HOLY ROSARY CHURCH, KUNDAPUR – 450 th JUBILEE SOUVENIR 2021

ಬೆಳ್ತಂಗಡಿಯ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ

ಬೆಳ್ತಂಗಡಿ: ಬೆಳ್ತಂಗಡಿಯ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯು ನವೆಂಬರ್ 8 ಮತ್ತು 9 ರಂದು ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದೆ ಮತ್ತು ಶಾಲಾ ಚಾಂಪಿಯನ್‌ಶಿಪ್ ನ್ನು ಗೆದ್ದುಕೊಂಡಿದೆ 
     7ನೇ ತರಗತಿಯ ಅಲ್ಸ್ಟನ್  600ಮೀ ಮತ್ತು 400ಮೀ ಓಟದಲ್ಲಿ ಪ್ರಥಮ ಹಾಗೂ 200ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು. ಅವರಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ದೊರಕಿತು. 9ನೇ ತರಗತಿಯ ಸ್ಟ್ರುಸ್ಟಿ ಶಾರ್ಟ್‌ಪುಟ್‌ನಲ್ಲಿ ಪ್ರಥಮ ಮತ್ತು ಹ್ಯಾಮರ್ ಥ್ರೋನಲ್ಲಿ ತೃತೀಯ ಸ್ಥಾನ ಪಡೆದರು. ಹರ್ಡಲ್ಸ್ 100 ಮೀ.ನಲ್ಲಿ 10ನೇ ತರಗತಿಯವರಾದ ಧನುಷ್  ಮತ್ತು ಶಮಿಲ್ ಎರಡು ಮತ್ತು ಮೂರನೇ ಸ್ಥಾನ ಪಡೆದರು. 10ನೇ ತರಗತಿಯ ಜೋಶನ್  100ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು. 9ನೇ  ತರಗತಿಯ ವೆಲೋನಾ ವಾಕ್ ರೇಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು. ಪ್ರಾಥಮಿಕ ಬಾಲಕರ ರಿಲೇಯಲ್ಲಿ ಲೆವಿನ್, ಆಶಿಶ್, ಪ್ರಜ್ನೇಶ್ ಮತ್ತು ಅವೀಜ್ ಪ್ರಥಮ ಸ್ಥಾನ ಪಡೆದರು. ಹೈಸ್ಕೂಲ್ ಬಾಲಕರ ರಿಲೇಯಲ್ಲಿ ಜೋಶನ್, ವರುಣ್, ಧನುಷ್ ಮತ್ತು ಶಾಮಿಲ್ ಪ್ರಥಮ ಸ್ಥಾನ ಪಡೆದರು. ವಿದ್ಯಾರ್ಥಿಗಳಿಗೆ ಪಿಇಟಿ ಶಿಕ್ಷಕರಾದ  ಶ್ರೀ ಶರತ್ ಪಿಂಟೋ ತರಬೇತಿ ನೀಡಿದರು.

ಸಿದ್ದರಾಮಯ್ಯ ಜನಸಮೂಹದ ನಾಯಕ- ಎಲ್ಲಿ ನಿಲ್ಲಬೇಕೆಂಬುದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ:ವಿ.ಆರ್.ಸುದರ್ಶನ್

ಕೋಲಾರ : – ಕೋಲಾರ ಕ್ಷೇತ್ರದಲ್ಲಿ ಗುಂಪುಗಾರಿಕೆ ಇಲ್ಲ ಎಂದು ಹೇಳಲಾರೆ , ಸಿದ್ದರಾಮಯ್ಯ ಜನಸಮೂಹದ ನಾಯಕ , ಜನರ ನಾಡಿಮಿಡಿತ ಅರಿತವರು ಅವರು ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ತಿಳಿಸಿದರು . ತಾಲ್ಲೂಕಿನ ವೇಮಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಚುನಾವಣಾ ಪ್ರಚಾರ ಕೆಪಿಸಿಸಿಯಿಂದ ಅಧಿಕೃತವಾಗಿ ಘೋಷಣೆಯಾಗಿಲ್ಲ , ನ .೧೩ ರಂದು ಸಿದ್ದರಾಮಯ್ಯ ಸೀತಿ ಗ್ರಾಮಕ್ಕೆ ಭೇಟಿ ನೀಡಲಿದ್ದು , ಅವರು ದಿವಂಗತ ಬೈರೇಗೌಡರ ಜತೆಯಲ್ಲಿ ರಾಜಕಾರಣ ಮಾಡಿದವರಾಗಿದ್ದು , ಅವರ ಸಮಾದಿಗೂ ಪೂಜೆ ಸಲ್ಲಿಸಲಿದ್ದಾರೆ . ನಂತರ ಕೋಲಾರಮ್ಮ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ ಎಂದರು . ಕೋಲಾರ ಕ್ಷೇತ್ರದಲ್ಲಿ ನಾನೂ ಆಕಾಂಕ್ಷಿಯೇ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೨೦೧೪ , ೨೦೧೮ ರಲ್ಲಿ ನಾನೂ ಸ್ಪರ್ಧಿಸಲು ಬಯಸಿದ್ದೆ . ನಾನೂ ಟಿಕೆಟ್ ಆಕಾಂಕ್ಷಿಯೇ ಎಂದ ಸುದರ್ಶನ್ , ಸಿದ್ದರಾಮಯ್ಯ ಬರುವುದಾದರೆ ಸ್ವಾಗತ ಆದರೆ ಅದಕ್ಕೆ ಅವರೂ ಅರ್ಜಿ ಹಾಕಬೇಕು , ಚುನಾವಣಾ ಸಮಿತಿ ಅದನ್ನು ಕೆಪಿಸಿಸಿಗೆ ನೀಡಿ , ಅಲ್ಲಿಂದ ಎಐಸಿಸಿ ಹಂತದಲ್ಲಿ ಸ್ಟೀನಿಂಗ್ ಕಮಿಟಿ ಇದ್ದು , ನಂತರ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದರು . ಕೋಲಾರದಿಂದ ನಾನು ಸ್ಪರ್ಧಿಸಲು ಬಯಸಿರುವೆ , ಇಲ್ಲಿನ ಜನರು , ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವೂ ಇದೆ , ಸಿದ್ದರಾಮಯ್ಯ ಬರಲಿ ಇಲ್ಲವಾದಲ್ಲಿ ನನಗೂ ಅವಕಾಶ ನೀಡಲು ಪಕ್ಷವನ್ನು ಕೋರುವೆ ಎಂದರು . ರಾಜ್ಯ ದೇಶದಲ್ಲಿ ಆಳುತ್ತಿರುವ ಬಿಜೆಪಿ ವೈಫಲ್ಯಗಳ ವಿರುದ್ಧ ಜನಾಭಿಪ್ರಾಯವಿದೆ , ಜನ ಬದಲಾವಣೆ ಬಯಸಿದ್ದಾರೆ , ಸಿದ್ದರಾಮಯ್ಯ ಅಗಾಧ ಆಡಳಿತದ ಅನುಭವ ಹೊಂದಿದ್ದು , ಹಲವಾರು ಚುನಾವಣೆ ನೋಡಿದ್ದಾರೆ ಎಂದರು . ಜಾರಕಿಹೋಳಿ ಮಾತು ಮುಗಿದ ಅಧ್ಯಾಯ ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ವಿಷಯ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು , ಆದರೆ ಅವರು ಇದೀಗ ವಿಷಾದ ವ್ಯಕ್ತಪಡಿಸಿರುವುದರಿಂದ ಅದು ಮುಗಿದ ಅಧ್ಯಾಯ ಎ ೦ ದ ಸುದರ್ಶನ್ , ಅದನ್ನು ಮತ್ತೆ ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು .

ಕೋಲಾರದ ಕಾಂಗ್ರೆಸ್ಸಿನಲ್ಲೂ ಕಣಕ್ಕಿಳಿಯಲು ಸಮರ್ಥರಿದ್ದಾರೆ ಎಂದ ಅವರು , ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲ ಎಂಬ ಟೀಕೆಗಳನ್ನು ತಳ್ಳಿ ಹಾಕಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅವರನ್ನು ಸ್ಪರ್ಧಿಸಲು ಆಹ್ವಾನಿಸುತ್ತಿದ್ದಾರೆ ಅದು ಅವರ ಜನಪ್ರಿಯತೆಗೆ ಸಾಕ್ಷಿಯಲ್ಲವೇ ಎಂದು ಪ್ರಶ್ನಿಸಿದರು . ಸದಸ್ಯತ್ವ ಅಭಿಯಾನಕ್ಕಾಗಿ ನಾನು ಜಿಲ್ಲಾಧ್ಯಕ್ಷನಾಗಿದ್ದೆ . ಇದೀಗ ಬೇರೆಯವರನ್ನು ಪಕ್ಷ ಅತಿ ಶೀಘ್ರ ನೇಮಿಸುತ್ತದೆ ಎಂದು ತಿಳಿಸಿದರು .

ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಸಾಮರಸ್ಯ ಸರ್ವಧರ್ಮ ಸಾಮರಸ್ಯ ಕಾರ್ಯಕ್ರಮ

ಮಂಗಳೂರು: ಸರ್ವಧರ್ಮ ಸಮನ್ವಯವು ‘ಬದುಕು ಮತ್ತು ಬದುಕಲು ಬಿಡಿ’ ಎಂಬ ಕಲ್ಪನೆಯನ್ನು ಒಳಗೊಂಡ ಕಾರ್ಯಕ್ರಮ ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ 7 ನವೆಂಬರ್ 2022 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

    ಅರ್ಥಪೂರ್ಣ ಸಂಸ್ಕೃತ ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ “ವಿವಿಧ ಧರ್ಮಗಳ ಜನರ ನಡುವೆ ಸೌಹಾರ್ದಯುತ ಸಹಬಾಳ್ವೆ ಇರಬೇಕು ಹಾಗೂ ಸೌಹಾರ್ದತೆಯ ಮೂಲಕ ಶಾಂತಿ ಮತ್ತು ನ್ಯಾಯವನ್ನು ಎತ್ತಿ ಹಿಡಿಯಬೇಕು” ಎಂದು ಸಾನಿಧ್ಯದ ಮಾನಸಿಕ ವಿಕಲಚೇತನರ ವಸತಿ ಶಾಲೆ ಮತ್ತು ತರಬೇತಿ ಕೇಂದ್ರದ ಆಡಳಿತಾಧಿಕಾರಿ ಡಾ.ವಸಂತಕುಮಾರ್ ಶೆಟ್ಟಿ ತಿಳಿಸಿದರು.

    ಸ್ನೇಹಾಲಯ ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಜೋಸೆಫ್ ಕ್ರಾಸ್ತಾ ಅವರು ವ್ಯಕ್ತಿಗಳ ನಡುವಿನ ಸ್ವೀಕಾರ ಮತ್ತು ಸಿನರ್ಜಿ ಪ್ರೀತಿಯನ್ನು ಹರಡಬಹುದು ಎಂದು ವ್ಯಕ್ತಪಡಿಸಿದರು.

ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ‘ಅಕ್ಷರ ಸಂತ’ ಹರೇಕಳ ಹಾಜಬ್ಬ ಅವರು ಮುಸಲ್ಮಾನರಾಗಿದ್ದರೂ ವಿವಿಧ ಧರ್ಮದ ಜನರು ವಿವಿಧ ಹುದ್ದೆಗಳಲ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿ, ಜನರ ಸೇವೆಗೆ ಧರ್ಮ ಎಂದಿಗೂ ಅಡ್ಡಿಯಾಗಬಾರದು’ ಎಂದು ಅಭಿಪ್ರಾಯಪಟ್ಟರು.       

       ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಅವರನ್ನು ನಿಸ್ವಾರ್ಥ ಮಾನವ ಸೇವೆಗಾಗಿ ಸನ್ಮಾನಿಸಲಾಯಿತು.

ಡಾ.ವಸಂತಕುಮಾರ್ ಶೆಟ್ಟಿ, ಶ್ರೀ ಜೋಸೆಫ್ ಕ್ರಾಸ್ತಾ ಮತ್ತು ಹರೇಕಳ ಹಾಜಬ್ಬ ಅವರ ನಿಸ್ವಾರ್ಥ ಸೇವೆಯ ಕುರಿತ ವೀಡಿಯೋವನ್ನು ಪ್ರಸ್ತುತಪಡಿಸಲಾಯಿತು. ಮಾನವೀಯತೆಯ ನಿಜವಾದ ಸಾರವನ್ನು ಬಿಂಬಿಸುವ ಮನಮುಟ್ಟುವ ನೃತ್ಯವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸಿಸ್ಟರ್ ನೊರಿನ್ ಡಿಸೋಜಾ ಎ.ಸಿ, ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಜೋನ್ನೆ ಶೀತಲ್, ಡಾ.ಟ್ರೆಸ್ಸಿ ಮಿನೆಜೆಸ್ ಮತ್ತು ಶ್ರೀಮತಿ ಜೇಷ್ಮಾ ಡಿಸೋಜ, ಶ್ರೀಮತಿ ಶುಭವಾನಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

        ಶ್ರೀಮತಿ ಶೈಲಜಾ, ಕನ್ನಡ ಇಲಾಖೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುವಾಸಿನಿ ಸ್ವಾಗತಿಸಿ, ನಿಶಾ ಬಂಗೇರ ವಂದಿಸಿದರು. ರಾಷ್ಟ್ರಗೀತೆಯ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ನೊರಿನ್ ಡಿಸೋಜಾ ಎ.ಸಿ, ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಜೋನ್ನೆ ಶೀತಲ್, ಡಾ.ಟ್ರೆಸ್ಸಿಮೆನೆಜಸ್ ಮತ್ತು ಶ್ರೀಮತಿ ಜೇಷ್ಮಾ ಡಿಸೋಜ, ಶ್ರೀಮತಿ ಶುಭವಾನಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತೊಟ್ಲಿ : ಅರ್ಹ ಫಲಾನುಭವಿಗಳಿಗೆ ಮನೆಯನ್ನ ನೀಡದೆ ವಂಚಿಸಿರುವ ಪಂಚಾಯತಿ ಅಧ್ಯಕ್ಷರು, ಅಧ್ಯಕ್ಷರ ಪತಿ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕ ಗ್ರಾಮಸ್ಥರ ಮನವಿ

ಕೋಲಾರ,ನ.10: ತೊಟ್ಲಿ ಗ್ರಾಮ ಪಂಚಾಯತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಯನ್ನ ನೀಡದೆ ವಂಚಿಸಿರುವ ಪಂಚಾಯತಿ ಅಧ್ಯಕ್ಷರು, ಅಧ್ಯಕ್ಷರ ಪತಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ತೊಟ್ಲಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 4 ವರ್ಷಗಳಿಂದ ದಲಿತ ಕುಟುಂಬಕ್ಕೆ ಸೇರಿದ ನಾಗವೇಣಿ ಕೋಂ ಮೇಘನಾಥ್ ಎಂಬ ದಲಿತ ಕುಟುಂಬವು ಗುಡಿಸಿಲಿನಲ್ಲಿ ವಾಸವಾಗಿದ್ದು, ಮಳೆ ಗಾಳಿ ಬಂದ ಸಂದರ್ಭದಲ್ಲಿ ಅಂಬೇಡ್ಕರ್ ಭವನದ ಚಾವಣಿಯ ಕೆಳಗಡೆ ವಾಸ ಮಾಡುತ್ತಿದ್ದಾರೆ. ತೊಟ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಂಬೇಡ್ಕರ್ ಅವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಸಹ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಅಧ್ಯಕ್ಷರ ಪತಿ ಉದ್ದೇಶ ಪೂರ್ವಕವಾಗಿ ಇವರಿಗೆ ಮನೆ ನೀಡದೆ ಇವರ ಹಿಂಬಾಲಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಹಾಗೂ ಆರ್.ಸಿ.ಚಾವಣೆ ಇರುವವರೆಗೂ ಸಹ ಮನೆ ನೀಡುವ ಮೂಲಕ ಅರ್ಹ ಫಲಾನುಭವಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.
ಇದರ ಜೊತೆಗೆ ಒಬ್ಬರಿಗೆ ಬೇರೆ ಬೇರೆ ಹೆಸರಿನಲ್ಲಿ 2 ಮನೆಯನ್ನ ನೀಡಿರುತ್ತಾರೆ. ಮನೆ ನೀಡುವಾಗ ಗ್ರಾಮ ಸಭೆ ಹಾಗೂ ವಾರ್ಡ್ ಸಭೆ ನಡೆಸುವುದು ಕಡ್ಡಾಯವಾಗಿರುತ್ತದೆ. ಅದರ ಪ್ರಕಾರ ಇವರು ಗ್ರಾಮ ಸಭೆಯು ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡಲು ಅಧ್ಯಕ್ಷರು ಸೂಚಿಸಿರುತ್ತಾರೆ. ಅದನ್ನು ಪಾಲನೆ ಮಾಡದೆ ಮತ್ತೊಂದು ಸಭೆಯನ್ನು ಸಹ ಕರೆಯದೇ ಹಿಂದಿನ ಸಭೆಯ ನಡುವಳಿ ಪುಸ್ತಕದಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮಾಡಿ ಇವರ ಇಷ್ಟಾನುಸಾರ ನಡೆದುಕೊಂಡಿರುತ್ತಾರೆ. ಇದನ್ನು ಗ್ರಾಮ ಪಂಚಾಯಿತಿ ಸದಸ್ಯರನ್ನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಸೇರಿ ಬೆದರಿಕೆಯನ್ನು ಹಾಕಿ ಕೊಂಡಿರುತ್ತಾರೆ. ಆದ ಕಾರಣ ಇವರು ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಮನೆಯನ್ನ ನೀಡಬೇಕಾಗಿ ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ತೊಟ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನವೀನ್, ಮಂಜುನಾಥ್, ಜನಾರ್ಧನ್, ಅನಿತಾ, ಸುಶೀಲಮ್ಮ, ಸರಸ್ಪತಮ್ಮ ಉಪಸ್ಥಿತರಿದ್ದರು.

ಜಿಲ್ಲಾದ್ಯಂತ ರೈತರಿಗೆ ವಂಚನೆ ಮಾಡಿರುವ ಪಸಲ್ ಭೀಮ ವಿಮೆ ಕಂಪನಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ:ರೈತ ಸಂಘ ಒತ್ತಾಯ

ಮುಳಬಾಗಿಲು ನ-10, ಜಿಲ್ಲಾದ್ಯಂತ ರೈತರಿಗೆ ವಂಚನೆ ಮಾಡಿರುವ ಪಸಲ್ ಭೀಮ ವಿಮೆ ಕಂಪನಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಮುಂಗಾರು ಮಳೆ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ರೈತ ಸಂಘದಿಂದ ವಡ್ಡಹಳ್ಳಿ ರಾಜ್ಯ ಹೆದ್ದಾರಿಯನ್ನು ನಷ್ಟ ಬೆಳೆ ಸಮೇತ ಬಂದ್ ಮಾಡಿ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ರವಿಕುಮಾರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ವಿಮಾ ಕಂಪನಿಗಳೊಂದಿಗೆ ಶಾಮೀಲಾಗಿ ರೈತರು ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಬೆಳೆ ಕಳೆದುಕೊಂಡ ರೈತನಿಗೆ ವಂಚಿಸಿ ವಿಮಾ ಕಂಪನಿಗಳನ್ನು ಉದ್ದಾರ ಮಾಡುವ ವ್ಯವಹಾರವಾಗಿದೆ ಎಂದು ರೈತ ಸಂಘದ ರಾಜ್ಯ ಪ್ರಾ.ಕಾ.ಪಾರುಕ್‍ಪಾಷ, ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕೃಷಿ ಎಂಬ ಯುದ್ದದಲ್ಲಿ ಸೈನಿಕ ಎಂಬ ರೈತ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕ ಎಂಬ ಶತ್ರುವಿನ ವಿರುದ್ದ ಮೂರನೇ ಮಹಾಯುದ್ದ ಮಾಡಬೇಕಾದ ಪರಿಸ್ಥಿತಿ ಇದೆ. ಸರ್ಕಾರಗಳ ರೈತ ವಿರೋಧಿ ನೀತಿಗಳಿಂದ ದಿನೇ ದಿನೇ ಕೃಷಿ ಕ್ಷೇತ್ರ ದುಬಾರಿ ಆಗುವ ಜೊತೆಗೆ ಶ್ರೀಮಂತರ ಪಾಲಾಗುತ್ತಿದೆ. ಕೃಷಿಯನ್ನೇ ನಂಬಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕೋಟ್ಯಾಂತರ ರೈತ ಕುಟುಂಬಗಳಿ ಕೃಷಿ ಭೂಮಿಯನ್ನು ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸಲು ನಗರಗಳತ್ತ ವಲಸೆ ಹೋಗುವಂತಹ ಪರಿಸ್ಥಿತಿ ಇದ್ದರೂ ರೈತ ಕುಲವನ್ನು ಸಂರಕ್ಷಣೆ ಮಾಡುವ ಯಾವ ಸರ್ಕಾರಗಳು ನಿರ್ಧಾರ ಮಾಡದೆ ಇರುವುದು ದುರದೃಷ್ಟಕರ ಎಂದು ಅಸಮದಾನ ವ್ಯಕ್ತಪಡಿಸಿದರು.
ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೇ ಕಳೆದಿವೆ. ಆಡಳಿತರೂಡ ಚುನಾಯಿತ ಪ್ರತಿನಿಧಿಗಳು ವಿಮೆ ಕಂಪನಿಗಳ ವಿರುದ್ದ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ ಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈ ಹಿಡಿಯಬೇಕಾದ ಪ್ರಧಾನ ಮಂತ್ರಿ ಪಸಲ್ ಭೀಮ ಯೋಜನೆ ಸಂಪೂರ್ಣ ಫೇಲ್ ಆಗಿದೆ ಎಂದು ಆರೋಪ ಮಾಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಳೆದ 4 ವರ್ಷಗಳಿಂದ ಜಿಲ್ಲಾದ್ಯಂತ ಅತಿವೃಷ್ಟಿ ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರವು ಇಲ್ಲ ಕಟ್ಟಿದ ವಿಮೆ ಹಣವು ಇಲ್ಲದೆ ರೈತರು ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್ (ಅಶ್ಯೂರ್ಡ್) ಬದಲಿಗೆ ಕಟ್ಟಿದ ಪ್ರಿಮಿಯಂ ಕೂಡ ರೈತರಿಗೆ ಸಿಗುತ್ತಿಲ್ಲ. ಶೇಕಡ 50 ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಾಗಿದೆ. ಆದರೆ ಆಣೆವಾರು ಮಾಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದು ವಿಮಾ ಷರತ್ತುಗಳಲ್ಲಿ ಲೋಪ ವಿರುವುದು ಸೇರುವಂತೆ ವಿವಿಧ ಕಾರಣಗಳಿಂದ ರೈತರು ಸಂತೃಪ್ತಕರಾಗಿದ್ದಾರೆ. ರೈತರೇ ತಮ್ಮ ಎಲ್ಲಾ ಕಷ್ಟವನ್ನು ಹೇಳಿಕೊಳ್ಳಲು ವಿಮೆ ಕಂಪನಿಗಳ ಟೋಲ್ ಪ್ರೀ ಸಂಖ್ಯೆಗಳೆ ಕೆಲಸ ಮಾಡುತ್ತಿಲ್ಲವೆಂದು ಕಿಡಿಕಾರಿದರು.
ಸಾಲದಲ್ಲಿ ಕಂತುಕಡಿತ ಬ್ಯಾಂಕ್ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ರೈತರಿಗೆ ಸಾಲದ ಮೊತ್ತ ನೀಡಲಾಗುತ್ತಿದೆ. ಕಡ್ಡಾಯ ವ್ಯವಸ್ಥೆ ಯಂತಾಗಿರುವ ಈ ವಿಮಾ ಕಂತು ಬಹುತೇಕ ವಿಮಾ ಕಂಪನಿಗಳ ಪಾಲು ಎಂಬಂತಾಗಿದೆ. ಬೆಳೆ ಸಾಲ ಪಡೆಯುವ ರೈತರ ಹೊರತಾಗಿ ಉಳಿದ ಬಹುತೇಕ ರೈತರು ವಿಮಾ ಯೋಜನೆಯ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ಡಿ.ಸಿ.ಗಳ ಗಮನಕ್ಕೆ ವಿಮೆ ಕಂಪನಿಗಳ ವಂಚನೆಯನ್ನು ತಿಳಿಸದ ಕೃಷಿ ತೋಟಗಾರಿಕೆ ಅಧಿಕಾರಿಗಳು ಜಿಲ್ಲಾದ್ಯಂತ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ನಷ್ಟವಾಗಿರುವ ರೈತರ ಬೆಳೆಗಳಿಗೆ ಕಟ್ಟಿರುವ ವಿಮೆ ಹಣವನ್ನು ನೀಡುವಲ್ಲಿ ವಿಫಲವಾಗಿರುವ ಕಂಪನಿಗಳ ವಿರುದ್ದ ಜಿಲ್ಲಾಧಿಕಾರಿಗಳ ಗಮನಕ್ಕೆ ಅಂಕಿ ಅಂಶಗಳ ವರದಿ ನೀಡುತ್ತಿಲ್ಲ. ದೂರು ನೀಡಿದರೆ ಪರಿಶೀಲನೆ ಮಾಡುತ್ತೇವೆಂಬ ಬೇಜವಾಬ್ದಾರಿಯಿಂದ ಅಧಿಕಾರಿಗಳು ವರ್ತಿಸುತ್ತಾರೆ. ಇದು ಸಹ ವಿಮಾ ಕಂಪನಿಗಳಿಗೆ ವರದಾನವಾಗಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ರೈತರು ದೂರು ನೀಡಿದರೆ ವಿಮಾ ಪಾವತಿಯಲ್ಲಿ ವ್ಯತ್ಯಾಸವಾಗಿದ್ದು, ಸರಿಪಡಿಸುವಂತೆ ವಿಮೆ ಕಂಪನಿಗಳಿಗೆ ನೋಟೀಸ್ ನೀಡಿದ್ದೇವೆಂದು ಕೈ ತೊಳೆದುಕೊಳ್ಳುವ ಮೂಲಕ ನೇರವಾಗಿ ವಿಮಾ ಕಂಪನಿಗಳ ಜೊತೆ ಕೃಷಿ ಕಂದಾಯ ತೋಟಗಾರಿಕೆ ಅದಿಕಾರಿಗಳು ಸಮಪಾಲು ಪಡೆದು ರೈತರ ಬೆವರ ಹನಿಯನ್ನು ಕಸಿಯುತ್ತಿದ್ದಾರೆ ಎಂದು ದೂರು ನೀಡಿದರು.
ಮಾನ್ಯರು 24 ಗಂಟೆಯಲ್ಲಿ ರೈತರಿಗೆ ವಂಚನೆ ಮಾಡಿರುವ ವಿಮಾ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ನಷ್ಟ ರೈತರಿಗೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ಮನೆ ಮುಂದೆ ಆಹೋ ರಾತ್ರಿ ದರಣಿಯನ್ನು ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಿಮಾ ಕಂಪನಿ ವಂಚನೆ ಬಗ್ಗೆ ರೈತರ ದೂರುಗಳು ಹೆಚ್ಚಾಗಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ರಾಜ್ಯ ಪ್ರಾ.ಕಾ.ಪಾರುಕ್‍ಪಾಷ, ರಾಜ್ಯ ಕಾ.ಬಂಗಾರಿ ಮಂಜು, ಜಿಲ್ಲಾ ಉ.ಸುನಿಲ್‍ಕುಮಾರ್, ವಿಶ್ವನಾಥ್, ತಾಲ್ಲೂಕು ಪ್ರಾ.ಕಾ.ರಾಜೇಶ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಭಾಸ್ಕರ್, ಜುಬೇರ್‍ಪಾಷ, ಹಾದಿಲ್‍ಪಾಷ, ಪದ್ಮಘಟ್ಟ ಧರ್ಮ ನಂಗಲಿ ನಾಗೇಶ್, ಹೆಬ್ಬಣಿ ರಾಮಮೂರ್ತಿ, ಶ್ರೀಕಾಂತ್, ಪುತ್ತೇರಿರಾಜು, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಅಣ್ಣೆಹಳ್ಳಿ ನಾಗರಾಜ್, ಮೇಲಾಗಾಣಿ ದೇವರಾಜ್, ಮೇಲಾಗಣಿ ವಿಜಯ್‍ಪಾಲ್, ರಾಮಸಾಗರ ವೇಣು, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಿರಣ್, ಸುರೇಶ್‍ಬಾಬು, ಮುಂತಾದವರು ಇದ್ದರು
.

ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಪ್ರಯತ್ನದಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಿಹಿ ಸುದ್ದಿ

ಕೋಲಾರ : – ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಪ್ರಯತ್ನದಿಂದಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಮುಖ್ಯ ಮಂತ್ರಿಗಳು ನೀಡಿದ ಭರವಸೆಯಂತೆ ಸುಮಾರು ೧೫೦೦ ಪಿಡಿಒಗಳ ಹುದ್ದೆಗಳನ್ನು ಗ್ರೂಪ್ ‘ ಬಿ ‘ ವೃಂದದ ಗ್ರೇಡ್ -೧ ಪಿಡಿಒ ಹುದ್ದೆಗೆ ಮೇಲ್ದರ್ಜೆಗೇರಿಸುವ ಕಡತಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ .

ಚಿತ್ರಶೀರ್ಷಿಕೆ : ರಾಜ್ಯದಲ್ಲಿ ೧೫೦೦ ಪಿಡಿಒಗಳ ಹುದ್ದೆಗಳನ್ನು ಗ್ರೂಪ್ ‘ ಬಿ ‘ ವೃಂದದ ಗ್ರೇಡ್ -೧ ಪಿಡಿಒ ಹುದ್ದೆಗೆ ಮೇಲ್ದರ್ಜೆಗೇರಿಸುವ ಕಡತಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ ಕುರಿತು ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರೊಂದಿಗೆ ಚರ್ಚಿಸಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತು ಪದಾಧಿಕಾರಿಗಳ ತಂಡ.

ಈ ಕುರಿತು ಮಾಹಿತಿ ನೀಡಿರುವ ಅವರು , ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದ ಪಿಡಿಒಗಳ ಬೇಡಿಕೆ ಈಡೇರಿಸಲು ನೌಕರರ ಸಂಘದರಾಜ್ಯಾಧ್ಯಕ್ಷರು ಪ್ರಯತ್ನಿಸಿದ್ದು , ಅದರಂತೆ ಇದೀಗ ಅವರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಿಎಂ ಅನುಮೋದನೆ ನೀಡಿದ್ದು , ಪಿಡಿಒಗಳನ್ನು ಗ್ರೂಪ್ ಬಿ ದರ್ಜೆಗೆ ಮೇಲ್ದರ್ಜೆಗೆ ಏರಿಸುವ ಕಡತ ಆರ್ಥಿಕ ಇಲಾಖೆಯ ಮೂಲಕ ಆರ್‌ಡಿಪಿಆರ್ ಇಲಾಖೆಗೆ ೨ ದಿನಗಳಲ್ಲಿ ಕಳುಹಿಸಲಾಗುವುದು ಎಂದು ಆರ್ಥಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದ್ದಾರೆ .

ಅದೇ ರೀತಿ ಲೋಕಾಯುಕ್ತಕ್ಕೆ ವಹಿಸಿರುವ ನರೇಗಾ ಯೋಜನೆಯ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದ್ದು , ಈ ಕಡತವು ಮುಖ್ಯಮಂತ್ರಿಗಳ ಕಚೇರಿಗೆ ಬಂದಿದ್ದು , ಅನುಮೋದನೆಯ ನಿರೀಕ್ಷೆಯಲ್ಲಿದೆ .

ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥಪಡಿಸಿ , ಪಿಡಿಒಗಳಿಗೆ ಮುಂಬಡ್ತಿ ನೀಡಲು ಈಗಾಗಲೇ ಸರ್ಕಾರದ ಅಡ್ವಕೇಟ್ ಜನರಲ್‌ರವರು ನ್ಯಾಯಾಲಯಕ್ಕೆ ಹಾಜರಾಗಿ ಮನವರಿಕೆ ಮಾಡಿಕೊಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಷಡಕ್ಷರಿ ಅವರು ಆರ್ಥಿಕ ಇಲಾಖೆಯ ಕಾರ್ಯದರ್ಶಿ – ಶ್ರೀ ಪಿ.ಸಿ.ಜಾಫರ್ ಪಿಡಿಒಗಳ ಸಂಘದ ಕಾರ್ಯಾಧ್ಯಕ್ಷರಾದ ರಾಜೇಶ್ , ಶಿವಮೊಗ್ಗ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀರಾಮ ಪದಾಧಿಕಾರಿಗಳಾದ ಯೋಗೇಶ್ ಹಾಗೂ ಶಿವಕುಮಾರ್ ರವರು ಹಾಜರಿದ್ದು , ಈ ಸಿಹಿಸುದ್ದಿ ಪಡೆದುಕೊಂಡಿದ್ದಾರೆ .
ಚಿತ್ರಶೀರ್ಷಿಕೆ : ರಾಜ್ಯದಲ್ಲಿ ೧೫೦೦ ಪಿಡಿಒಗಳ ಹುದ್ದೆಗಳನ್ನು ಗ್ರೂಪ್ ‘ ಬಿ ‘ ವೃಂದದ ಗ್ರೇಡ್ -೧ ಪಿಡಿಒ ಹುದ್ದೆಗೆ ಮೇಲ್ದರ್ಜೆಗೇರಿಸುವ ಕಡತಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ ಕುರಿತು ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರೊಂದಿಗೆ ಚರ್ಚಿಸಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತು ಪದಾಧಿಕಾರಿಗಳ ತಂಡ.

ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜನರಲ್ಲಿ ಜೀವ ವಿಮೆ ಅಗತ್ಯ ಕುರಿತು ಅರಿವು ಮೂಡಿಸಬೇಕು:ಸಿದ್ದೇಶ್

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜನರಲ್ಲಿ ಜೀವ ವಿಮೆ ಅಗತ್ಯ ಕುರಿತು ಅರಿವು ಮೂಡಿಸಬೇಕು. ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾ ಎಲ್‌ಐಸಿ ಶಾಖೆ ವ್ಯಸ್ಥಾಪಕ ಸಿದ್ದೇಶ್ ಹೇಳಿದರು.
ಪಟ್ಟಣದ ಎಲ್‌ಐಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಎಲ್‌ಐಸಿ ಪ್ರತಿನಿಧಿಗಳ ಮಾತನಾಡಿದ ಅವರು, ಆರೋಗ್ಯ ವಿಮಾ ಸೌಲಭ್ಯ ಜನಾರೋಗ್ಯ ಕ್ಷೇತ್ರದಲ್ಲಿ ಮಹತ್ವ ಪಡೆದಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಜೀವ ವಿಮೆ ಮಾಡಿಸುವ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯವಿದೆ. ಆರ್ಥಿಕ ಸಮಸ್ಯೆಗಳು ಗ್ರಾಮೀಣರನ್ನು ಕಾಡುತ್ತಿವೆ. ಅದಕ್ಕೆ ವಿಮಾ ಪಾಲಿಸಿ ಪರಿಹಾರವಾಗಬಲ್ಲದು. ಎಲ್‌ಐಸಿ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಪೂರ್ಣ ಪ್ರಯೋಜನ ಅರ್ಹರಿಗೆ ದೊರೆಯುವಂತೆ ಮಾಡಲು ಪ್ರಿನಿಧಿಗಳು ಶಮವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ಎಲ್‌ಐಸಿ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಎಲ್‌ಐಸಿ ಪ್ರಯೋಜನ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದರು. ನಿಗಮದ ಪ್ರತಿನಿಧಿಗಳು ಇದ್ದರು.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮಕ್ಕಳ ಸಾವು:ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ರೈತಸಂಘ ಆಗ್ರಹ

ಕೋಲಾರ;ನ.8: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ-ಮಕ್ಕಳ ಸಾವಿಗೆ ಕಾರಣರಾಗಿರುವ ವೈದ್ಯ-ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಆಸ್ಪತ್ರೆಗಳಲ್ಲಿ ಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ಜಾಗೃತಿವಹಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ಆರೋಗ್ಯಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜನತೆಯ ಹಣದಿಂದ ನಡೆಯುವ ಸರ್ಕಾರಿ ಆಸ್ಪತ್ರೆಗಳಿರುವುದು ಬಡವರಿಗಾಗಿ ಆದರೆ, ಅದೇ ಸರ್ಕಾರಿ ಆಸ್ಪತ್ರೆಗಳಿಂದ ಜಾಗತಿಕ ಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿರುವುದು ಎಲ್ಲರೂ ತಳಮಳಪಡಬೇಕಾದ ಸಂಗತಿ ಬೇಸರ ವ್ಯಕ್ತಪಡಿಸಿದರು.
ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ತುರ್ತು ಪರಿಸ್ಥಿತಿಯಲ್ಲಿ ಸೂಕ್ತ ಆರೈಕೆ ನೀಡದೆ ತಾಯಿಕಾರ್ಡ್, ಆಧಾರ್ ಕಾರ್ಡ್ ಇಲ್ಲವೆಂದು ನೆಪ ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ನಿರ್ಲಕ್ಷ್ಯದಿಂದ ಈ ಪಾಪಿ ಪ್ರಪಂಚಕ್ಕೆ ಅಂಬೆ ಕಾಲಿಡುತ್ತಿದ್ದ ಹಸುಗೂಸುಗಳು ಕಣ್ಣು ಬಿಡುವ ಮುನ್ನವೇ ತಾಯಿ ಮಕ್ಕಳು ಸಾವನ್ನಪ್ಪಿದ್ದು, ಇಡೀ ಮನುಕುಲ ತಲೆ ತಗ್ಗಿಸಬೇಕಾದ ಗಂಭೀರ ವಿಚಾರ ಎಂದು ಹೇಳಿದರು.
ಇದು ಬಡವರನ್ನು ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಕಿಯರು ಮಾಡಿದ ಕಗ್ಗೊಲೆಯೆಂದರೆ ತಪ್ಪಿಲ್ಲ. ಎಲ್ಲರೂ ಸಕಾಲಕ್ಕೆ ಆರೋಗ್ಯ ಸೌಕರ್ಯ ಪಡೆಯುವಂತಾಗಲೆಂದು ಆರೋಗ್ಯ ಕರ್ನಾಟಕ ಯೋಜನೆಯನ್ನು ತರಲಾಗಿದೆ. ಆದರೆ, ಸರ್ಕಾರ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದು ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿನ ವೈದ್ಯರು ವೈದ್ಯಕೀಯ ಶುಲ್ಕ ಭರಿಸಲಾಗದೆಂದು ಸರ್ಕಾರ ಆಯುಷ್ಮಾನ್ ಕಾರ್ಡ್ ರೂಪಿಸಿದೆ.
ಆದರೆ, ತಾಯಿ ಕಾರ್ಡ್ ಮಾಡಿಸಿಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಮನುಷ್ಯತ್ವ ಅಂತಃಕರಣ ಇರುವವರ್ಯಾರೂ ಪಶುವಿನಂತೆ ವರ್ತಿಸುವುದಿಲ್ಲ. ಆದರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು, ದಾದಿಯರು ನಡೆದುಕೊಂಡ ರೀತಿ ಅತ್ಯಂತ ಅಮಾನವೀಯವಾದದ್ದು. ಈ ತಾಯಿ-ಮಕ್ಕಳ ಸಾವಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ತುಮಕೂರು ಜಿಲ್ಲಾಸ್ಪತ್ರೆಯಲ್ಲಿನ ಘಟನೆಗೆ ಸಂಬಂಧಿಸಿದಂತೆ ಕೇವಲ ವೈದ್ಯರನ್ನು, ಶುಶ್ರೂಷಕಿಯರನ್ನು ಅಮಾನತ್ತಿನಲ್ಲಿಟ್ಟರೆ ಸಾಲದು ಆರೋಗ್ಯ ಇಲಾಖೆಯ ಮುಖ್ಯಸ್ಥರು ಮತ್ತು ಆರೋಗ್ಯ ಮಂತ್ರಿಗಳು ಇದರ ಹೊಣೆ ಹೊರೆಯಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದರೆ ನೇಮಕ ಮಾಡಿಕೊಳ್ಳಬಹುದು. ವೈದ್ಯಕೀಯ ಉಪಕರಣಗಳ ಕೊರತೆಯಿದ್ದರೆ ಒದಗಿಸಿ, ಸರಿಪಡಿಸಿ ಜೊತೆಗೆ ಅವಶ್ಯಕತೆಗೆ ತಕ್ಕಂತೆ ಔಷಧಿಗಳನ್ನು ಪೂರೈಕೆ ಮಾಡಬಹುದು. ಆದರೆ, ಎಲ್ಲಾ ಅನುಕೂಲಗಳಿದ್ದು, ಇಂತಹ ದುರಂತಗಳು ಸಂಭವಿಸುತ್ತಿವೆ ಎಂದರೆ ಕಾರಣ ಮನುಷ್ಯನ ಅಂತಃಕರಣದ ಅಭಾವ. ಮನುಷ್ಯತ್ವವ್ವನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸ್ಥಿತಿಯಯಲ್ಲಿ ಬರುವ ರೋಗಿಗಳಿಗೆ ಮೊದಲು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ಆ ನಂತರ ದಾಖಲೆಗಳನ್ನು ಕೇಳಬೇಕು. ಅದನ್ನು ಬಿಟ್ಟು ಲಕ್ಷ ಲಕ್ಷ ಸಂಬಳ ಪಡೆದು ಬಡವರ ಜೀವನದ ಜೊತೆ ಚೆಲ್ಲಾಟವಾಡುವ ಬಡ ರೋಗಿಗಳ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಹಣ ಕೊಟ್ಟರೆ ಚಿಕಿತ್ಸೆ ಇಲ್ಲವಾದರೆ ಹೆಣ ಕೊಡುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ನರ್ಸ್‍ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವಶ್ಯಕತೆಯಿರುವ ಸರ್ಕಾರದ ಸುತ್ತೋಲೆಯನ್ನು ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಬೆಲೆ ಕಟ್ಟಲಾಗದ ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಆರೋಗ್ಯಾಧಿಕಾರಿಗಳಾದ ಜಗಧೀಶ್ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ವೈದ್ಯರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಜೊತೆಗೆ ನಿಮ್ಮ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಯಾರಂಘಟ್ಟ ಗಿರೀಶ್, ಕೋಟೆ ಶ್ರೀನಿವಾಸ್, ಮಂಜುಳಾ, ತೆರ್ನಹಳ್ಳಿ ಆಂಜಿನಪ್ಪ, ವೆಂಕಟ್, ಮಂಗಸಂದ್ರ ವೆಂಕಟೇಶಪ್ಪ, ಫಾರೂಖ್‍ಪಾಷ, ಬಂಗಾರಿ ಮಂಜು, ರಾಜೇಶ್, ಸಂದೀಪ್‍ರೆಡ್ಡಿ, ರಾಮಸಾಗರ ವೇಣು, ಸಂದೀಪ್‍ಗೌಡ ಮುಂತಾದವರಿದ್ದರು.

ಕಾಲು ಬಾಯಿ ಜ್ವರ ಹಸುವಿಗೆ ರೋಗವನ್ನು ಹರಡವುದನ್ನು ತಡೆಯಲು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಬೇಕು:ಎನ್.ಹನುಮೇಶ್

ಶ್ರೀನಿವಾಸಪುರ 1 : ಕಾಲು ಬಾಯಿ ಜ್ವರ ರೋಗವು ಒಂದು ಹಸುವಿನಿಂದ ಮೊತ್ತೊಂದು ಹಸುವಿಗೆ ರೋಗವನ್ನು ಹರಡವುದನ್ನು ತಡೆಯಬೇಕಾದಲ್ಲಿ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಬೇಕು ಎಂದು ಕೋಮುಲ್ ನಿರ್ದೇಶಕ ಎನ್.ಹನುಮೇಶ್ ಸಲಹೆ ನೀಡಿದರು.
ತಾಲೂಕಿನ ಗುಂಡಮನತ್ತ ಗ್ರಾಮದ ಹಾಲು ಉತ್ಪಾದಕರ ಸಹಾಕರ ಸಂಘದ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಶ್ರೀನಿವಾಸಪುರ ಹಾಗೂ ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಶ್ರೀನಿವಾಸಪುರ ಇವರ ಸಂಯುಕ್ತಾಶ್ರಯದಲ್ಲಿ ಎನ್‍ಎಡಿಸಿಪಿ ಯೋಜನೆಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಗರ್ಭ ಧರಿಸಿರುವ ರಾಸುಗಳಿಗೂ, ಕರುಗಳಿಗೂ ಸೇರಿ ವರ್ಷಕ್ಕೆ ಎರಡು ಬಾರಿ ನೀಡುವುದರ ಜೊತೆಗೆ , ರಾಸುಗಳಿಗೆ ಚರ್ಮಗಂಟು ರೋಗ ಗ್ರಾಮದಲ್ಲಿ ಕಂಡು ಬಂದಲ್ಲಿ ಇಲಾಖೆ ಮತ್ತು ಶಿಬಿರ ಕಛೇರಿಗಳಿಗೆ ತುರ್ತಾಗಿ ಮಾಹಿತಿ ನೀಡಿ ರಾಸುಗಳಿಗೆ ಉಂಟಾಗುವ ರೋಗಗಳಿಂದ ಮುಕ್ತವಾಗಬೇಕೆಂದು ಕರೆ ನೀಡಿದರು.
ಒಕ್ಕೂಟದಿಂದ ನೀಡುವ ರಾಸು ವಿಮೆ ಕಡ್ಡಾಯವಾಗಿ ಮಾಡಿಸಿ ಉತ್ತಮ ಗುಣಮಟ್ಟದ ಹಾಲನ್ನು ಸಹಕಾರ ಸಂಘಗಳಿಗೆ ಸರಬರಾಜು ಮಾಡುಬೇಕೆಂದು ತಿಳಿಸಿದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮಂಜುನಾಥರೆಡ್ಡಿ, ಕೋಲಾರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಪ್ರಭಾರೆ ವ್ಯವಸ್ಥಾಪಕ ಡಾ|| ಜಿ.ಮಾಧವ, ಕೇಂದ್ರ ಕಛೇರಿಯ ಉಪವ್ಯವಸ್ಥಾಪಕ ಡಾ|| ವಿ.ಎನ್.ಶ್ರೀಕಾಂತ, ಶ್ರೀನಿವಾಸಪುರ ತಾಲೂಕಿನ ವ್ಯವಸ್ಥಾಪಕ ಕೆ.ಎಂ. ಮುನಿರಾಜು, ಕೋಮುಲ್‍ನ ಸಿಬ್ಬಂದಿಗಳಾದ ನಾಗರಾಜ್, ಎನ್ .ಶಂಕರ್, ಡಾ|| ಹೆಚ್.ವಿ.ಲೋಕೇಶ್, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಇದ್ದರು.
ಪೋಟು 1 : ತಾಲೂಕಿನ ಗುಂಡಮನತ್ತ ಗ್ರಾಮದ ಹಾಲು ಉತ್ಪಾದಕರ ಸಹಾಕರ ಸಂಘದ ಆವರಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಕೋಮುಲ್ ನಿರ್ದೇಶಕ ಎನ್.ಹನುಮೇಶ್ ಚಾಲನೆ ನೀಡಿದರು.