ಸರ್ಕಾರದಿಂದ ಸಿಗುವ ಮೂಲಭೂತ ಸೌಲಭ್ಯಗಳು ಸಿಗುವ ವ್ಯವಸ್ಥೆಯನ್ನ ಮಾಡಿಕೊಡುವುದಾಗಿ ಹಂತ ಹಂತವಾಗಿ ಮಾಡುವುದಾಗಿ ಭರವಸೆ ನೀಡಿದರು.ಗ್ರಾಮದಲ್ಲಿ ಬಹುತೇಕ ಮನೆಗಳು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಮನೆಗಳನ್ನು ಕಟ್ಟಿಕೊಳ್ಳುವಂತೆ ತಿಳಿಸಿ , ಸರ್ಕಾರದಿಂದ ೧ಲಕ್ಷ ೨೫ ಸಾವಿರ, ಉಳಿದ ಕೆಲಸವನ್ನು ನರೇಗಾ ದಿಂದ ಸಿಗುವ ಅನುದಾನವನ್ನು ಬಳಸಿಕೊಂಡು ಮನೆಗಳನ್ನು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಸ್ವಲ್ಪ ಜೀವನದ ಬದಕನ್ನು ಬದಲಾಯಿಸಿಕೊಂಡು, ಪ್ರಸ್ತುತ ದಿನಗಳು ಜೀವನ ಶೈಲಿಯು ಪರಿವರ್ತನೆಯಾಗುತ್ತಿದೆ ಅದರಂತೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುಂವತೆ ಸಲಹೆ ನೀಡಿದರು. ತಮ್ಮ ಮಕ್ಕಳ ಶೈಕ್ಷಣಿಕವಾಗಿ ಬದಲಾಯಿಸಿಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದರು.
ತಹಶೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಸುತ್ತಾಡಿ ಮನೆ ಮನೆಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮಕ್ಕೊಂದು ಕೊಳವೆ ಕೊರಿಸಿಕೊಡುವಂತೆ ಹಾಗು ಅಂಗನವಾಡಿ, ಪ್ರಾಥಮಿಕ ಶಾಲೆಯು ವ್ಯವಸ್ಥಿತವಾಗಿ ನಡೆಸಿಕೊಡಲು, ಕೆಲವರಿಗೆ ವೃದ್ದಾಪ್ಯ ವೇತನ ಇಲ್ಲವೆಂದು ಅದನ್ನ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಆಯೋಗ ಜಿಲ್ಲಾಧ್ಯಕ್ಷೆ ಲಕ್ಷಿ, ಎನ್ಜಿಒ ಶಾಂತಮ್ಮ , ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಪಿಎಸ್ಐ ಯೊಗೇಶ್ ಪಿಡಿಒ ಎನ್.ನರೇಂದ್ರಬಾಬು, ಬಿಐಆರ್ಟಿ. ಜಿ ವಿ ಚಂದ್ರಪ್ಪ ,ಸಿಆರ್ಪಿ ಗಳಾದ ಅಮರನಾಥ್, ವೇಣುಗೋಪಾಲ್, ಇದ್ದರು.
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್ ಭೇಟಿ
ಕೋಲಾರ,ಸೆ.22: ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನದ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವೈ.ಶಿವಕುಮಾರ್ ಅವರನ್ನು ನೇಮಕ ಮಾಡಿದ್ದಂತಹ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್ ಬೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಕ್ಕಲೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ರಾಮಸಂದ್ರ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಅಪ್ಪಸಂದ್ರ ರಘು, ನದೀಂ, ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಮಿತಿ ಸದಸ್ಯ ಗಾಜಲದಿನ್ನೆ ರಮೇಶ್, ಅಚ್ಚಟ್ನಹಳ್ಳಿ ಮನು, ಚಿನ್ನಾಪುರ ನಾರಾಯಣಸ್ವಾಮಿ, ನರಸಾಪುರ ನವೀನ್, ಗಾಜಲದಿನ್ನೆ ನವೀನ್, ಆರೀಫ್ಉಲ್ಲಾ, ಬಿಲ್ಡರ್ ರಮಣಾರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್ ಭೇಟಿ
ಕೋಲಾರ,ಸೆ.22: ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನದ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವೈ.ಶಿವಕುಮಾರ್ ಅವರನ್ನು ನೇಮಕ ಮಾಡಿದ್ದಂತಹ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್ ಬೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಕ್ಕಲೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ರಾಮಸಂದ್ರ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಅಪ್ಪಸಂದ್ರ ರಘು, ನದೀಂ, ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಮಿತಿ ಸದಸ್ಯ ಗಾಜಲದಿನ್ನೆ ರಮೇಶ್, ಅಚ್ಚಟ್ನಹಳ್ಳಿ ಮನು, ಚಿನ್ನಾಪುರ ನಾರಾಯಣಸ್ವಾಮಿ, ನರಸಾಪುರ ನವೀನ್, ಗಾಜಲದಿನ್ನೆ ನವೀನ್, ಆರೀಫ್ಉಲ್ಲಾ, ಬಿಲ್ಡರ್ ರಮಣಾರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.
ಶಿಕ್ಷಕರ ಜೀವ ಇರುವ ತನಕ ಎಲ್ಲಿ ಕಾಣಿಸಿದರೂ ನಮಗೆ ನಮಸ್ಕಾರ ಎಂದು ಹೇಳುವ ವೃತ್ತಿಎಂದರೆ ನಮ್ಮ ಶಿಕ್ಷಕ ವೃತ್ತಿ-ಲಕ್ಷ್ಮೀ ಪ್ರಸನ್ನ
ಶ್ರೀನಿವಾಸಪುರ: ಶಿಕ್ಷಕರ ಜೀವ ಇರುವ ತನಕ ಎಲ್ಲಿ ಕಾಣಿಸಿದರೂ ನಮಗೆ ನಮಸ್ಕಾರ ಎಂದು ಹೇಳುವ ವೃತ್ತಿಎಂದರೆ ನಮ್ಮ ಶಿಕ್ಷಕ ವೃತ್ತಿ ಮಾತ್ರ, ಒಬ್ಬಇಂಜಿನಿಯರ್ ನೀಡುವ ಪ್ಲಾನ್ನಂತೆಕಟ್ಟಡಕಟ್ಟಿದರೆ ಬೀಳಬಹುದು, ಆದರೆಒಬ್ಬ ಶಿಕ್ಷಕ ವಿದ್ಯಾರ್ಥಿಗೆ ವಿಧ್ಯೆಯನ್ನು ನೀಡಿದರೆಆದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲಎಂದು ಸಾಕ್ಷರತಾ ನಿರ್ದೇಶಕಿಯಾದ ಲಕ್ಷ್ಮೀ ಪ್ರಸನ್ನ ತಿಳಿಸಿದರು.
ಕೋಲಾರದಸ್ಕೌಟ್ಸ್ ಭವನದಲ್ಲಿ3191ಕೋಲಾರಜೋನ್ನ 12 ರೋಟರಿಕ್ಲಬ್ ಗಳೊಂದಿಗೆ ಗುರು ಶ್ರೇಷ್ಟ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ 121 ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಲಕ್ಷ್ಮೀ ಪ್ರಸನ್ನ, ಎಷ್ಟೋ ಜನಇಂಜಿನಿಯರ್ಸ್, ವೈಧ್ಯರನ್ನ, ಉದ್ಯೋಗಸ್ಥರನ್ನುತಯಾರು ಮಾಡುವಂತಹ ಶಿಕ್ಷಕ ವೃತ್ತಿಗೆರೋಟರಿ ಸಂಸ್ಥೆಯಿಂದಇಷ್ಟೊಂದು ಶಿಕ್ಷಕರಿಗೆ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆಅಭಾರಿಯಾಗಿದ್ದೇನೆಎಂದರು.
ಜಿಲ್ಲಾಪಾಲಕರಾದ ಸತೀಶ ಮಾಧವನ್ ಮಾತನಾಡಿ, ಈ ಜೋನ್ ನ 121 ಶಿಕ್ಷಕರಿಗೆ ಗುರು ಶ್ರೇಷ್ಟ ಪ್ರಶಸ್ತಿ ಸನ್ಮಾನಕಾರ್ಯಕ್ರಮವನ್ನುರೋಟರಿ ಸಂಸ್ಥೆಯಿಂದಹಮ್ಮಿಕೊಂಡಿರುವುದು ನಮ್ಮ ಭಾಗ್ಯಎಂದರು.
ಶ್ರೀನಿವಾಸಪುರತಾಲ್ಲೂಕಿನ 10 ಶಿಕ್ಷಕರಿಗೆ ಸನ್ಮಾನ
ಶ್ರೀನಿವಾಸಪುರತಾಲ್ಲೂಕಿನ ಹನುಮಂತಪ್ಪಎನ್ಎ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಪುರ, ಮಧುಕುಮಾರ್ಜಿ.ಎಲ್.ಪಿ.ಎಸ್. ಕೊತ್ತಪಲ್ಲಿ, ಮಂಜುನಾಥ್ಹೆಚ್.ಪಿ.ಎಸ್. ಕೊಪ್ಪವಾರಿಪಲ್ಲಿ, ಶ್ರೀಮತಿ ಅನಿತಜಿ.ಎಲ್.ಪಿ.ಎಸ್. ಗೊಟ್ಟಿಕುಂಟೆ, ಶೋಭಾ ಡಿ.ವಿ. ಜಿ.ಎಲ್.ಪಿ.ಎಸ್. ಬೈರಪ್ಪಲ್ಲಿ, ಬಾಲಕೃಷ್ಣರಾವ್ಸರ್ಕಾರಿ ಪ್ರೌಢ ಶಾಲೆ, ನಂಬಿಹಳ್ಳಿ, ಮಂಜುನಾಥ್ದೇವೇಗೌಡನ್ಯಾಷನಲ್ ಹೈಸ್ಕೂಲ್ಯಲ್ದೂರು, ಚೆನ್ನಕೇಶವ ಸರ್ಕಾರಿ ಪ್ರೌಢಶಾಲೆ, ಮುತ್ತಕಪಲ್ಲಿ, ಗಿರೀಶ್ಎಮ್.ಜಿ.ಸರ್ಕಾರಿ ಪದವಿ ಪೂರ್ವಕಾಲೇಜು, ರಾಯಲ್ಪಾಡುಇವರಿಗೆಗುರು ಶ್ರೇಷ್ಟ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿಆರ್.ಐ. ಜೋನ್ನ ಅನೇಕ ಹಿರಿಯರೋಟರಿ ಸದಸ್ಯರು, ಜಿಲ್ಲಾ ಕಾರ್ಯದರ್ಶಿ ಎಸ್.ವಿ. ಸುಧಾಕರ್, ಲಕ್ಷ್ಮೀ ಪ್ರಸನ್ನ, ಅ.ಮು. ಲಕ್ಷ್ಮೀನಾರಾಯಣ್, ಜೋನ್ಗೌರ್ನರ್ರಾಜ್ಕುಮಾರ್, ಶಿವಮೂರ್ತಿ ಎಸ್. ಮೌನಿ, ಪ್ರಸನ್ನ, ರವೀಂದ್ರನಾಥ್,12 ಜಿಲ್ಲಾ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು, ಸದಸ್ಯರು ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಶಿಕ್ಷಕರಕುಟುಂಬವರ್ಗದವರು ಭಾಗವಹಿಸಿದ್ದರು.
ಇದೆ ಸಮಯದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ ಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಹಿರಿಯ ಸದಸ್ಯರಾದರಾಜೇಂದ್ರಪ್ರಸಾದ್, ಕುಲಕರ್ಣಿ, ಹೆಚ್.ಎನ್ ನಾಗೇಶ್, ಅಶೋಕ್, ಸುರೇಶ್ ಕುಮಾರ್ ಸೇರಿದಂತೆಅನೇಕರು ಸದಸ್ಯರು ಭಾಗವಹಿಸಿದ್ದರು.
ದೇವರಾಜು ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರಕ್ಕೆ ಚಾಲನೆ
ಕೋಲಾರ : ಕೊನೆಗೂ ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಒಂದು ಸಂತೋಷದ ಸುದ್ದಿ. ಕೋಲಾರ ಜಿಲ್ಲೆಯಲ್ಲಿ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಲುವಾಗಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣವನ್ನು ಸುರಿದು ಬೆಂಗಳೂರಿನ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಒಂದು ಉತ್ತಮ ಗುಣಮಟ್ಟದ ಮತ್ತು ಉಚಿತ ತರಬೇತಿಯನ್ನು ಜಿಲ್ಲೆಯಲ್ಲಿ ಏಕೆ ಆರಂಭಿಸಬಾರದು ಎಂಬ ಆಲೋಚನೆಯಿಂದ ಬಂದ ಫಲಪ್ರದವೇ ವಿಷನ್ ಕೋಲಾರ. ಈ ಯೋಜನೆ ಅಡಿಯಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಆರ್ಥಿಕವಾಗಿ ಹಿಂದುಳಿದವರ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿಯೇ ರಾಜ್ಯದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ದಿವಂಗತ ಡಿ. ದೇವರಾಜ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗಿದ್ದು, ದೇವರಾಜ್ ಅರಸು ಜನ್ಮದಿನ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಕೋಲಾರ ಶಾಸಕರಾದಂತಹ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಗಳಾದ ಅನಿಲ್ ಕುಮಾರ್ ರವರಿಂದ ಈ ಕೇಂದ್ರವು ಉದ್ಘಾಟನೆಗೊಂಡಿದ್ದು ಇಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ರವರು ಆಗಮಿಸಿ ಪ್ರಾರಂಭಿಸುವ ಸಿದ್ಧತೆಯ ಬಗ್ಗೆ ಪರಿಶೀಲಿಸಿದರು.
ಜಿಲ್ಲಾಧಿಕಾರಿಯವರ ಕನಸಿನ ಕೂಸಾದ ಈ ಯೋಜನೆಯ ಅಕ್ಟೋಬರ್ ಮಾಹೆಯಲ್ಲಿ ಪ್ರಾರಂಭಗೊಳ್ಳಲಿದೆ.
ಏನಿದು ಯೋಜನೆ?
ಕೋಲಾರ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ಆರಂಭಿಸುವುದು. ಜಿಲ್ಲೆಯ ಪ್ರತಿಭಾನ್ವಿತ 70 ವಿದ್ಯಾರ್ಥಿಗಳಿಗೆ ಅವಕಾಶ.
ಆಯ್ಕೆ ಹೇಗೆ??
ಜಿಲ್ಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ರೋಸ್ಟರ್ ಮತ್ತು ಮೆರಿಟ್ ಪದ್ಧತಿ ಅನ್ವಯ ಪ್ರವೇಶ ಪರೀಕ್ಷೆಯನ್ನು ನಡೆಸಿ 70 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು.
ತರಭೇತಿ ಹೇಗೆ??
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಅಧ್ಯಯನ ಕೇಂದ್ರವನ್ನು ಬಳಸಿಕೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾದ ಪುಸ್ತಕಗಳನ್ನು ಒಳಗೊಂಡಿರುವ ಗ್ರಂಥಾಲಯ ಬಳಸಿಕೊಳ್ಳುವುದು, ಹಾಗೂ ಪ್ರತಿನಿತ್ಯ ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಂಡು ಇರುವಂತಹ ಅಧಿಕಾರಿ ವರ್ಗದವರಾದ ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು ತಹಸಿಲ್ದಾರ್ಗಳು, ಜಿಲ್ಲಾ ಮಟ್ಟದ ಮತ್ತು ವಿವಿಧ ತಾಲೂಕು ಮಟ್ಟದ ಅಧಿಕಾರಿಗಳಿಂದ, ಉಪನ್ಯಾಸಕರು ಮತ್ತು ಪ್ರಾಧ್ಯಾಪಕರುಗಳಿಂದ ದಿನನಿತ್ಯ ಮಾರ್ಗದರ್ಶನ ಮತ್ತು ತರಗತಿಗಳನ್ನು ನಡೆಸುವುದು.
ಇದಲ್ಲದೆ ರಾಜ್ಯದ ಹೆಸರಾಂತ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸಾಮಾನ್ಯ ಅಧ್ಯಯನ, ಇತಿಹಾಸ ಭೂಗೋಳ, ಮೆಂಟಲ್ ಎಬಿಲಿಟಿ, ತಾರ್ಕಿಕ ಸಾಮರ್ಥ್ಯ, ಪ್ರಚಲಿತ ಘಟನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಮತ್ತು ಕಾರ್ಯಕ್ರಮಗಳು ಇಂತಹ ಮತ್ತು ಅನೇಕ ವಿಷಯಗಳಿಗೆ ತರಗತಿಗಳನ್ನು ನಡೆಸುವುದು.
“ವಿಷನ್ ಕೋಲಾರ ಎಂಬುದು ಜಿಲ್ಲೆಯ ಒಂದು ವಿನೂತನ ಪ್ರಯತ್ನವಾಗಿದ್ದು, ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಅತ್ಯದ್ಭುತ ಮತ್ತು ಪರಿಣಾಮಕಾರಿ ಉಪಕ್ರಮವಾಗಲಿದೆ. ಇದರಿಂದಾಗಿ ಜಿಲ್ಲೆಯ ಸ್ಪರ್ಧಾ ಕಾಂಶಿ ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳಲ್ಲಿ ಹೆಚ್ಚೆಚ್ಚು ತೆರ್ಗಡೆಗೊಂಡು ಜಿಲ್ಲೆಯ ಕೀರ್ತಿಪತಾಕೆ ಹಾರಿಸಲಿದ್ದಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದೇವೆ ۲۲
ಅಕ್ರಂಪಾಷ ಜಿಲ್ಲಾಧಿಕಾರಿ
” ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವು ವರ್ಷದಲ್ಲಿ ನಿರಂತರವಾಗಿ ನಡೆಯಲಿದ್ದು ಮೂರು ತಿಂಗಳಿಗೆ 70 ವಿದ್ಯಾರ್ಥಿಗಳ ಒಂದು ಬ್ಯಾಟ್ನಂತೆ ವರ್ಷದಲ್ಲಿ ಮೂರು ಬ್ಯಾಟ್ಗಳನ್ನು ತರಬೇತಿಗಾಗಿ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯದ ಶ್ರೀ ಮುರಳಿರವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯದ ಶ್ರೀಮತಿ ಗೀತಾ ರವರು ಮಾತನಾಡಿ ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವು ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿರಲಿದ್ದು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಬಳಸಿಕೊಳ್ಳಲು ಕೋರಿದರು.