HOLY ROSARY CHURCH, KUNDAPUR – 450 th JUBILEE SOUVENIR 2021

ಭಂಡಾರ್ಕಾರ್ಸ್: ಇಂದಿನಿಂದ ಎರಡು ದಿನಗಳ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿ

ಕುಂದಾಪುರ: ಡಿಸೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ.

ಬೀಜಾಡಿ ಮಿತ್ರ ಸಂಗಮದ ರಜತ ಮಹೋತ್ಸವ:ಲಾಂಚನ ಅನಾವರಣ

ಬೀಜಾಡಿ: ಜಿಲ್ಲಾ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ರಜತ ಮಹೋತ್ಸವದ ಸಮಾರಂಭ “ರಜತಪಥ” ಫೆ.3 ರಿಂದ ಫೆ.5ರ ತನಕ ನಡೆಯಲಿದ್ದು, ಈ ಪ್ರಯುಕ್ತ ಲಾಂಚನ ಅನಾವರಣ ಕಾರ್ಯಕ್ರಮ ಗುರುವಾರ ನಡೆಯಿತು.
ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ಮಾಲಿಕ ಕೆ.ಎಚ್.ಮಂಜುನಾಥ ದೇವಾಡಿಗ ಲಾಂಚನ ಅನಾವರಣಗೊಳಿಸಿ ಮಾತನಾಡಿ ಯಾವುದೇ ಸಂಸ್ಥೆ 25 ವರ್ಷ ಪೂರೈಸುವುದೇ ಒಂದು ದೊಡ್ಡ ಸಾಧನೆ.ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಸ್ಥೆ ಅಭಿವೃದ್ದಿ ಹೊಂದಿಲಿ.ಸಂಸ್ಥೆಯ ರಜತ ಮಹೋತ್ಸವ ಯಶಸ್ವಿಯಾಗಲಿ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್, ಉಪಾಧ್ಯಕ್ಷ ನಾಗರಾಜ ಬೀಜಾಡಿ, ಕಾರ್ಯದರ್ಶಿ ಬಿ.ರಾಜೇಶ್ ಆಚಾರ್ಯ,ಜೊತೆ ಕಾರ್ಯದರ್ಶಿ ಪ್ರದೀಪ್ ದೇವಾಡಿಗ,ರಜತ ಮಹೋತ್ಸವದ ಸಮಿತಿಯ ಕಾರ್ಯದರ್ಶಿ ಚಂದ್ರ ಬಿ.ಎನ್.,ಉಪಾಧ್ಯಕ್ಷ ಅನುಪ್ ಕುಮಾರ್ ಬಿ.ಆರ್.,ಸಂಚಾಲಕರಾದ ಗಿರೀಶ್ ಕೆ.ಎಸ್,ಸುಭಾಷ್ ಪುತ್ರನ್,ಗಿರೀಶ್ ಆಚಾರ್ಯ,ಕೆ.ಎಚ್.ಮಂಜುನಾಥ ದೇವಾಡಿಗ ಪತ್ನಿ ವಸಂತಿ ಮಂಜುನಾಥ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆದವು

ಕುಂದಾಪುರ: ಡಿಸೆಂಬರ್ 2ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸ್ತ್ರೀಯ ಸಂಗೀತ ಕಲಾವಿದ ವಿದ್ವಾನ್ ರವಿಕಿರಣ್ ಮಣಿಪಾಲ ಅವರು ಜೀವನದ ಸಂತೋಷಕ್ಕೆ ಕಲೆ ಸಾಹಿತ್ಯ ಸಂಗೀತ ಬೇಕು. ಕಲೆಯ ಆರಾಧನೆಯಲ್ಲಿ ಸೌಂದರ್ಯದ ಅನುಭವ ಆಗುತ್ತದೆ. ಕಲೆಯಲ್ಲಿ ಬದುಕಿನ ಎಲ್ಲಾ ಸಂಘರ್ಷ ಮತ್ತು ಸಮಾಧಾನವನ್ನು ತಂದುಕೊಳ್ಳಬಹುದು ಮತ್ತು ಕಾಣಬಹುದಾಗಿದೆ. ಕಲೆ ಅಂದರೆ ಸಂಗೀತ ಸಾಹಿತ್ಯ, ನಾಟಕ, ಚಿತ್ರಕಲೆ, ಕರಕುಶಲ ಕಲೆಗಳು ಹೀಗೆ ಹಲವು ಇವೆ. ಮಾನವೀಯತೆಯನ್ನು ಕಲೆಯ ಮೂಲಕ ಪ್ರಸ್ತುತಪಡಿಸಬಹುದು. ಬದುಕಿನ ನೋವು ನಲಿವುಗಳನ್ನು, ಹತಾಶೆ ಆತಂಕದ ಸಂಗತಿಗಳನ್ನು ಕಲೆಯ ಮೂಲಕ ಪ್ರಸ್ತುತಪಡಿಸಬಹುದು. ಇದರಿಂದ ಮೌಲ್ಯ, ಸಂದೇಶ, ಸಮಾನತೆ ಸಾಮಾಜಿಕ ತುಮುಲಗಳನ್ನು ತೋರಿಸಲು ಸಾಧ್ಯವಾಗುತ್ತದೆ. ಕಲೆಯಲ್ಲಿ ಕ್ರಾಂತಿ ಮಾಡಬಹುದು. 12ನೇ ಶತಮಾನದ ವಚನಸಾಹಿತ್ಯ ಅದಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಶಾಂತಾರಾಮ್ ಅವರು ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ.ಗೊಂಡ, ಕಾರ್ಯಕ್ರಮ ಸಂಯೋಜಕ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು.
ಸುಮಾರು 7 ಸಂಗೀತ ವಿಭಾಗದಲ್ಲಿ ಸಂಗೀತ ಸ್ಪರ್ಧೆಗಳು ನಡೆದವು.
ಸಂಗೀತ ಸ್ಪರ್ಧೆಗಳ ಫಲಿತಾಂಶ: 1.ಶಾಸ್ತ್ರೀಯ ಹಾಡುಗಾರಿಕೆ: ಪ್ರಥಮ- ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು,
ದ್ವಿತೀಯ- ಉಡುಪಿಯ ಮಹಾತ್ಮ ಗಾಂಧಿ ಕಾಲೇಜು
ತೃತೀಯ- ಗಂಗೊಳ್ಳಿಯ ಎಸ್.ವಿ ಪದವಿ ಪೂರ್ವ ಕಾಲೇಜು
2.ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು
ದ್ವಿತೀಯ : ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜು, ತೃತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು
ದಾಸ ಕೀರ್ತನೆ ಸ್ಪರ್ಧೆಯಲ್ಲಿ ಪ್ರಥಮ: ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನೀಯರಿಂಗ್ ಕಾಲೇಜು
ದ್ವಿತೀಯ: ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು,
ತೃತೀಯ: ಗಂಗೊಳ್ಳಿಯ ಎಸ್.ವಿ ಪದವಿ ಪೂರ್ವ ಕಾಲೇಜು
ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು
ದ್ವಿತೀಯ: ಕುಂದಾಪುರದ ಭಂಡಾರ್ಕಾರ್ಸ್ ಪದವಿ ಕಾಲೇಜು, ತೃತೀಯ: ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜು.
ಕನ್ನಡ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು, ದ್ವಿತೀಯ: ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ತೃತೀಯ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಕಾಲೇಜು.
ಕನ್ನಡ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ: ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜು. ದ್ವಿತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು, ತೃತೀಯ:ಕುಂದಾಪುರದ ಭಂಡಾರ್ಕಾರ್ಸ್ ಪದವಿ ಕಾಲೇಜು,
ಚಿತ್ರಗೀತೆ ಸ್ಪರ್ಧೆಯಲ್ಲಿ ಪ್ರಥಮ :ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು,
ದ್ವಿತೀಯ: ಕುಂದಾಪುರದ ಬಿ.ಬಿ.ಹೆಗ್ಡೆ ಪದವಿ ಕಾಲೇಜು, ತೃತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು,
ಸಮಗ್ರ ಪ್ರಶಸ್ತಿಯನ್ನು ಉಡುಪಿಯ ಮಹಾತ್ಮ ಗಾಂಧಿ ಕಾಲೇಜು ಪಡೆಯಿತು.
ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿ ಗಣೇಶ್ ಗಂಗೊಳ್ಳಿ, ಅಶ್ವಿನಿ, ಶೃತಿ ಕಾಶಿ, ಶಾರದಾ ಹೊಳ್ಳ, ಪಾಳಿಗಾರು ಲಕ್ಷ್ಮಿನಾರಾಯಣ ಉಪಾಧ್ಯಾಯ ಮತ್ತು ಶೃದ್ಧಾ ಆಗಮಿಸಿದ್ದರು.
ಡಿಸೆಂಬರ್ 5ರಂದು ನಡೆದ “ಸಂಸ್ಥಾಪಕರ ದಿನಾಚರಣೆ” ಯಂದು ಬಹುಮಾನವನ್ನು ನೀಡಲಾಯಿತು.

ಅಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಪೂಜ್ಯ ಶಾಂತಾರಾಮ್ ಭಂಡಾರ್ಕರ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ಸದಾನಂದ ಛಾತ್ರ, ದೇವಿದಾಸ ಕಾಮತ್, ರಾಜೇಂದ್ರ ತೋಳಾರ್ ಉಪಸ್ಥಿತರಿದ್ದರು.
ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಡೆದ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ:ಟಾಟಾ ಪವರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು

ಕುಂದಾಪುರ; ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಡಿಸೆಂಬರ್ 5ರಂದು ಸಂಸ್ಥಾಪಕರ ದಿನಾಚರಣೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟಾಟಾ ಪವರ್ ಇಂಡಿಯಾದ ಟ್ರಾನ್ಸಮೀಶನ್ ಮತ್ತು ಡಿಸ್ಟ್ರಿಬ್ಯೂಶನ್ ಇದರ ಮಾಜಿ ಅಧ್ಯಕ್ಷ ಮಿನಿಷ್ ಧವೆ ಮಾತನಾಡಿ ನೆಮ್ಮದಿಯ ಮತ್ತು ಯಶಸ್ವಿ ಬದುಕು ಸಾಗಬೇಕಾದರೆ ಮುಖ್ಯವಾಗಿ ಸಂತೋಷ, ಕಠಿಣ ಪರಿಶ್ರಮ, ಮೊದಲು ಆದ್ಯತೆ ನೀಡಬೇಕು, ಮತ್ತು ವಿವೇಕ, ಜ್ಞಾನ ಉಳ್ಳವರು ಮಾತುಗಳನ್ನು ಕೇಳಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು.

ಕಾಲೇಜು ಸ್ಥಾಪಕರ ಉದಾತ್ತ ಧ್ಯೇಯಗಳನ್ನು ಅವರು ಮಕ್ಕಳಲ್ಲಿಯೂ ಇದೆ. ಅದೆ ಸಂಸ್ಕಾರ ಅವರ ಕುಟುಂಬದವರಲ್ಲಿ ಇದೆ. ಎಷ್ಟೋ ಜನರಿಗೆ ದಾರಿದೀಪವಾಗಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಪೂಜ್ಯ ಶಾಂತಾರಾಮ್ ಭಂಡಾರ್ಕರ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ಸದಾನಂದ ಛಾತ್ರ, ದೇವಿದಾಸ ಕಾಮತ್, ರಾಜೇಂದ್ರ ತೋಳಾರ್ ಉಪಸ್ಥಿತರಿದ್ದರು.
ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಡೆದ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು.

ಕೋಲಾರ:ಮುಳಬಾಗಿಲು ಅಂಜನಾದ್ರಿ ಬೆಟ್ಟದಲ್ಲಿ ಅಮಾನವೀಯ ಘಟನೆ ಹೆತ್ತ ತಾಯಿಯಿಂದಲೇ ಹೆಣ್ಣು ಮಕ್ಕಳಿಗೆ ಬೆಂಕಿ-ಓರ್ವಳು ಸಾವು

ಕೋಲಾರ:- ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಬ್ಬರು ಮಕ್ಕಳಿಗೆ ತಾಯಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಓರ್ವ ಪುತ್ರಿ ಸುಟ್ಟು ಕರಕಲಾಗಿದ್ದು, ಮತ್ತೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದೆ.
ಓರ್ವ ಮಗಳು ಅಕ್ಷಯ(8) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಮಗಳು ಉದಯಶ್ರೀ(6) ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.


ಘಟನೆ ವಿವರ


ಬುಧವಾರ ಮುಂಜಾನೆ ವಾಯುವಿಹಾರಕ್ಕೆಂದು ಅಂಜನಾದ್ರಿ ಬೆಟ್ಟದ ಬಳಿ ಜನ ಹೋದಾಗ ಚೀರಾಡುವ ಶಬ್ದ ಕೇಳಿಸಿದ್ದು, ಸಮೀಪಕ್ಕೆ ಹೋದಾಗ ಸುಟ್ಟ ಗಾಯಗಳಿಂದ ಓರ್ವ ಬಾಲಕಿ ನರಳಾಡುತ್ತ ರೋಧಿಸುತ್ತಿರುವ ಮತ್ತು ಮತ್ತೊಬ್ಬ ಬಾಲಕಿಯ ಸುಟ್ಟು ಕರಕಲಾದ ಶವ ಕಂಡು ಬಂದಿದೆ.
ಈ ದೃಶ್ಯ ಕಂಡ ಬೆಚ್ಚಿಬಿದ್ದ ಸ್ಥಳೀಯರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಾಯಿಯನ್ನು ವಶಕ್ಕೆ ಪಡೆದು ನರಳಾಡುತ್ತಿದ್ದ ಬಾಲಕಿಯನ್ನು ಪಿಎಸ್‍ಐ ಮಂಜುನಾಥ್ ಬೆಟ್ಟದಿಂದ ಎತ್ತಿಕೊಂಡೇ ಓಡಿ ಬಂದು ಆಸ್ಪತ್ರೆಗೆ ದಾಖಲಿಸಿದ ದೃಶ್ಯ ಹೃದಯ ಕಲುಕುವಂತಿತ್ತು.
ಮಕ್ಕಳಿಗೆ ಬೆಂಕಿ ಹಚ್ಚಿದ ತಾಯಿಯ ಹೆಸರು ಜ್ಯೋತಿ, ಈಕೆ ಆಂಧ್ರ ಪ್ರದೇಶದ ಪಲಮನೇನು ಬಳಿಯ ಬುಸಾನಿ ಕುರುಪಲ್ಲಿ ನಿವಾಸಿಯಾಗಿದ್ದು, ಈಕೆ ಆಂದ್ರದ ತಿರುಮೇಶ್ ಎಂಬಾತನನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕೌಟುಂಬಿಕ ಕಲಹದಿಂದ ಮನನೊಂದ ಜ್ಯೋತಿ ತನ್ನಿಬ್ಬರು ಮಕ್ಕಳೊಂದಿಗೆ ಮುಳಬಾಗಿಲಿಗೆ ಮಂಗಳವಾರ ಆಗಮಿಸಿದ್ದು,ಆತ್ಮಹತ್ಯೆಗೆ ನಿರ್ಧರಿಸಿ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದಾಳೆ.
ಮೊದಲು ಮಕ್ಕಳನ್ನು ಕೊಂದು ನಂತರ ತಾನು ಸಾಯಲು ನಿರ್ಧರಿಸಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ಮಕ್ಕಳ ಚೀರಾಟ ನೋಡಿ ಕಣ್ಣೀರು ಸುರಿಸುತ್ತಾ ಪಕ್ಕದಲ್ಲೇ ಕುಳಿತಿದ್ದಾಳೆ.
ಘಟನೆ ರಾತ್ರಿ ನಡೆದಿದ್ದರಿಂದ ಸಾರ್ವಜನಿಕರಿಗೆ ವಿಷಯ ಗೊತ್ತಾಗಿಲ್ಲ, ಮುಳಬಾಗಿಲು ಪೊಲೀಸರು ಪ್ರಕರಣ ದಾಖಲಿಸಿದ್ದು, ತಾಯಿ ಜ್ಯೋತಿಯನ್ನು ಬಂಧಿಸಿದ್ದಾರೆ.

ಶ್ರೀನಿವಾಸಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾll B R ಅಂಬೇಡ್ಕರ್ ರವರ ಪರಿವರಣ ದಿನಾಚರಣೆ

ಶ್ರೀನಿವಾಸಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 10:00 ಗಂಟೆಗೆ ಡಾll B R ಅಂಬೇಡ್ಕರ್ ರವರ ಪರಿವರಣ ದಿನಾಚರಣೆಯನ್ನು ಹಂಬಿಕೊಂಡಿದ್ದು ಹಾಗೂ SFI ಹೊಸ ಘಟಕ ವನ್ನು ರಚನೆ ಮಾಡಲಾಯಿತು ಈ ಸಂಧರ್ಭದಲ್ಲಿ ಸಭೆಯ ಅಧ್ಯಕ್ಷಯೆಯನ್ನು ಸರ್ಕಾರಿ ಬಾಲಕರ ಪದವೀ ಪೂರ್ವ ಕಾಲೀಜು ಪ್ರಾಂಶುಪಾಲರಾದ ಶೋಭಾ ಮೇಡಂ ವಯಿಸಿಕೊಂಡಿದ್ದು, ಅವರು ಅಂಬೇಡ್ಕರ್ ರವರ ಸಿಧಾಂತದ ಬಗ್ಗೆ ಮಾತನಾಡಿದರು

 ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧರ್ಶಿ ವಾಸುದೇವರೆಡ್ಡಿ ಎಸ್ ಎಫ್ ಐ ಕುರಿತು ಸುಧೀರ್ಘ ಮಾಹಿತಿಯನ್ನು ನೀಡಿದರು ಈ ಕಾರ್ಯಕ್ರಮಕ್ಕೆ ಜಿಲ್ಲಾ ಅಧ್ಯಕ್ಷ ಶಿವಪ್ಪ. ಜಿಲ್ಲಾ ಕಾರ್ಯದರ್ಶಿ ಬೀರಜ್ .ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಉದಯ್ ಕುಮಾರ್ ಕೆ. ಜಿಲ್ಲಾ ಉಪಾಧ್ಯಕ್ಷರಾದ ಆ೦ಕಿತ ಹಾಗೂ ಸುರೇಶ್ ಬಾಬು ಹಾಗೂ ರಾಜ್ಯ ಉಪಾಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು.

       ಹಾಗೆ ಹೊಸ ತಾಲೂಕು ಸಮಿತಿಯನ್ನು ರಚಿಸಲಾಯಿತು ಅದರಂತೆ ತಾಲೂಕು ಸಮಿತಿಯ ಅಧ್ಯಕ್ಷರಾಗಿ ರೇವಂತ್ ಕೆ ಏನ್ ಹಾಗೂ ಕಾರ್ಯಧರ್ಶಿಯಾಗಿ ಶ್ರೀ ಹರಿ ಎಮ್ ಸಿ, ಉಪಾಧ್ಯಕ್ಷರಾಗಿ ಉದಯ್ ಕುಮಾರ್ ಕೆ. ಮೌನಿಕಾ. ಮಂಜು ಹಾಗೂ ಜಂಟಿ ಕಾರ್ಯಧರ್ಶಿ ಯಾಗಿ ನವೀನ್ . ರಂಜಿತಾ .ಮಧು ಆಯ್ಕೆ ಆಗಿದ್ದಾರೆ.

ಯರ್ರಂವಾರಿಪಲ್ಲಿ -ಪಿಡಿಒ ಅಧಿಕಾರಿ ಮನೆಯನ್ನೇ ಪಂಚಾಯಿತಿ ಕಚೇರಿಯನ್ನೇ ಮಾಡಿಕೊಂಡು ಸರ್ಕಾರವನ್ನು, ಸಾರ್ವಜನಿಕರನ್ನ ಮೋಸ ಮಾಡುತ್ತಿದ್ದಾರೆ:ವೈ.ಆರ್.ಶ್ರೀನಿವಾಸರೆಡ್ಡಿ

ಶ್ರೀನಿವಾಸಪುರ : ತಾಲೂಕಿನ ಯರಂವಾರಿಪಲ್ಲಿ ಪಂಚಾಯಿತಿಯ ಪಿಡಿಒ ಅಧಿಕಾರಿ ಮನೆಯನ್ನೇ ಪಂಚಾಯಿತಿ ಕಚೇರಿಯನ್ನೇ ಮಾಡಿಕೊಂಡು ಕಚೇರಿಗೆ ಬಾರದೇ ಪಂಚಾಯಿತಿ ಹಣವನ್ನು ಗುಳಂ ಮಾಡಿಕೊಂಡು ಸರ್ಕಾರವನ್ನು , ಸಾರ್ವಜನಿಕರನ್ನ ಮೋಸ ಮಾಡುತ್ತಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್. ಶ್ರೀನಿವಾಸರೆಡ್ಡಿ ಪಿಡಿಒ ಅಧಿಕಾರಿ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಯರಂವಾರಿಪಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಿಂದ ಹಾಗೂ ಸದಸ್ಯರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಪ್ರವೃತ್ತಿ ವಿರುದ್ಧ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿದರು , ಸರ್ಕಾರವು ಗ್ರಾಮೀಣ ಭಾಗದ ಹಳ್ಳಿಗಳು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೋಟ್ಯಾಂತರ ರೂಗಳ ವೆಚ್ಚ ಮಾಡುತ್ತಿದೆ ಆದರೆ ಯರಂವಾರಿಪಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣವನ್ನು ಗ್ರಾ.ಪಂ. ಅಧ್ಯಕ್ಷೆ ಉಪಾಧ್ಯಕ್ಷರ ಗಮನಕ್ಕೆ ತರದೇ ಕೋಟ್ಯಾಂತರ ರೂಗಳನ್ನು ಡ್ರಾ ಮಾಡಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.

ಪಿಡಿಒ ಏಜಾಜ್‌ಪಾಷ ರವರು ಲಕ್ಷಾಂತರ ಹಣವನ್ನು ಲೋಟಿ ಮಾಡುತ್ತಿರುವ ಬಗ್ಗೆ ದಾಖಲೆಗಳು ಇದ್ದು ಈ ದಾಖಲೆಗಳನ್ನು ಸಿಇಒ ಹಾಗೂ ಇಒ ರವರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿದರು. ನರೇಗಾ ಹಾಗೂ ಇತರೆ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡಲು ಸರ್ಕಾರದಿಂದ ಡ್ಯಾಂಗಲ್‌ನ್ನು ಅಧ್ಯಕ್ಷರಿಗೊಂದು , ಪಿಡಿಒ ಗೊಂದು ನೀಡಲಾಗಿದೆ.

ಪಿಡಿಒ ರವರು ಅಧ್ಯಕ್ಷೆ ಅನಕ್ತಸ್ಥರಾಗಿದ್ದು , ಪತಿಗೆ ಆಸೆ , ಆಮೀಷಗಳನ್ನು ನೀಡಿ , ಅಧ್ಯಕ್ಷರ ಡ್ಯಾಂಗಲ್‌ನ್ನು ಸಹ ಪಡೆದುಕೊಂಡು ಲಕ್ಷಾಂತರ ಹಣವನ್ನು ಡ್ರಾ ಮಾಡಿ ಸರ್ಕಾರದ ಹಣವನ್ನು ಲೋಟಿ ಮಾಡಿದ್ದಾರೆ. ಪಿಡಿಒರವರು ಸರ್ಕಾರದ ಯಾವುದೇ ಅನುದಾನ ಬಂದರೂ ಸದಸ್ಯರ ಗಮನಕ್ಕೆ ತರುವುದಿಲ್ಲ . ೧೬ ಸದಸ್ಯರು ಕಳೆದ ೬ ತಿಂಗಳಿನಿಂದ ಸಾಮಾನ್ಯ ಸಭೆ ನಡೆದಿಲ್ಲ . ವಾರ್ಡ್ ಸಭೆ , ಗ್ರಾಮಸಭೆ ನಡೆದಿಲ್ಲ .

ಅಲ್ಲದೆ ವಸತಿ ಯೋಜನೆಗೆ ಸಂಬಂದಿಸಿದಂತೆ ವಸತಿ ಹೀನರಿಗೆ ಪಕ್ಷಾತೀತವಾಗಿ ವಸತಿಯನ್ನು ಕಟ್ಟಿಕೊಳ್ಳಲು ೧೬೨ ಫಲಾನುಭವಿಗಳ ಪಟ್ಟಿ ಮಾಡಿದರೆ , ಪಟ್ಟಿಯಲ್ಲಿ ತಮಗೆ ಇಷ್ಟ ಬಂದವರನ್ನು ಪಟ್ಟಿಗೆ ಸೇರಿಸಿದ್ದಾರೆ ಎಂದು ಪಿಡಿಒ ವಿರುದ್ಧ ಆರೋಪಿಸಿದರು . ೩೪ ಗ್ರಾಮಗಳಿಗೆ ಕಾಮಾಗಾರಿಗಳಿಗೆ ೧ ಕೋಟಿ ೩೦ ಲಕ್ಷ ಗ್ರಾಮಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ಹಣವನ್ನು ಡ್ರಾ ಮಾಡಿದ್ದಾರೆ ಎಂದು ಆರೋಪಿಸಿದರು.

ಪಂಚಾಯಿತಿಗೆ ಸಂಬಂಧಿಸಿದಂತೆ ವರ್ಷಕೊಮ್ಮೆ ಪಂಚಾಯಿತಿಯ ಖರ್ಚು ವೆಚ್ಚಗಳ ಜಮಾಬಂದಿ ಕಾರ್ಯಕ್ರಮವನ್ನು ಆಯೋಜಿಸಬೇಕಾಗಿತ್ತು . ಅದ ಸಹ ನಡೆದಿಲ್ಲ . ಪಿಡಿಓ ಏಜಾಜಪಾಷ ರವರು ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ .

ಪಂಚಾಯಿತಿಗೆ ಸಂಬಂಧಿಸಿದ ಸಾರ್ವಜನಿಕರನ್ನು ನಿಮಗೆ ಕೆಲಸ ಕೊಡುತ್ತೇನೆ ನೀವು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಮೀಷವನ್ನು ಒಡ್ಡುತ್ತಿದ್ದಾರೆ ಎಂದು ಆಪರೋಪ ವ್ಯಕ್ತಪಡಿಸಿದರು.

ಪಿಡಿಒ ಅಧಿಕಾರಿ ಕಳೆದ ೪ ತಿಂಗಳಿನಿಂದ ತಂಬ್ ಕೊಟ್ಟಿಲ್ಲ , ಇದರ ಬಗ್ಗೆ ಇಒ ಬಗ್ಗೆ ಗಮನಕ್ಕೆ ತರಲಾಗಿದೆ . ಪಿಡಿಒ ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಅನೇಕ ಬಾರಿ ಸಿಇಒ , ಇಒ ರವರು ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಪತ್ರಿಕೆ ಬಳಿ ತಮ್ಮ ಆಳಲು ತೋಡಿಕೊಂಡರು.

ಜಿಲ್ಲೆಯ ಹಿರಿಯ ಅಧಿಕಾರಿಗಳು ಪಿಡಿಒ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು . ಗ್ರಾಪಂ ಸದಸ್ಯೆ ಮಂಜುಳ ಮಾತನಾಡಿ ಸರ್ಕಾರವು ಮಹಿಳೆಯರನ್ನು ಮನೆಕೆಲಸಗಳಲ್ಲಿ ಸೀಮತವಾಗಿಸದೆ , ಮಹಿಳೆಯರನ್ನು ಸಬಲರಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇಲ್ಲಿ ನಮ್ಮನ್ನು ಪರಿಗಣಿಸದೆ ೧೫ ನೇ ಕಾಸಿನ ಯೋಜನೆಡಿಯಲ್ಲಿ ಒಟ್ಟು ೯೩ ಲಕ್ಷವನ್ನು ದೂರಪಯೋಗಪಡಿಸಿಕೊಂಡಿದ್ದಾರೆ. ಪಂಚಾಯಿತಿಯಲ್ಲಿ ಇರಬೇಕಾದ ದಾಖಲೆ ಪುಸ್ತಕಗಳು ಪಿಡಿಒ ಮನೆಯಲ್ಲಿ ಇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖಂಡ ಪದ್ಮನಾಭರೆಡ್ಡಿ ಮಾತನಾಡಿ ನನ್ನ ಹೆಂಡತಿ ರಾಧಮ್ಮ ಯರಂವಾರಿಪಲ್ಲಿ ಪಂಚಾಯಿತಿಯಲ್ಲಿ ೨೦೧೫-೨೦೨೦ ರ ಅಧ್ಯಕ್ಷರಾಗಿ ಕಾರ್ಯನಿರ್ವಹಿದ್ದರು . ಈ ೫ ವರ್ಷದ ಸಮಯದಲ್ಲಿ ಅಧ್ಯಕ್ಷರು ಸಹಿತ ಇದುವರೆಗೂ ಯಾರಿಗೂ ಗೌರವಧನ ನೀಡಿಲ್ಲವೆಂದು ದೂರಿದ್ದಾರೆ.

ಗ್ರಾ.ಪಂ.ಸದಸ್ಯರಾದ ರಾಜ , ಗೌರಿಶಂಕರ್ , ಕವಿತ , ಶಿವಾರೆಡ್ಡಿ , ಮುಖಂಡರಾದ ಸುಧಾಕರ , ಪದ್ಮನಾಭರಡ್ಡಿ , ಪಾತೂರು ಬಾಬುರೆಡ್ಡಿ , ಹರ್ಷವರ್ಧನ ಇದ್ದರು.


.

ನವ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಅಹ್ಮದ್

ನವ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀನಿವಾಸಪುರದ ಸಾದಿಕ್ ಅಹ್ಮದ್ ಅವರನ್ನು, ವೇದಿಕೆಯ ರಾಜ್ಯಾಧ್ಯ್ಕಷ ರಾಮಚಂದ್ರಪ್ಪ ಆಯ್ಕೆ ಮಾಡಿದ್ದಾರೆ. ಮುಖಂಡರಾದ ಮಂಜುನಾಥ್, ನರಸಿಂಹಯ್ಯ, ಬರೀದ್, ಸಾಬೀರ್ ಇದ್ದರು