HOLY ROSARY CHURCH, KUNDAPUR – 450 th JUBILEE SOUVENIR 2021

ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜನಾಂಗಕ್ಕೆ ಬೇಕಾದವರು :ವೈ.ಎ.ನಾರಾಯಣಸ್ವಾಮಿ

ಶ್ರೀನಿವಾಸಪುರ 1 : ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜನಾಂಗಕ್ಕೆ ಬೇಕಾದವರು ಆದ್ದರಿಂದ ತಾಲ್ಲೂಕಿನ ಎಲ್ಲಾ ಜನಾಂಗದವರು ಪಕ್ಷಾತೀತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕು ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಬಾವಿ ಸಭೆಯಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಗೆ ಮೃತ್ತಿಕೆ ಸಂಗ್ರಹ ಅಭಿಯಾನದ ಬಗ್ಗೆ ಮಾತನಾಡಿದರು.
ಇದೇ ತಿಂಗಳು 29.30 ರಂದು ತಾಲೂಕಿನ 5 ಹೋಬಳಿ ಕೇಂದ್ರಗಳಲ್ಲಿ ರಥವು ಸಂಚರಿಸಿ ಅಲ್ಲಿನ ಮೃತ್ತಿಕೆಯನ್ನು ಸಂಗ್ರಹಕ್ಕಾಗಿ ಬರುತ್ತಿದ್ದು, ಆಯಾ ಆಯಾ ಹೋಬಳಿ ಕೇಂದ್ರದಲ್ಲಿ 50 ಜನ ಮಾತೆಯರು ಪೂರ್ಣಕುಂಭಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸುವ ಕಾರ್ಯಕ್ರವನ್ನು ಸ್ಥಳೀಯ ಅಧಿಕಾರಿಗಳ ಜವಾಬ್ದಾರಿ ವಹಿಸಬೇಕು.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದವರು, ಸ್ಥಳೀಯ ಆಶಾಕಾರ್ಯಕರ್ತೆಯರು, ಅಂಗನವಾಡಿ, ಕಾರ್ಯಕರ್ತೆಯರು, ಎನ್‍ಜಿಓ, ಮಾಜಿಸೈನಿಕರು, ಸಂಘ ಸಂಸ್ಥೆಗಳು ಹಾಗೂ ಪಕ್ಷಾತೀತವಾಗಿ ಜನಪ್ರತಿನಿದಿಗಳ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜಿಲ್ಲೆಯಲ್ಲಿಯೇ ತಾಲ್ಲೂಕಿನ ಕಾರ್ಯಕ್ರಮವು ಮಾದರಿಯಾಗಿರಬೇಕು ಎಂದರು.
ಅಲ್ಲದೆ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮವೊಂದನ್ನ ರೂಪಿಸುವ ಕಾರ್ಯಕ್ರಮವನ್ನು ಸ್ಥಳೀಯ ಅಧಿಕಾರಿಗಳು ಹಮ್ಮಿಕೊಳ್ಳಬೇಕು. ಅಲ್ಲದೆ ಕಾರ್ಯಕ್ರಮಕ್ಕೆ ಹೆಚ್ಚು ಸಾರ್ವಜನಿಕರು ಸೇರುವಂತೆ ಅಗತ್ಯ ಪ್ರಚಾರವನ್ನು ಹಮ್ಮಿಕೊಳ್ಳಬೇಕು. ಈ ಕೆಲಸವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಇಒ, ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು, ಶಿಶುಅಭಿವೃದ್ಧಿ ಯೋಜನಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗುಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ತಹಶೀಲ್ದಾರ್ ಶರೀನಾತಾಜ್, ಇಒ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಮ್, ತಾಲೂಕಿನ ಎಲ್ಲಾ ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಅನ್ಯ ಭಾಷೆಗಳ ಪ್ರಭಾವ ಇರುವ ಗಡಿ ಭಾಗದ ಜನರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಅನ್ಯ ಭಾಷೆಗಳ ಪ್ರಭಾವ ಇರುವ ಗಡಿ ಭಾಗದ ಜನರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತಿ ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡ ಒಂದು ಸುಂದರ ಹಾಗೂ ಶಕ್ತಿಯುತ ಭಾಷೆಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ನಮ್ಮ ಸುಂದರ ಹಾಗೂ ಅರ್ಥಗರ್ಭಿತ ನಾಡಗೀತೆ ನಾಡಿನ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ನಾಡಗೀತೆ ಗಾಯನದ ಮೂಲಕ ಕನ್ನಡ ಕಂಪು ಪಸರಿಸಬೇಕು. ಗೀತೆಯ ಆಶಯಕ್ಕೆ ತಕ್ಕಂತೆ ನಡೆಯಬೇಕು. ಆಗ ಸರ್ವ ಜನಾಂಗದ ಶಾಂತಿಯ ತೋಟ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು. ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಪದಾಧಿಕಾರಿಗಳು ಧ್ವನಿಗೂಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಂಜುನಾಥ್, ಪ್ರಾಂಶುಪಾಲ ಪ್ರಾಣೇಶ್, ಅಧಿಕಾರಿಗಳಾದ ಕೃಷ್ಣಪ್ಪ, ಜಯರಾಂ, ಬಾಬು, ಬಿ.ವಿ.ಮುನಿರೆಡ್ಡಿ, ಎಂ.ಶ್ರೀನಿವಾಸನ್, ಡಾ. ಮಂಜುನಾಥರೆಡ್ಡಿ ಮತ್ತಿತರರು ಇದ್ದರು.
ಕೋಟಿ ಕಂಠ ಗಾಯನ: ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಕೋಟಿ ಕಂಠ ಗಾಯನಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧ್ವನಿಗೂಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ದೀಪಾವಳಿ ದೀಪಾಂಜಲಿ ಕಾರ್ಯಕ್ರಮ


ಕುಂದಾಪುರ, ಅ. 29: ‘ಅಜ್ಞಾನ ಎಂಬುದು ತೊಲಗಿ ಜ್ಞಾನ ಎಂಬ ಜ್ಯೋತಿ ನಮ್ಮಲ್ಲಿ ಬೆಳಗಬೇಕು, ಕೆಟ್ಟದನ್ನು ಬಿಟ್ಟು ಒಳ್ಳೆದನ್ನು ಆರಂಭಿಸಬೇಕು, ದುಷ್ಟತನಕ್ಕೆ ಸೋಲುಂಟಾಗಿ, ಒಳ್ಳೆತನಕ್ಕೆ ಜಯವಾಗಬೇಕು, ಹಿಂದೆ ನಾವೆಲ್ಲ ಎಲ್ಲರೂ ಒಟ್ಟಾಗಿ ದೀಪಾವಳಿ ಆಚರಿಸುತಿದ್ದೇವು, ಸಿಹಿ ತಿಂಡಿಗಳಿಗೆ ಕಾತರಿಸುತ್ತೀದ್ದೆವು, ಯೇಸು ಸ್ವಾಮಿ ಹೇಳಿದ್ದನು, ನಿನ್ನ ದೀಪವನ್ನು ಪೆಟ್ಟಿಗೆಯಲ್ಲಿ ಅವಿತಿಡಬೇಡ, ಎತ್ತರದ ಜಾಗದಲ್ಲಿಟ್ಟು ಎಲ್ಲರೂ ಅದರ ಬೆಳಕು ಸಿಗುವಂಗಾಗಬೇಕೆಂದು, ಹೀಗೆ ನಾವೆಲ್ಲರೂ ಜಗತ್ತಿನ ದೀಪಗಾಬೇಕು” ಎಂದು ಕುಂದಾಪುರ ವಲಯ ಪ್ರಧಾನ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.
ಅವರು ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ದೀಪವಾಳಿ ಪ್ರಯುಕ್ತ ಕುಂದಾಪುರ ಸಂತ ಮೇರಿಸ್ ಶಾಲಾ ಪ್ರಾಂಗಣದಲ್ಲಿ ನಡೆದಲ್ಲಿ ಅ.28 ರಂದು ಭಾವೈಕ್ಯದ ದೀಪಾಂಜಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ ಮಾತನಾಡಿ “ಈ ಬೆಳಕಿನ ಹಬ್ಬ ದ್ವೇಷ ಮೋಸ ಎಂಬ ಕತ್ತಲನ್ನು ಕರಗಿಸಬೇಕು, ಮನ ಕುಲದಲ್ಲಿ ಪ್ರೀತಿ ಮಮತೆಯ ಸಹಬಾಳ್ವೆಯ ಬೆಳಕು ಬೆಳಗಬೇಕು, ಭಾರತ ಒಂದಾಗಲಿ ಐಕ್ಯತೆ ನಮ್ಮ ಮಂತ್ರವಾಗಲಿ, ನಮ್ಮ ನೆಡಿಗೆ ಕತ್ತಲೆಯಿಂದ ಬೆಳಕಿನಡೆ ಸಾಗಲಿ, ಎಲ್ಲಾ ಮನುಷರಲ್ಲಿ ಒಳೆದು ಇದೆ ಕೆಟ್ಟದು ಇದೆ, ಆದರೆ ನಾವು ಕೆಟ್ಟದನ್ನು ಸೋಲಿಸುವಂತರಾಗಬೇಕು, ನಮ್ಮ ವಿಜಯದ ಸಂಕೇತ ಒಳ್ಳೆದಾಗಿರಲಿ, ನಾವೆಲ್ಲಾ ಮಾನವೀಯತೆಯನು ಹಂಚಿಕೊಳ್ಳೋಣ, ನಮ್ಮ ಮನೆ, ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ಪ್ರಪಂಚ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿ ಬರಬೇಕು” ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಪೋಷಕ ಸಮಾಜ ಸೇವಕ ಉದ್ಯಮಿ ಮಂಜೀತ್ ನಾಗರಾಜ್, ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯೊಳಗೆ ಹಣತೆ ಜೊತೆ ಮತ್ತು ಭಾವಚಿತ್ರ ಸ್ಪಧೆಯ ವಿಜೇತರಿಗೆ ಬಹುಮಾನ ನೀಡಿ “ದೀಪಾವಳಿಗೊಂದು ಅರ್ಥವಿದೆ, ಪಟಾಕಿ ಅಂದರೆ ನಮ್ಮೊಳಗಿನ ಕೆಟ್ಟತನ ದುಷ್ಟತನ ಪಟಾಕಿಯಂತೆ ಸಿಡಿದು ಹೋರ ನಡೆಯಬೇಕು, ದೀಪಾವಳಿ ಸಮಯದ ಸಿಹಿತಿಂಡಿಗಳಿಗೂ ಅದರದೇ ಆದ ಅರ್ಥವಿದೆಯೆಂದು’ ಅವರು ತಿಳಿಸಿದರು. ಹಣತೆ ಜೊತೆ ಭಾವಚಿತ್ರದ ಸ್ಪಧೆಯಲ್ಲಿ ನಿಶಾ ಮತ್ತು ಕುಟುಂಬ ಪ್ರಥಮ, ಜಯಶೀಲ ಕೆ. ಮತ್ತು ತಂಡ ದ್ವೀತಿಯ ಮತ್ತು ಜೆ.ಸಿ.ಐ. ಸಿಟಿ ಬೈಂದೂರು ತ್ರತೀಯ ಬಹುಮಾನ ಪಡೆದರು. ಇನ್ನು ಹಲವು ಸಮಾಧಾಕರ ಬಹುಮಾನಗಳು ಮತ್ತು ಕಿರು ಅಟಗಳ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಎಸ್.ಪಿ. ಮ್ಯುಜಿಕಲ್ ಹರೀಶ್ ಕಂಚುಗೋಡು, ದೀಕ್ಷಾ ಬ್ರಹ್ಮವರ, ಸುರಕ್ಷಾ ಕಂಚುಗೋಡು, ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಮನೋರಂಜನಾ ನಿರೂಪಣೆಯನ್ನು ಶ್ರೀಶ ಆಚಾರ್ಯ ನಡೆಸಿಕೊಟ್ಟರು.
ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷೆ ಶಾಂತಿ ಪಿರೇರಾ ಸ್ವಾಗತಿಸಿದರು, ವಿನೋದ್ ಕ್ರಾಸ್ಟೊ, ಡಾ|ಸೋನಿ ಡಿಕೋಸ್ತಾ, ವಿಲ್ಸನ್ ಡಿ ಆಲ್ಮೇಡಾ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು, ಕಾರ್ಯಕ್ರಮದ ಸಂಚಾಲಕ ಅಲ್ಡ್ರಿನ್ ಡಿಸೋಜಾ ನಿರೂಪಿಸಿದರು.

ಖ್ಯಾತ ಕ್ರಿಕೆಟ್ ಕ್ರೀಡಾ ಪಟು ಗಣೇಶ್ ನಾವಡ ನಿಧನ

ಕುಂದಾಪುರ : ಸ್ಥಳೀಯ ರಾಮ ಮಂದಿರ ರಸ್ತೆಯ ನಿವಾಸಿ ಗಣೇಶ್ ನಾವಡ(64 ) ಅವರು ಅಲ್ಪ ಕಾಲದ ಅಸೌಖ್ಯದಿಂದ ದಿ.27.10 22ರ ಗುರುವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಎಸ್.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಾಗಿದ್ದ ಇವರು ಜಿಲ್ಲೆಯ ಹಲವೆಡೆ ಸೇವೆ ಸಲ್ಲಿಸಿದ್ದರು.ರಾಜ್ಯದ ಖ್ಯಾತ ಕ್ರಿಕೆಟ್ ತಂಡ ಚಕ್ರವರ್ತಿ ಯ ಮಾಜಿ ಸ್ಪಿನ್ನರ್ ಆಗಿದ್ದ ಇವರು ಚಕ್ರವರ್ತಿ ತಂಡದ ಯಶಸ್ವಿನಲ್ಲಿ ಗಣನೀಯ ಪಾತ್ರ ವಹಿಸಿದ್ದರು. ಮೃತರು ಪತ್ನಿ,ತಾಯಿ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಗಣೇಶ್ ನಾವಡರು ಸಂತ ಮೇರಿಸ್ ಪ್ರೌಢಶಾಲೆಯ ಮತ್ತು ಭಂಡಾರಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಪ್ರೌಢಶಾಲೆಯಲ್ಲಿರುವಾಗಲೇ ಅವರು ಉತ್ತಮ ಕ್ರಿಕೆಟರ್ ಆಗಿದ್ದರು. ತಾಲೂಕು ಮಟ್ಟದ ಕ್ರಿಕೆಟ್ ಕೂಟದಲ್ಲಿ ನಿರಂತರ ಎರಡು ವರ್ಷ, ಪ್ರಸ್ತೂತ ಜನನುಡಿ ಡಾಟ್ ಕಾಮ್ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಜೊತೆ ಕ್ರಿಕೆಟ್ ನಲ್ಲಿ ಉತ್ತಮ ವೇಗದ ಬೌಲರ್ ಆಗಿ ಆಡಿ ಹೆಸರು ಗಳಿಸಿದ್ದರು. ಮುಂದೆ ಕಾಲೇಜ್ ಜೀವನದಲ್ಲಿ ಕೂಡ ಉತ್ತಮ ಕ್ರಿಕೆಟರ್ ಆಗಿ ಹೆಸರು ಗಳಿಸಿ, ಚಕ್ರವರ್ತಿ ಕ್ಲಬಿಗೆ ಸೇರಿ ಖ್ಯಾತರಾದರು.

ಜನನುಡಿ ಡಾಟ್ ಕಾಮ್ ಸಂಸ್ಥೆ ಗಣೇಶ್ ನಾವಡರ ಕುಟುಂಬಕ್ಕೆ ಸಾಂತ್ವಾನ ಬಯಸುತ್ತದೆ ಮತ್ತುವರ ಆತ್ಮಕ್ಕೆ ಶಾಂತಿ ಕೋರಿ, ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ.

ಹೋಲಿ ರೋಸರಿ ಚರ್ಚ್ ಅಲಂಗಾರ್ ನಲ್ಲಿ ಪ್ರತಿಭಾ ಪುರಸ್ಕಾರ

ರಾಜ್ಯ ಮಟ್ಟದಲ್ಲಿ ಕ್ರೀಡಾ ಗಾಯನ ಮತ್ತು ಅಧ್ಯಯನ ಕ್ಷೇತ್ರದಲ್ಲಿ 7 ಸಾಧಕರು ಮತ್ತು ಎಸ್‌ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದ 28 ಟಾಪರ್‌ಗಳನ್ನು ಸನ್ಮಾನಿಸಲಾಯಿತು.ಚರ್ಚಿನ ಧರ್ಮಗುರು ವಂ| ವಾಲ್ಟರ್ ಡಿಸೋಜಾ 21 ಆಯೋಗಗಳ ಸಂಯೋಜಕ ಶ್ರೀ ರಾಜೇಶ್ ಡಿಸೋಜ, ಪಾಲನ ಮಂಡಳಿ.ಕಾರ್ಯದರ್ಶಿ ಶ್ರೀಮತಿ ಮೇಬಲ್ ಲೋಬೋ ಉಪಸ್ಥಿತರಿದ್ದರು ಶಿಕ್ಷಣ ಆಯೋಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶ್ರೀ ವಿನೋದ್ ಡಿಎಸ್‌ಎ ಸ್ವಾಗತಿಸಿದರು,  ಶ್ರೀ ಗ್ಲಾನಿಶ್ ಮಾರ್ಟಿಸ್ ಮತ್ತು ಕು. ಅಶ್ವಿನಿ ಡಿಸೋಜಾ ಅವರು ಸನ್ಮಾನಿತರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಶ್ರೀ ಎರಿಕ್ ಲೋಬೋ ನಿರೂಪಿಸಿದರು.

ಗುರುಭವನ ನಿರ್ಮಾಣಕ್ಕಾಗಿ 5 ಹಳೆ ಕಟ್ಟಡಗಳ ನೆಲಸಮ ಆರಂಭ
ಶಿಕ್ಷಕರ ಬಹುನಿರೀಕ್ಷಿತ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ-ಕೃಷ್ಣಮೂರ್ತಿ

ಕೋಲಾರ:- ಗುರುಭವನ ನಿರ್ಮಿಸಲು ಉದ್ದೇಶಿಸಿರುವ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಐದು ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವ ಹಿನ್ನಲೆಯಲ್ಲಿ ನೆಲಸಮಗೊಳಿಸಲು ಕ್ರಮ ಕೈಗೊಂಡಿದ್ದು, ಗುರುಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಸಿದ್ದಗೊಳಿಸಲಾಗುತ್ತಿದೆ ಎಂದು ಗುರುಭವನ ಸಮಿತಿ ಅಧ್ಯಕ್ಷರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ನಗರದ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಹಳೆ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ಕಾರ್ಯವನ್ನು ವೀಕ್ಷಿಸಿದ ನಂತರ ಅವರು ಮಾತನಾಡುತ್ತಿದ್ದರು.
ಗುರುಭವನ ನಿರ್ಮಾಣ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಸಂಸದ ಎಸ್.,ಮುನಿಸ್ವಾಮಿ,ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಹಲವು ಶಾಸಕರು ತಮ್ಮ ಶಾಸಕರ ನಿಧಿಯಿಂದ ಅನುದಾನ ನೀಡಲು ಮುಂದೆ ಬಂದಿದ್ದಾರೆ ಎಂದರು.
ಗುರುಭವನಕ್ಕಾಗಿ ಈ ಜಾಗದಲ್ಲಿ ಉತ್ತರ ದಕ್ಷಿಣ 145 ಅಡಿ ಹಾಗೂ ಪೂರ್ವ,ಪಶ್ಚಿಮ-80 ಅಡಿಗಳ ನಿವೇಶನ ವಿಂಗಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅತಿ ಶೀಘ್ರ ಶಿಲಾನ್ಯಾಸ ನಡೆಸುವ ಕುರಿತು ಗುರುಭವನ ಸಮಿತಿ ಪ್ರಯತ್ನ ಮುಂದುವರೆಸಿದೆ ಎಂದರು.
ನೆಲಸಮಗೊಳಿಸುತ್ತಿರುವ ಕಟ್ಟಡದಲ್ಲಿನ ಬಾಗಿಲು, ಕಿಟಕಿಗಳನ್ನು ಅರಣ್ಯ ಇಲಾಖೆ ಬೆಲೆ ನಿಗಧಿ ಮಾಡಿದ ನಂತರ ಹರಾಜು ಹಾಕಲು ಕ್ರಮವಹಿಸುವುದಾಗಿ ತಿಳಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಂತೆ ಕೋಲಾರದಲ್ಲೂ ಅತಿ ಶೀಘ್ರ ಭವನ ನಿರ್ಮಾಣವಾಗಲಿ ಎಂದು ಆಶಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಈ ಸಂಬಂಧ ಮಾಹಿತಿ ನೀಡಿ, ಗುತ್ತಿಗೆದಾರರಾದ ಮಮತಾ ಕೋಂ ಮುನೇಶ್ ಅವರು ಕಟ್ಟಡದ ನೆಲಸಮ ಗುತ್ತಿಗೆ ಪಡೆದಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಈ ಕಾರ್ಯ ಮುಗಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಗುರುಭವನ ನಿರ್ಮಾಣ ಈ ಜಿಲ್ಲೆಯ ಎಲ್ಲಾ ಶಿಕ್ಷಕರ ಆಶಯವಾಗಿದ್ದು, ಈಗಾಗಲೇ ತಡವಾಗಿದೆ, ನಮ್ಮ ಅವಧಿಯಲ್ಲಿ ಗುರುಭವನ ನಿರ್ಮಿಸಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದು, ವಿಧಾನಪರಿಷತ್,ವಿಧಾನಸಭಾ ಸದಸ್ಯರು, ಸಂಸದರ ನಿಧಿ ಸೇರಿದಂತೆ ಹಣ ಕ್ರೋಢೀಕರಿಸಲು ಪ್ರಯತ್ನ ಮುಂದುವರೆಸಿರುವುದಾಗಿ ತಿಳಿಸಿದರು.
ಗುರುಭವನ ಸಮಿತಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಡಯಟ್ ಪ್ರಾಂಶುಪಾಲರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ,ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಸದಸ್ಯರಾಗಿ ಬಿಇಒ ಕನ್ನಯ್ಯ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್,ಶಿಕ್ಷಕರ ಸಂಘದ ಮಹಿಳಾ ಪ್ರತಿನಿಧಿ ಚಾಮುಂಡೇಶ್ವರಿ ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಶಿಕ್ಷಕ ಸಂಘಟನೆಗಳ ಮುಖಂಡರಾದ ಅಪ್ಪೇಗೌಡ, ಎಂ.ನಾಗರಾಜ್, ಶಿವಕುಮಾರ್, ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀರಾಮ್,ಮುಖ್ಯಶಿಕ್ಷಕರ ಸಂಘದ ಖಜಾಂಚಿ ರವಿ, ಟಿ.ಎಲ್.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

ಸಾಮಾಜಿಕ ಕಾಳಜಿಯ ನೆರವಿಗೆ ಕೋಚಿಮುಲ್‍ನಿಂದ 12 ಕೋಟಿ ದತ್ತಿ ನಿಧಿ
ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರ್ಣ ಸಹಕಾರ-ಕೆ.ವೈ.ನಂಜೇಗೌಡ

ಕೋಲಾರ:- ಹಾಲು ಒಕ್ಕೂಟ ಸಾಮಾಜಿಕ ಕಾರ್ಯಗಳಿಗಾಗಿಯೇ 12 ಕೋಟಿ ದತ್ತಿ ನಿಧಿ ಸ್ಥಾಪಿಸಿದ್ದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹಾಗೂ ಹಾಲು ಉತ್ಪಾದಕರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ಒದಗಿಸಲು ಸಿದ್ದವಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕೋಚಿಮುಲ್‍ನಿಂದ ಮುದ್ರಿಸಿ ಹೊರ ತಂದಿರುವ ನನ್ನನ್ನೊಮ್ಮೆ ಗಮನಿಸಿ'ಪ್ರಶ್ನೋತ್ತರ ಕೋಠಿ,ಚಿತ್ರಬಿಡಿಸು ಅಂಕಗಳಿಸು’ , ಕನ್ನಡ,ಇಂಗ್ಲೀಷ್, ಉರ್ದು ಮಾಧ್ಯಮದ ಅಭ್ಯಾಸಹಾಳೆಗಳು ಸೇರಿದಂತೆ ಒಟ್ಟು 17 ಶೀರ್ಷಿಕೆಯ ಪುಸ್ತಕಗಳನ್ನು ಬಿಡುಗಡೆ ಮಾಡಿ, ಶಾಲೆಗಳಿಗೆ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.


ರೈತರ ಮಕ್ಕಳಿಗೆ ನಿರಂತರ ಪ್ರೋತ್ಸಾಹ


ಕೋಚಿಮುಲ್ ಹಾಲು ಉತ್ಪಾದಕರ ಮಕ್ಕಳಿಗೆ ವಿಶೇಷವಾಗಿ ವಿದ್ಯಾರ್ಥಿವೇತನ ನೀಡುತ್ತಿದ್ದು, ಎಸ್ಸೆಸ್ಸೆಲ್ಸಿ ಸಾಧಕರಿಗೆ ತಲಾ 5 ಸಾವಿರ, ಪಿಯುಸಿ ಸಾಧಕರಿಗೆ ತಲಾ 7.500, ವೈದ್ಯಕೀಯ ವಿದ್ಯಾರ್ಥಿಗಳಿಗೆ 25 ಸಾವಿರ, ಇಂಜಿನಿಯರಿಂಗ್ ಮತ್ತು ಪದವಿ ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂ ಹಾಗೂ ಐಎಎಸ್,ಕೆಎಎಸ್ ಆಕಾಂಕ್ಷಿಗಳಿಗೆ 50 ಸಾವಿರ ನೆರವು ನೀಡುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಯಲಹಂಕದಲ್ಲಿ ಈಗಾಗಲೇ ಅವಿಭಜಿತ ಜಿಲ್ಲೆಯ ಶಿಕ್ಷಣಾರ್ಥಿಗಳಿಗಾಗಿ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ನಿವೇಶನವನ್ನು ಸರ್ಕಾರ ಒದಗಿಸಿದೆ ಎಂದರು.


100 ಕೋಟಿ ರೂ ಅಭಿವೃದ್ದಿ ನಿಧಿ


ಕೋಚಿಮುಲ್‍ನಲ್ಲಿ 100ಕೋಟಿ ರೂಗಳ ಅಭಿವೃದ್ದಿ ನಿಧಿ ಇಟ್ಟಿದ್ದೇವೆ, ಎಂವಿಕೆ ಡೇರಿ ಸ್ಥಾಪಿಸುವ ಯತ್ನ ಮುಂದುವರೆದಿದೆ ಎಂದ ಅವರು, ತಾಲ್ಲೂಕು ಹಂತದಲ್ಲಿ ಶಿಬಿರಕಚೇರಿ, ಎಂಪಿಸಿಎಸ್‍ಗಳಿಗೆ ನೂತನ ಕಟ್ಟಡ, ರಾಸು ಸತ್ತರೆ 75 ಸಾವಿರ ರೂ ವಿಮೆ ಮತ್ತಿತರ ಸಾಮಾಜಿಕ ಕಾರ್ಯಗಳಿಗೂ ಸಿದ್ದವಿದ್ದೇವೆ ಎಂದರು.


ಎಸ್ಸೆಸ್ಸೆಲ್ಸಿ ಫಲಿತಾಂಶಮೊದಲ ಸ್ಥಾನಕ್ಕೆ ತನ್ನಿ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವೆಂಕಟರಾಜಾ, ಕಳೆದ ವರ್ಷ ಫೆಬ್ರವರಿಯಲ್ಲಿ ಈ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿದ್ದು, ಶೇ.94ರಷ್ಟು ಫಲಿತಾಂಶದ ಸಾಧನೆ ಮಾಡಿದ್ದೀರಿ, ಈಬಾರಿ ಅತಿ ಬೇಗ ಮಕ್ಕಳಿಗೆ ಒದಗಿಸುತ್ತಿದ್ದು, ಈ ಪುಸ್ತಕಗಳನ್ನು ಪರಿಣಾಮಕಾರಿಯಾಗಿ ಶಾಲೆಗಳಲ್ಲಿ ಬಳಸುವಂತೆಮಾಡಿ ಜಿಲ್ಲೆಯನ್ನು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಲ್ಲಿ ಮಾಡುತ್ತಿರುವ ಕಾರ್ಯ ಬೇರೆ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಜಿಪಂ ಸಿಇಒ ಯುಕೇಶ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಸರ್ಕಾರದ ಕಾರ್ಯಕ್ರಮಗಳಿಗೆ ಕೋಚಿಮುಲ್ ನೀಡುತ್ತಿರುವ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ ಅವರು, ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸಂಪನ್ಮೂಲ ಶಿಕ್ಷಕರು ತಯಾರಿಸಿರುವ ಈ ಪುಸ್ತಕಗಳು ಪರಿಣಾಮಕಾರಿಯಾಗಿ ಬಳಕೆಯಾಗಲಿ, ಇದರಿಂದ ಜಿಲ್ಲೆಯ ಫಲಿತಾಂಶ ಮತ್ತಷ್ಟು ಉತ್ತಮವಾಗಲಿ ಎಂದರು.
ಕಾರ್ಪೋರೇಟ್ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಕೋಚಿಮುಲ್ ಜಿಲ್ಲೆಯ ಮಕ್ಕಳಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಈ ಬಾರಿ ಮತ್ತಷ್ಟು ಸಾಧನೆ ಮಾಡಲಿ, ಗುಣಾತ್ಮಕತೆಗೆ ಒತ್ತು ಸಿಗಲಿ ಎಂದು ತಿಳಿಸಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಿ ಎಂದರು.
ಡಿಡಿಪಿಐ ಕೃಷ್ಣಮೂರ್ತಿ ಸ್ವಾಗತಿಸಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಘನತೆ ಎತ್ತಿ ಹಿಡಿಯಲು ಇಲಾಖೆ ಜತೆ ಎಲ್ಲಾ ಶಿಕ್ಷಕರು ಶ್ರಮಿಸುತ್ತಿದ್ದಾರೆ, ವಿಶೇಷ ತರಗತಿಗಳು ನಡೆಯುತ್ತಿವೆ, ಈ ಬಾರಿ ಬೇಗ ಮಕ್ಕಳಿಗೆ ಈ ಸಂಪನ್ಮೂಲ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.
ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಾಲೆಗಳಲ್ಲಿ ಮಕ್ಕಳಿಗೆ ಇಲಾಖೆ ನೀಡಿರುವ ಈ ಪುಸ್ತಕ ಪರಿಣಾಮಕಾರಿಯಾಗಿ ಬಳಕೆಯಾಗಿದ್ದು, ಕಳೆದ ಬಾರಿ ಜಿಲ್ಲೆಯಲ್ಲಿ ಶೇ.94.53 ಫಲಿತಾಂಶ ಹಾಗೂ ಶೇ.60 ಸಾಧಕರ ಸಂಖ್ಯೆ ಶೇ.85ಕ್ಕಿಂತ ಹೆಚ್ಚಿತ್ತು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಈ ಪ್ರಶ್ನೋತ್ತರ ಅಧ್ಯಾಯವಾರು ಮಾಹಿತಿಯ ಸಾಫ್ಟ್ ಕಾಪಿಯನ್ನು ಶಾಲೆಗಳಿಗೆ ಒದಗಿಸಿದ್ದು, ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ 426 ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಅವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿ ಕೋಚಿಮುಲ್ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಜಿಲ್ಲೆಯ ಮಕ್ಕಳಿಗೆ ನೆರವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ಕೋಚಿಮುಲ್ ಎಂಡಿ ಹೆಚ್.ಮಹೇಶ್, ವ್ಯವಸ್ಥಾಪಕ ನಾಗೇಶ್, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯತ್ರಿ,ಶಶಿವಧನ, ಉಪಪ್ರಾಂಶುಪಾಲರಾದ ವೆಂಕಟೇಶಪ್ಪ, ಕೆಂಪೇಗೌಡ, ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ರವಿ, ಮೆಥೋಡಿಸ್ಟ್ ಶಾಲೆಯ ಮಂಜುಳಾ, ಬಾಪೂಜಿ ಶಾಲೆಯ ಅನುರಾಧ ಮತ್ತಿತರರು ಉಪಸ್ಥಿತರಿದ್ದರು.

ಅಲಂಗಾರ್‌ ಹೋಲಿ ರೋಸರಿ ಚರ್ಚಿನಲ್ಲಿ ವಾರ್ಷಿಕ ಹಬ್ಬದ ಆಚರಣೆ

26 ಅಕ್ಟೋಬರ್ 2022 ರಂದು, ಅಲಂಗಾರ್‌ನ ಹೋಲಿ ರೋಸರಿ ಚರ್ಚ್ ತನ್ನ ವಾರ್ಷಿಕ ಹಬ್ಬವನ್ನು ಆಚರಿಸಿತು. ಮೂಡುಬಿದಿರೆ ಚರ್ಚ್‌ನ ಧರ್ಮಗುರು, ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ಅ| ವಂ||ಓನಿಲ್ ಡಿಸೋಜ ದಿವ್ಯ ಬಲಿಪೂಜೆಯ ನೇತ್ರತ್ವ ವಹಿಸಿದ್ದರು. ಸುಮಾರು 25 ಧರ್ಮಗುರುಗಳು ಸಹಬಲಿದಾನವನ್ನು ಅರ್ಪಿಸಿದರು.

“ಒಡನಾಟ ಬಲಗೋಳಿಸೋಣ –ಒಗ್ಗಟ್ಟಿನ ಸಮುದಾಯ ಕಟ್ಟೋಣ”  ಎಂಬುದು ಹಬ್ಬದ  ಧ್ಯೇಯವಾಕ್ಯವಾಗಿತ್ತು.  

ವಾರ್ಷಿಕ ಹಬ್ಬದಲ್ಲಿ ಅಪಾರ ಸಂಖ್ಯೆಯ ಭಕ್ತರು ಹಾಗೂ ಮೇರಿ ಮಾತೆಯ ಭಕ್ತರು ಪಾಲ್ಗೊಂಡಿದ್ದರು ವಾರ್ಷಿಕ ಔತಣಕೂಟವನ್ನು ಆಯೋಜಿಸಲು ಸಹಕರಿಸಿದ ಎಲ್ಲಾ ದಾನಿಗಳಿಗೆ, ಹಿತೈಷಿಗಳಿಗೆ ಮತ್ತು ಚರ್ಚ್ ಭಕ್ತಾಧಿಗಳಿಗೆ ಚರ್ಚಿನ ಧರ್ಮಗುರು ವಂ|.ವಾಲ್ಟರ್ ಡಿಸೋಜ ಧನ್ಯವಾದಗಳನ್ನು ಅರ್ಪಿಸಿದರು.

3 DAYS CHARISMATIC RETREAT HELD AT INFANT JESUS SHRINE, BIKARNAKATTE, MANGALORE

Report: Fr. Stephen Lobo OCD Photos: Stanly Bantwal, Editor:Bernarad Dcosta

The Carmel Hill of Infant Jesus Shrine, Bikarnakatte saw a great multitude joining for 3 days of retreat led by well-known charismatic preacher Br Prakash and Team from Bandra, Mumbai.

The Charismatic retreat was held for 3 days from 24th to 26th October from 9.00 am to 5.00 pm in the premises of Infant Jesus Shrine, Carmel Hill, Bikarnakatte, Mangalore.  The retreat included morning prayers, Rosary, Praise and worship, spiritual talks, Holy Eucharist and Adoration of the Blessed Sacrament. Fr Rovel D Souza, Director of the Infant Jesus Shrine, along with Fr Noel Mascharenhas, Redemptorist priest from Mumbai Diocese and Fr Melwyn Noronha, Parish Priest of Pakshikere led the faithful into prayer and nourished with the Eucharist. Br Prakash D Souza empowered the faithful with the word of God and led the adoration for all 3 days.

Every day lunch was served for all the participants. There were more than 13 thousand faithfuls gathered from far and near to participate in this retreat. Ballok Jezu Kuttom, Carmel Soldiers and other volunteers worked tirelessly to make this retreat a successful one.