HOLY ROSARY CHURCH, KUNDAPUR – 450 th JUBILEE SOUVENIR 2021

ಪ್ರಾಥಮಿಕ ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ ಅರ್ಹತಾ ಪರೀಕ್ಷೆ ಕಟ್ಟುನಿಟ್ಟಿನ ಕ್ರಮ- ಕೇಂದ್ರಕ್ಕೆ ಶೂ ,ಬೆಲ್ಟ್ ಗೂ ನಿಷೇಧ – ಡಿಡಿಪಿಐ ಕೃಷ್ಣಮೂರ್ತಿ

ಕೋಲಾರ : ೨೦೨೨-೨೩ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಹಾಗೂ ೬ ರಿಂದ ೮ ನೇ ತರಗತಿ ಪದವೀಧರ ಶಿಕ್ಷಕ ವೃಂದದ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ಭಾನುವಾರ ನಡೆಯುತ್ತಿದ್ದು , ಕೇಂದ್ರದೊಳಕ್ಕೆ ಶೂ , ಬೆಲ್ಟ್ ಗೂ ನಿಷೇಧ ಹಾಕಲಾಗಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು , ಯಾವುದೇ ಅವ್ಯವಹಾರ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು , ಈಗಾಗಲೇ ಪರೀಕ್ಷಾ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದು , ಕೇಂದ್ರಗಳಲ್ಲಿ ನೋಂದಣಿ ಸಂಖ್ಯೆ ದಾಖಲಿಸುವುದು ಸೇರಿದಂತೆ ಅಗತ್ಯ ಸಿದ್ಧತೆ ನಡೆದಿದೆ ಎಂದರು.

ಪರೀಕ್ಷೆ ನಡೆಯುವ ನ .೬ ರಂದು ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಇದ್ದು , ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದು , ಪ್ರಾಥಮಿಕ ಶಿಕ್ಷಕರಾಗಲು ಅರ್ಹತೆ ಗಳಿಸಲು ೩೬೨೯ ಹಾಗೂ ಪದವೀಧರ ಶಿಕ್ಷಕರ ಹುದ್ದೆಗಳಿಗೆ ಅರ್ಹತ ಗಳಿಸಲು ೪೬೯೭ ಸೇರಿದಂತೆ ಒಟ್ಟು ೮೩೨೬ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು. ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು , ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಯಾರನ್ನು ಒಳ ಪ್ರವೇಶಿಸಲು ಅವಕಾಶ ನೀಡುವುದಿಲ್ಲ .

ಕೇಂದ್ರದಲ್ಲಿ ಕ್ಯಾಮರಾ , ಮೊಬೈಲ್ , ಎಲೆಕ್ಟ್ರಾನಿಕ್ ಗಡಿಯಾರ ಬಳಕೆಗೆ ಅವಕಾಶ ನೀಡಿಲ್ಲ ಮತ್ತು ಅಭ್ಯರ್ಥಿಗಳು ಶೂ , ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷೆಗಳು ನಗರದಲ್ಲಿ ಬೆಳಗ್ಗಿನ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಕರ ಹುದ್ದೆಗಳಿಗೆ ಅರ್ಹತೆಗೆ ಸಂಬಂಧಿಸಿದಂತೆ ೧೭ ಕೇಂದ್ರ ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಅರ್ಹತೆಗೆ ಮಧ್ಯಾಹ್ನ ೨೩ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು , ಕೇಂದ್ರಗಳ ಸುತ್ತಮುತ್ತಲೂ ೨೦೦ ಮೀಟರ್ ಪ್ರದೇಶವನ್ನು ನಿಷೇದಿತ ಪ್ರದೇಶವೆಂದು ಘೋಷಿಸಿದ್ದು , ಸೆಕ್ಷನ್ ೧೪೪ ರ ಅನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ ಎಂದರು.

ಕಟ್ಟುನಿಟ್ಟಿನ ತಪಾಸಣೆಗೆ ಕ್ರಮ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಈ ಸಂಬಂಧ ಮಾಹಿತಿ ನೀಡಿ , ವಿಶೇಷವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ೨ ಹಂತದ ತಪಾಸಣೆಗೆ ಒಳಪಡಬೇಕಾಗುತ್ತದೆ.

ಮೊದಲನೇ ಹಂತದಲ್ಲಿ ಪರೀಕ್ಷಾ ಸಿಬ್ಬಂದಿ ಅಭ್ಯರ್ಥಿಗಳನ್ನು ಗುರುತಿಸಿ ಪರೀಕ್ಷಾ ನಿಷೇದಿತ ವಸ್ತುಗಳಾದ ಮೊಬೈಲ್ ಪೋನ್ ಬ್ಲೂಟೂತ್ ಡಿವೈಸ್ , ಕ್ಯಾಲುಕಲೇಟರ್ ಕೈಗಡಿಯಾರ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲದಿರುವ ಬಗ್ಗೆ ಪರಿಶೀಲಿಸಿಸುತ್ತಾರೆ.
೨ ನೇ ಹಂತದ ತಪಾಸಣೆಗೆ ಕಳುಹಿಸಲಾಗುವುದು ಅಲ್ಲಿ ಪೊಲೀಸ್ ಸಿಬ್ಬಂದಿ ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷೆಗೆ ನಿಷೇದಿತ ವಸ್ತುಗಳ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿಸುವರು ಎಂದು ತಿಳಿಸಿದರು.

ಆಧಾರ್ ಕಾರ್ಡ್ ತರಲು ಸೂಚನೆ

ಪ್ರವೇಶ ಪತ್ರದಲ್ಲಿ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ ಮತ್ತು ಸಹಿ ವ್ಯತ್ಯಾಸವಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮೊಂದಿಗೆ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿ , ಆಧಾರ್‌ಕಾರ್ಡ್ , ಇತ್ತೀಚಿನ ಭಾವಚಿತ್ರ ತರಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷಾನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾಹಿತಿ ನೀಡಿ , ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಬೆಳಿಗ್ಗೆ ೯-೦೦ ಗಂಟೆಗೆ ಹಾಗೂ ಮಧ್ಯಾಹ್ನದ ಅಧಿವೇಶನಕ್ಕೆ ೧-೦೦ ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿದೆ.

ಬೆಳಿಗಿನ ಅಧಿವೇಶನದಲ್ಲಿ ಪರೀಕ್ಷೆ ಆರಂಭವಾದ ನಂತರ ಯಾವುದೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪರೀಕ್ಷಾ ಕಾರ್ಯಕ್ಕೆ ಈಗಾಗಲೇ ೬ ಮಂದಿ ಮಾರ್ಗಾಧಿಕಾರಿಗಳು , ೨೩ ಕೇಂದ್ರಗಳಿಗೂ ಮುಖ್ಯ ಅಧೀಕ್ಷಕರು , ೨೩ ಮಂದಿ ಸ್ಥಾನಿಕ ಜಾಗೃತದಳದ ಅಧಿಕಾರಿಗಳನ್ನು ನೇಮಿಸಲಾಗಿದ್ದು , ಪರೀಕ್ಷಾ ಕಾರ್ಯಕ್ಕೆ ಓರ್ವ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಿದ್ದು , ಒಂದು ಕೇಂದ್ರಕ್ಕೆ ಪಟ್ಟ ಶಾಲೆ ಮುಖ್ಯಶಿಕ್ಷಕ ನಾಗರಾಜ್ ಮತ್ತೊಂದು ಕ್ಷೇತ್ರಕ್ಕೆ ಶ್ರೀನಿವಾಸಪುರ ಪಟ್ಟಣದ ನೂತನ ಪ್ರೌಢಶಾಲೆ ಮುಖ್ಯಶಿಕ್ಷಕ ಬೈರರೆಡ್ಡಿ ಮುಖ್ಯಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು , ಶನಿವಾರ ಸಂಜೆ ಡೆಸ್ಕ್‌ಗಳ ಮೇಲೆ ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯ ನಡೆಯಿತು.

ಕುಂದಾಪುರ್ ಲ್ಹಾನ್ ಸಮೂದಾಯ್ ಶಿಕವ್ಣ್ : ಆಮಿ ಗಾಲಿಲೆಯೆಚ್ಯಾ ಸರೋವರಾ ಬರಿ ಜೀವಾಳ್ ಜಾಂವ್ಯಾ – ಫಾ|ಜೊಕೀಮ್ ಫೆರ್ನಾಂದ್

ಕುಂದಾಪುರ್, ನ.6: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಲ್ಹಾನ್ ಸಮೂದಾಯ್ ಬಳ್ವಂತ್ ಕರ್ಚ್ಯಾ ಇರಾದ್ಯಾನ್ ಆಯ್ತಾರಾ ಮಂಗ್ಳೂರ್ ಧರ್ಮ್ ಪ್ರಾಂತ್ಯಾಚೊ ಲ್ಹಾನ್ ಸಮೂದಾಯಾಚೊ ನಿರ್ದೇಶಕ್ ಮಾ|ಬಾ|ಜೊಕೀಮ್ ಫೆರ್ನಾಂದ್ ಹಾಣಿ ಪವಿತ್ರ್ ಬಲಿದಾನ್ ಭೆಟವ್ನ್ ಲ್ಹಾನ್ ಸಮೂದಾಯಾ ವಿಶಿಂ ಶಿಕವ್ಣ್ ದಿಲಿ.
“ವಾಡ್ಯಾನಿಂ ಚಡ್ತಿಕ್ ಜಣಾನಿಂ ಲ್ಹಾನ್ ಸಮೂದಾಯ್ ಜಮಾತೆಕ್ ಹಾಜರ್ ಜಾಯ್ಜೆ, ಕೇವಲ್ ಮಾಗ್ಣೆ ಮಾತ್ರ್ ನ್ಹಯ್, ಹೇರ್ ಚಟುವಟಿಕ್ಯೊ ಮಾಂಡುನ್ ಹಾಡ್ನ್ ಲ್ಹಾನ್ ಸಮೂದಾಯ್ ಬಳಾಧಿಕ್ ಕರ್ಯೆತ್. ಆಮಿ ಮೆಲ್ಯಾ ದರ್ಯಾ ಬರಿ, ತಟಸ್ಥ್ ಆಸ್ಚೆಂ ಬರೆ ನ್ಹಯ್, ಮೆಲ್ಯಾ ದರ್ಯಾಂತ್ ಮಾಸ್ಳಿ ನಾ, ಕಾಂಯ್ಚ್ ನಾ, ತ್ಯಾ ಪರಿಸರಾಂತ್ ಕಿತೆಂಚ್ ಜಲ್ಮಾನಾ, ಫಳ್ ನಾ, ಪಾಚ್ವೆ ಪಣ್ ನಾ, ಅಶೆಂ ಆಮಿ ತಟಸ್ಥ್ ಆಸ್ಚೆಂ ನ್ಹಯ್. ಆಮಿ ಗಾಲಿಲೆಯಾಚ್ಯಾ ಸರೋವರ್ ಜೀವಾಳ್ ಆಸ್ಲ್ಯಾ ಬರಿ ಆಸಾಜೆ. ಪಾಚ್ಯ್ವಾ ಪರಿಸರಾನ್ ಫಳಾಭರಿತ್ ಜಾಯ್ಜೆ, ಮ್ಹಳ್ಯಾರ್, ಸೊಮಿಯಾಚೆ ಮಿಸಾಂವಾಂತ್ ಆಮಿ ಕ್ರಿಯಾಳ್ ಥರಾನ್ ಭಾಗ್ ಘೆಜೆ. ಪವಿತ್ರ್ ಪುಸ್ತಕಾಚಿಂ ಜಾಣ್ವಾಯ್ ಜೊಡುಂಕ್ ಆಜ್ ಕಾಲ್ ಡಾಕ್ಟರ್ಸ್, ಎಂಜಿನಿಯರ್ ಹೇರ್ ವ್ಹಡ್ ಶಿಕ್ಪಿ ಲಾಯಿಕಚ್ ಮುಕಾರ್ ಸರ್ತಾತ್ ಆಸ್ತಾಂ, ಆಮಿ ಪಾಟಿಂ ರಾಂವ್ಚೆ ನ್ಹಯ್. ಕ್ರಿಸ್ತಾಚೆಂ ರಾಜ್ ಹಾಂಗಾಸರ್ ನ್ಹಯ್ ತರೀ, ಸಂಸಾರಾಂರ್ ಹೇರ್ ರಾಷ್ಟ್ರಾನಿಂ ವೇಗಾನ್ ಚಡಾಚ್ ಆಸಾ. ಲೋಕ್ ಕ್ರಿಸ್ತಾಂವ್ ಜಾತೆಂ ಆಸಾತ್, ಆನಿ ಯಾಜಕ್ ಜಾಂವ್ಚೆಯಿ ಚಡಾಚ್ ಆಸಾ. ಅಶೆಂ ಆಸ್ತಾಂ, ಆಮಿ ಶೆಳೆ ಪಣ್ ಪಾಂಗ್ರುಚೆಂ ನ್ಹಯ್. ಲಾಯಿಕಾನಿ ಲ್ಹಾನ್ ಸಮೂದಾಯಾಂತ್ ಉರ್ಭೆನ್ ಭಾಗ್ ಘೆಂವ್ನ್ ಲ್ಹಾನ್ ಸಮೂದಾಯ್ ಬಳಾಧಿಕ್ ಕರಿಜೆ” ಮ್ಹಣುನ್ ಸಂದೇಶ್ ದಿಲೊ.
ಫಿರ್ಗಜೆಚೊ ವಿಗಾರ್ ಭೊ|ಮಾ|ಸ್ಟ್ಯಾನಿ ತಾವ್ರೊ ಹಾಣಿ ಸಹ ಭೆಟವ್ಣಿ ಕೆಲಿ ಆನಿ ಸಾಕ್ರಾಮೆಂತಾಚೆ ಆರಾಧಾನ್ ಚಲವ್ನ್ ವ್ಹರ್ನ್, ಉಪ್ಕಾರ್ ಆಟಾಯ್ಲೊ.

ಮಾವು ಬೆಳೆಗಾರರಿಗೆ ಫಸಲ್ ಬಿಮಾ ಯೋಜನೆಯಡಿ ಪರಿಹಾರ ಕೊಡಿಸುವಂತೆಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು:ನವೀನ್ ಕುಮಾರ್

ಶ್ರೀನಿವಾಸಪುರ: ಮಾವು ಬೆಳೆಗಾರರಿಗೆ ಫಸಲ್ ಬಿಮಾ ಯೋಜನೆಯಡಿ ಪರಿಹಾರ ಕೊಡಿಸುವಂತೆ ಆಗ್ರಹಿಸಿ ನ.9 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಾವು ಬೆಳೆಗಾರರ ಹೋರಾಟ ಸಮಿತಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಾವಿನ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಬೆಳೆಗಾರರು ಕಡಿಮೆ ಸಂಖ್ಯೆಯಲ್ಲಿ ಇರುವ ಕಡೆ ಮಾತ್ರ ಬೆಳೆ ವಿಮೆ ಪಾವತಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಬೆಳೆಗಾರರು ಇರುವ ಕಡೆ ಸಮಸ್ಯೆಯನ್ನು ಕಡೆಗಣಿಸಲಾಗಿದೆ. ನಷ್ಟಪರಿಹಾರ ನೀಡುತ್ತಿಲ್ಲ ಎಂದು ಆಪಾದಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ಮಾವು ಬೆಳೆಗಾರರಿಗೆ ವಿಮಾ ಕಂಪನಿಗಳಿಂದ ಆಗಿರುವ ಅನ್ಯಾಯ ಪ್ರತಿಭಟಿಸಿ ನ.9ರಂದು ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ಫಸಲ್ ಬಿಮಾ ಯೋಜನೆ ಅನುಷ್ಠಾನ ಖಾಸಗಿ ವಿಮಾ ಕಂಪನಿಗಳಿಗೆ ವಹಿಸಿರುವುದರಿಂದಲೇ, ಯೋಜನೆ ಪೂರ್ಣ ಪ್ರಯೋಜನ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸಿಗುತ್ತಿಲ್ಲ. ಅಧಿಕಾರಿಗಳು ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದಲೇ ಪ್ರತಿಭನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮುಖಂಡರಾದ ಬೈಚೇಗೌಡ, ಎನ್.ವೀರಪ್ಪರೆಡ್ಡಿ, ಅಸ್ಲಂಪಾಷ, ಸೈಯದ್ ಫಾರೂಕ್, ಶಿವಣ್ಣ ಇದ್ದರು.

ಕುಂದಾಪುರ:ಕ್ರೈಸ್ತ ನೀತಿ ಶಿಕ್ಷಣ ಶಿಕ್ಷಕರ ಪಾಲಕ ಸಂತ ಚಾರ್ಲ್ಸ್ ಬೊರೊಮಿಯೊವರ ದಿನಾಚರಣೆ

ಕುಂದಾಪುರ, ನ.6: ಕುಂದಾಪುರ ರೋಸರಿ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣದ ಶಿಕ್ಷಕರ ಪಾಲಕ, ಕ್ರೈಸ್ತ ಶಿಕ್ಷಣದ ಸುಧಾರಣೆಯ ರೂವಾರಿ  ಸಂತ ಚಾರ್ಲ್ಸ್ ಬೊರೊಮಿಯೊವರ ದಿನಾಚರಣೆಯನ್ನು ನ.6 ರಂದು ರೋಸರಿ ಚರ್ಚಿನ ಕ್ರೈಸ್ತ ನೀತಿ ಶಿಕ್ಷಣ ಭೋದನೆ ಮಾಡುವ ಶಿಕ್ಷಕರು ಪವಿತ್ರ ಬಲಿದಾನ ಅರ್ಪಿಸುವ ಮೂಲಕ ಆಚರಿಸಿದರು. ಅತಿಥಿ ಧರ್ಮಗುರು ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಕಿರು ಸಮೂದಾಯದ ನಿರ್ದೇಶಕರಾದ  ವಂ| ಜೊಕೀಮ್ ಫೆರ್ನಾಂಡಿಸ್ ಇವರ ಪ್ರಧಾನ ಯಾಜಕತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ವಿಶ್ವದಲ್ಲಿ ಸಂತ ಚಾರ್ಲ್ಸ್ ಬೊರೊಮಿಯೊ ದಿನಾಚರಣೆಯನ್ನು ನವೆಂಬರ್ 4 ರಂದು ಆಚರಿಸಲಾಗುತ್ತದೆ, ಈ ಹಬ್ಬದ ಬಲಿದಾನದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಹ ಬಲಿದಾನವನ್ನು ಅರ್ಪಿಸಿ ಕ್ರೈಸ್ತ ಶಿಕ್ಷಣ ಭೋದಿಸುತ್ತಿರುವ ಶಿಕ್ಷಕರಿಗೆ ಶುಭ ಕೋರಿದರು.

   ನಂತರ ನಡೆದ ಸಭಾಕಾರ್ಯಕ್ರಮದಲ್ಲಿ “ಸಂತ ಚಾರ್ಲ್ಸ್ ಬೊರೊಮಿಯೊ ಅವರು 1564 ರಿಂದ 1584 ರವರೆಗೆ ಮಿಲನ್‌ನ ಕಾರ್ಡಿನಲ್ ಮತ್ತು ಆರ್ಚ್‌ಬಿಷಪ್ ಆಗಿದ್ದರು. ಆವಾಗ  ಪ್ರೊಟೆಸ್ಟಂಟ್ ಪಂಗಡಕ್ಕೆ ಉತ್ತರವಾಗಿ, ಕ್ರೈಸ್ತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಯನ್ನು ತಂದಿದ್ದರು, ಅದಕ್ಕಾಗಿ ಪವಿತ್ರ ಸಭೆ ಅವರನ್ನು ಕ್ರೈಸ್ತ ನೀತಿ ಶಿಕ್ಷಣದ ಶಿಕ್ಷಕರ ಪಾಲಕ ಎಂದು ಅವರ ಹಬ್ಬವನ್ನು ಆಚರಿಸುತ್ತದೆ” ಎಂದು ಅವರು ತಿಳಿಸಿ “ಕ್ರೈಸ್ತ ಶಿಕ್ಷಕರ ಸೇವೆ ಅಮೂಲ್ಯವಾದುದು, ನೀವು ಎನನ್ನೂ ಪ್ರತಿಫಲ ಅಪೇಕ್ಷಿಸದೆ ನೀವು ಮಕ್ಕಳಿಗೆ ನೀತಿ ಶಿಕ್ಷಣ ಭೋದಿಸಿ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಕರಿಸುವುದು ಶ್ಲಾಘನೀಯ ಸೇವೆಯಾಗಿದೆ” ಎಂದು ತಿಳಿಸಿದರು.

     ನೀತಿ ಶಿಕ್ಷಣದ ಶಿಕ್ಷಕಿ ಪ್ರೀತಿ ಕ್ರಾಸ್ತಾ, “ಸಾಮನ್ಯರಾದ ನಮಗೆ ಮಕ್ಕಳಿಗೆ ನೀತಿ ಶಿಕ್ಷಣ ನೀಡುವುದಕ್ಕೆ ದೇವರು ನಮಗೆ ಈ ಅವಕಾಶ ಕಲ್ಪಿಸಿಕೊಟ್ಟಿದ್ದು ದೇವರ ದೊಡ್ಡ ಅನುಗ್ರಹ ಎಂದು ಭಾವಿಸುತ್ತೇನೆ, ಈ ಸೇವೆ ನನಗೆ ಸಂತ್ರಪ್ತಿಯನ್ನು ತಂದಿದೆ’ ಎಂದು ತಮ್ಮ ಅನ್ನಿಸಿಕೆಯನ್ನು ಹಂಚಿಕೊಂಡರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ. ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.     ಕ್ರೈಸ್ತ ನೀತಿ ಶಿಕ್ಷಣದ ಸಂಯೋಜಕಿ ವೀಣಾ ಡಿಸೋಜಾ ಸ್ವಾಗತಿಸಿದರು. ಸಿಸ್ಟರ್ ತೆರೆಜ್ ಶಾಂತಿ ಪ್ರಸ್ತಾಪನೆ ಗೈದರು. ರೇಶ್ಮಾ ಫೆರ್ನಾಂಡಿಸ್ ನಿರೂಪಿಸಿದರು. ವನಿತಾ ಬರೆಟ್ಟೊ ವಂದಿಸಿದರು.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ರಕ್ಷಕ ಶಿಕ್ಷಕ ಸಭೆ – ಮೆದುಳು ಜ್ವರದ ಮಾಹಿತಿ ಕಾರ್ಯಗಾರ


ಕುಂದಾಪುರ, ನ.5: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ನ. 5 ರಂದು ರಕ್ಷಕ ಶಿಕ್ಷಕ ಸಭೆ ಹಾಗೂ ಮೆದುಳು ಜ್ವರದ ಮಾಹಿತಿ ಕಾರ್ಯಗಾರ ಕಾರ್ಯಕ್ರಮವು ಸೈಂಟ್ ಮೇರಿಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಶಾಲೆಯ ಜಂಟಿ ಕಾರ್ಯದರ್ಶಿಯಾಗಿರುವ ಅ| ವಂ| ಧರ್ಮಗುರು ಸ್ಟ್ಯಾನಿ ತಾವ್ರೊ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ವೈದ್ಯಾಧಿಕಾರಿಗಳಾಗಿರುವ ಡಾ. ಶಿಶಿರ್ ಪೆÇೀಷಕರಿಗೆ ಮೆದುಳು ಜ್ವರದ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಸಭೆಯಲ್ಲಿ ಹಾಜರಿದ್ದ ಸುಮಾರು 300 ಮಂದಿ ಪೆÇೀಷಕರಿಗೆ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಜ್ ಶಾಂತಿ ಎ.ಸಿ ಯವರು ಶಾಲೆಯ ರಜತ ಮಹೋತ್ಸವದ ಕಾರ್ಯಕ್ರಮದ ಬಗ್ಗೆ ಹಾಗೂ ಶಾಲೆಯ ಇತಿಹಾಸದ ಬಗ್ಗೆ ತಿಳಿಸಿದರು. ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಪ್ರತಿಮಾ ಶೆಟ್ಟಿಯವರು ಶಾಲೆಯ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಶಾಲೆಯ ಆಯಾಯ ವಿಷಯಗಳ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ದೈಹಿಕ ಶಿಕ್ಷಕರಾಗಿರುವ ಶ್ರೀ ರತ್ನಾಕರ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಶ್ರೀ ಲುವಿಸ್ ಪ್ರಶಾಂತ್‍ರವರು ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ರಮ್ಯಾ ಹೆಗ್ಡೆರವರು ಧನ್ಯವಾದ ಅರ್ಪಿಸಿದರು.

ಪೋಪ್ ಫ್ರಾನ್ಸಿಸ್ ಬಹ್ರೇನ್‌ಗೆ ಭೇಟಿ : ಪೋಪ್ ಮರಣದಂಡನೆಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು

ಬಹ್ರೇನ್‌: ಪೋಪ್ ಫ್ರಾನ್ಸಿಸ್ ಅವರು ಗಲ್ಫ್ ರಾಷ್ಟ್ರಕ್ಕೆ ತಮ್ಮ ಎರಡನೇ  ಪ್ರವಾಸದಲ್ಲಿ ಬಹ್ರೇನ್‌ಗೆ ಆಗಮಿಸಿದ್ದು, ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮರಣದಂಡನೆಯ ಶಿಕ್ಷೆಯನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ.

   ಪೋಪ್ ಅವರು ಗಲ್ಫ್ ಅರಬ್ ರಾಜ್ಯಕ್ಕೆ ಆಗಮಿಸಿದ ನಂತರ ಸಖಿರ್ ರಾಜಮನೆತನದಲ್ಲಿ ನಡೇದ ಸಭೆಯಲ್ಲಿ ಗುರುವಾರ ಕರೆ ನೀಡಿದರು. ಅಲ್ಲಿ ಶಿಯಾ ಮುಸ್ಲಿಂ ವಿರೋಧ ಮತ್ತು ಹಕ್ಕುಗಳ ಗುಂಪುಗಳು ಸುನ್ನಿ ರಾಜಪ್ರಭುತ್ವವನ್ನು ಮಾನವ ಹಕ್ಕುಗಳ ಮೇಲೆ ಅಧಿಕಾರ ಸ್ಥಾಪಿಸುತ್ತದೆ’ ಎಂದು ಆರೋಪಿಸಿದರು.

ಧಾರ್ಮಿಕ ಸ್ವಾತಂತ್ರ್ಯವು “ಸಂಪೂರ್ಣವಾಗಿರಬೇಕು, ಆರಾಧನಾ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿರಬಾರದು” ಎಂದು ಅವರು ಹೇಳಿದರು.

ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರು ಪೋಪ್ ಅವರನ್ನು ಸ್ವಾಗತಿಸಿದರು.

ಪೋಪ್ ಫ್ರಾನ್ಸಿಸ್ ಅವರು ಅಬುಧಾಬಿಗೆ 2019 ರ ಪ್ರಥಮ ಭೇಟಿ ಒಂದು ಹೆಗ್ಗುರುತು. ಇದೀಗ ಗಲ್ಫ್ ಅರಬ್ ದೇಶಕ್ಕೆ ಭೇಟಿ ನೀಡಿದ ಎರಡನೇ ಭೇಟಿಯಾಗಿದೆ, ಅಲ್ಲಿ ಅವರು ಕ್ಯಾಥೋಲಿಕ್-ಮುಸ್ಲಿಂ ಭ್ರಾತೃತ್ವವನ್ನು ಉತ್ತೇಜಿಸುವ ದಾಖಲೆಗೆ ಸಹಿ ಹಾಕಿದರು.

ಪ್ರಮುಖ ಸುನ್ನಿ ಧರ್ಮಗುರು ಶೇಖ್ ಅಹ್ಮದ್ ಅಲ್-ತಾಯೆಬ್ ಅವರೊಂದಿಗೆ. ಅಲ್-ತಾಯೆಬ್ ಕೈರೋದ ಅಲ್-ಅಜರ್‌ನ ಗ್ರಾಂಡ್ ಇಮಾಮ್.ಬಹ್ರೇನಿನ ಅಲ್-ತಾಯೆಬ್ ಮತ್ತು ಇತರ ಪ್ರಮುಖ ಸರ್ವಧರ್ಮೀಯ ವ್ಯಕ್ತಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಈ ಪ್ರವಾಸದ ಸಂದರ್ಭದಲ್ಲಿ ಭೇಟಿಯಾಗಲಿದ್ದಾರೆ.

ಕುಂದಾಪುರ:ರೋಟರಿ ದಕ್ಷಿಣ,ಇನ್ನರ್ ವ್ಹೀಲ್ ಕ್ಲಬ್ ದಕ್ಷಿಣ ಹಾಗೂ ಚಿನ್ಮಯಿ ಆಸ್ಪತ್ರೆಯ ಸಹಯೋಗದಲ್ಲಿ ‘ಕ್ಯಾನ್ಸರ್ ಅರಿವು ಶಿಬಿರ

‘ಕ್ಯಾನ್ಸರ್ ಅರಿವು ಶಿಬಿರ”ವು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಕಾರ್ಕಿನೋಸ್ ಹೆಲ್ತ್ ಕೇರ್ ಸೆಂಟರ್ ನ ಡಾ. ಪ್ರಶಾಂತ ನಡೆಸಿಕೊಟ್ಟರು.
ರೋಟರಿ ಕುಂದಾಪುರ ದಕ್ಷಿಣ, ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಚಿನ್ಮಯಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿನ್ಮಯಿ ಆಸ್ಪತ್ರೆಯ ಆಡಳಿತ ಪಾಲುದಾರರಾದ ಶ್ರೀ ರಾಜೇಂದ್ರ ಕಟ್ಟೆ, ರೋಟರಿ ಸಹಾಯಕ ಗವರ್ನರ್ ರೋ.ಡಾ. ಉಮೇಶ ಪುತ್ರನ್, ರೋಟರಿ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಇನ್ನರ್ ವ್ಹೀಲ್ ಅಧ್ಯಕ್ಷೆ ಸುಮಾ ಪುತ್ರನ್ ಹಾಗೂ ಡಾ. ತನ್ಮಯಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್, ತಲ್ಲೂರು ರೋಟರಿ ಸಮುದಾಯ ದಳದ ಸದಸ್ಯರು, ಇನ್ನರ್ ವ್ಹಿಲ್ ಕ್ಲಬ್ಬಿನ ಸದಸ್ಯೆಯರು, ಕುಂದಾಪುರದ ನಾಗರಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.

ಹೋಲಿ ರೆಡೀಮರ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೆಳ್ತಂಗಡಿ: ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.2ರಂದು 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ದೀಕ್ಷೆ ಪಡೆದ ಪ್ರಧಾನ ಸೇವಕ (ordain as a deacon) ಪ್ರೀತಂ ರೇಗೋ ಭಾಗವಹಿಸಿದ್ದರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಕ್ಲಬಿನ ವಿದ್ಯಾರ್ಥಿಗಳು “ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಬಹುಮುಖ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ” ಸಮಾರಂಭವನ್ನು ಆಯೋಜಿಸಿದರು.

ವಿದ್ಯಾರ್ಥಿಗಳಾದ ಸಹನಾ ಸ್ವಾಗತಿಸಿ, ಪ್ರಜ್ನೇಶ್ ಧನ್ಯವಾದವಿತ್ತರು, ಪ್ರತೀಕ್ಷಾ ಮತ್ತು ಅಲ್ಫಿಯಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಪಲ್ಲವಿ, ಶ್ರೀಮತಿ ಪ್ರತಿಜ್ಞಾ ಮತ್ತು ಕುಮಾರಿ ರವೀನಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದ ಎಸ್ಪಿ ದೇವರಾಜ್ : “ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಆಟೋಚಾಲಕರ ಪಾತ್ರ ಅನನ್ಯ”

ಕೋಲಾರ:- ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಪೊಲೀಸ್‍ ಇಲಾಖೆಯೊಂದಿಗೆ ಆಟೋ ಚಾಲಕರ ಪಾತ್ರವು ಅನನ್ಯವಾಗಿದ್ದು, ಅಪರಾಧಗಳು ಗಮನಕ್ಕೆ ಬಂದಾಗ ಪೊಲೀಸರಿಗೆ ಮಾಹಿತಿ ರವಾನಿಸಿ ಸಹಕಾರ ನೀಡಿ ಎಂದು ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಡಿ ದೇವರಾಜ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಜಯಚಾಮರಾಜೇಂದ್ರ ಒಡೆಯರ್ ಕನ್ನಡಿಗರ ಸಂಘದ ವತಿಯಿಂದ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು ಪ್ರತಿಯೊಂದು ಗಲ್ಲಿ ಗಲ್ಲಿಯಲ್ಲಿ ಏನು ನಡೆಯುತ್ತಿದೆ ಎಂಬ ವಿದ್ಯಮಾನಗಳ ಬಗ್ಗೆ ಆಟೋ ಚಾಲಕರಿಗೆ ಅರಿವು ಇರುತ್ತದೆ ಎಂದ ಅವರು ಪೊಲೀಸ್‍ ಇಲಾಖೆಗೆ ನೀಡುವ ಮಾಹಿತಿಯೇ ಸಾಕಷ್ಟು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಸರಕಾರ ನೀಡಿರುವ ಖಾಕಿ ಸಮವಸ್ತ್ರವು ಜಾತಿ, ಧರ್ಮ, ಭೇದ, ಬಡವ ಶ್ರೀಮಂತ ಎನ್ನದೇ ಎಲ್ಲರನ್ನೂ ಸಮಾನ ಎಂಬುದನ್ನು ಸೂಚಿಸುತ್ತದೆ. ಸಮಾಜದಲ್ಲಿನ 80% ಆಟೋ ಚಾಲಕರು ಬದುಕಿಗಾಗಿ ವೃತ್ತಿ ಮಾಡಿದರೆ ಒಂದಿಷ್ಟು ಜನ ಶೋಕಿಗಾಗಿ ವೃತ್ತಿ ಮಾಡತ್ತಿದ್ದಾರೆ ಯಾರೇ ಬಂದರೂ ಪ್ರೀತಿಯಿಂದ ಗೌರವದಿಂದ ಮಾತಾಡಿಸಬೇಕು ಆಟೋ ಚಾಲಕರ ಮಕ್ಕಳು ಆಟೋ ಚಾಲಕರಾಗುವುದು ಬೇಡ ಅವರಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಸಮಾಜದ ಉತ್ತಮ ವ್ಯಕ್ತಿಯಾಗಿ ಮಾಡಬೇಕು ಶಿಸ್ತು ಬದ್ಧ ಶ್ರಮ ನಿಮ್ಮನ್ನು ಗೌರವಿಸುವ ಪ್ರವೃತ್ತಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಪತ್ರಕರ್ತ ಕೆ.ಎಸ್ ಗಣೇಶ್ ಮಾತನಾಡಿ, ಆಟೋ ಚಾಲಕರಿಗೂ ಕನ್ನಡ ಭಾಷೆಗೆ ಅವಿನಾಭಾವ ಸಂಬಂಧವಿದೆ ತಮ್ಮ ಆಟೋಗಳ ಮೇಲೆ ಕನ್ನಡ ಪ್ರೇಮದ ವಾಕ್ಯಗಳನ್ನು ಬರೆದಿರುತ್ತಾರೆ ಖಾಕಿ ಸಮವಸ್ತ್ರ ಪೆÇೀಲೀಸರಿಗೆ ಕಾನೂನು ಸುವ್ಯವಸ್ಥೆಗೆ, ಸೈನಿಕರಿಗೆ ದೇಶದ ರಕ್ಷಣೆಗೆ ಹಾಗೂ ಆಟೋ ಚಾಲಕರಿಗೆ ಊರಿನ ಗೌರವ ಘನತೆಯನ್ನು ಎತ್ತಿ ತೋರಿಸಲಿಕ್ಕೆ ಎಂದರು.
ಆಟೋ ಚಾಲಕರು ಸಮವಸ್ತ್ರಕ್ಕೆ ಗೌರವ ನೀಡಿ, ಯಾರೇ ಬಂದರೂ ಸಹೋದರತ್ವ ಮನೋಭಾವದಿಂದ ಮಾತನಾಡಿಸಬೇಕು ಎಂದ ಅವರು, ಕೆಲವು ಕಡೆ ಆಟೋಚಾಲಕರು ಮೋಸ ಮಾಡುತ್ತಾರೆ ಅಂತ ಹೇಳು ಅಪವಾದ ದೂರವಾಗಬೇಕು, ಇದಕ್ಕೆ ಅನೇಕ ಆಟೋ ಚಾಲಕರು ನಿದರ್ಶನವಾಗಿದ್ದು, ಪ್ರಯಾಣಿಕರು ಆಟೋದಲ್ಲಿ ಬಿಟ್ಟು ಹೋದ ಹಣ,ಒಡವೆಗಳನ್ನು ಮನೆಗೆ ಹೋಗಿ ತಲುಪಿಸಿ ಪ್ರಾಮಾಣಿಕತೆ ಮೆರೆದ ನಿದರ್ಶನವೂ ಇದೆ ಎಂದರು.
ಹಿಂದೆ ಆಟೋಗಳಿಗೆ ದಾಖಲೆಗಳು ಇರಲಿಲ್ಲ ದಾಖಲೆಗಳನ್ನು ಇಟ್ಟು ಮತ್ತೊಬ್ಬರಿಗೆ ಮಾರ್ಗದರ್ಶನ ಕೊಟ್ಟು ಕನ್ನಡ ಕಲಿಸುವುದು ಕೂಡ ನಿಮ್ಮಂದಲೇ ಸಾಧ್ಯ ಗೌರವ ಘನತೆಯನ್ನು ಮಾತ್ರ ಅಲ್ಲದೇ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವಾಗಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ರಾಜೇಂದ್ರ ಸಿಂಹ ಮಾತನಾಡಿ, ಆಟೋ ಚಾಲಕರನ್ನು ಗುರುತಿಸುವುದು ಕಡಿಮೆ ಸುಮಾರು ಆಟೋಗಳಿಗೆ ಪರವಾನಗಿ ಇಲ್ಲ, ಚಾಲಕರಿಗೆ ಕಾನೂನು ತೊಂದರೆ ಯಾಗದಂತೆ ಅದಾಲತ್ ರೀತಿಯಲ್ಲಿ ದಾಖಲೆಗಳನ್ನು ಒದಗಿಸುವ ಮೂಲಕ ಪೆÇೀಲೀಸ್ ಇಲಾಖೆ ನೆರವಾಗಬೇಕು ಕೆಲವು ಕಡೆ ಶಿಬಿರಗಳನ್ನು ನಡೆಸುವ ಮೂಲಕ ಆಟೋ ಚಾಲಕರಿಗೆ ಚಾಲನೆಯ ಅರಿವು ಮೂಡಿಸಬೇಕು ಮಾದರಿ ಆಟೋ ನಿಲ್ದಾಣಗಳ ಕಡೆ ಹೆಚ್ಚಿನ ಗಮನಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಪಿ ದೇವರಾಜ್ ಸ್ವತಃ ಆಟೋ ಚಾಲನೆ ಮಾಡುವ ಮೂಲಕ ಗಮನ ಸೆಳೆದರು ಜಯಚಾಮರಾಜೇಂದ್ರ ಒಡೆಯರ್ ಕನ್ನಡಿಗರ ಸಂಘದ ಕೆ.ಜಯದೇವ್, ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಎ.ಜಿ ಸುರೇಶ್ ಕುಮಾರ್ ಮತ್ತಿತರರಿದ್ದರು.