HOLY ROSARY CHURCH, KUNDAPUR – 450 th JUBILEE SOUVENIR 2021

ಯೋಗ ಜೀವನ ಎಲ್ಲರಿಗೂ ಅವಶ್ಯಕ – ಎಂ. ಭೈರೇಗೌಡ

ಶ್ರೀನಿವಾಸಪುರ : ದುಖಃ ದುಮ್ಮಾನಗಳನ್ನು ದೂರವಿಟ್ಟುಕೊಳ್ಳಲು ಹಾಗೂ ಸಂತುಷ್ಟ ಜೀವನಕ್ಕಾಗಿ ಯೋಗ ಜೀವನ ಪ್ರತಿಯೊಬ್ಬರಿಗೂ ಇಂದು ಅತ್ಯವಶ್ಯಕವಾಗಿದೆ ಎಂದು ಸ ನೌ ಸಂ ಅಧ್ಯಕ್ಷ ಎಂ. ಭೈರೇಗೌಡ ಹೇಳಿದ್ದಾರೆ.
ಪಟ್ಟಣದ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆಯೋಜಿಸಿದ್ದ ಮಾತೃ ಭೋಜನ ಹಾಗೂ ಮಾತಾಪಿತೃಗಳ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ಮಕ್ಕಳನ್ನು ಭ್ರಾತೃತ್ವದ ಭಾವನೆಯಿಂದ ಬೆಳೆಸಿದರೆ, ಮಕ್ಕಳಲ್ಲಿ ಸಂಸ್ಕಾರ ಬೆಳೆದು, ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಅವರು ಮುಂದುವರೆದು ಮಕ್ಕಳಿಗೆ ಆಟ, ಪಾಠಗಳೊಂದಿಗೆ ದೈನಂದಿನ ದೈಹಿಕ ಶ್ರಮ ಹಾಗೂ ಯೋಗಾಭ್ಯಾಸವನ್ನು ಅಳವಡಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಸಣ್ಣವಯಸ್ಸಿನಿಂದ ಉತ್ತಮ ನಡತೆ ಮತ್ತು ಸಂಸ್ಕಾರ ಕಲಿತರೆ, ಅವರು ಜೀವನದಲ್ಲಿ ಗೌರವಪೂರ್ಣ ಬದುಕು ನಡೆಸಲು ಸಾಧ್ಯವಾಗುತ್ತದೆ. ತಂದೆ-ತಾಯಿಯ ಪಾದಪೂಜೆ ಮಾಡುವ ಸಂಸ್ಕಾರದಿಂದ ಕುಟುಂಬದಲ್ಲಿ ಪ್ರೀತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಅನುರಾಧಾ ಮಾತನಾಡಿ ಜೀವನದ ಆಧುನಿಕ ವೇಗದ ನಡುವೆ ಮಕ್ಕಳಿಗೆ ಮಾತೃಭೋಜನ, ಕೈತುತ್ತಿನ ಮಹತ್ವವನ್ನು ಕಲಿಸುವುದು ಅಗತ್ಯ. ಇಂಥ ಪರಂಪರೆ ತಾಯಿ ನಿರಂತರವಾಗಿ ಪೋಷಿಸಬೇಕು. ಯೋಗ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಸಂಸ್ಕೃತಿಯ ಉಳಿವಿಗೆ ಉಚಿತ ಸೇವೆ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಿತಿ ಎನ್.ಜಿ. ವರಲಕ್ಷ್ಮಮ್ಮ ಮಾತನಾಡಿ, ಮಕ್ಕಳು ಮನೆ ಬಿಡುವಾಗ ತಾಯಿ-ತಂದೆಯ ಆಶೀರ್ವಾದ ಪಡೆದು ಹೋಗುವ ಸಂಸ್ಕಾರ ಬೆಳೆಸಬೇಕು. ಕೈತುತ್ತಿನ ಮೂಲಕ ಹೆತ್ತವರ ಮೇಲಿನ ಪ್ರೀತಿ, ಭಾವನೆಗಳು ಮತ್ತಷ್ಟು ಗಾಢವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪೋಷಕರು ಮತ್ತು ಯೋಗ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವ ಕಲಾ ದಿನದ ಸಂಭ್ರಮಾಚರಣೆ

ಎಂಐಟಿ ಕುಂದಾಪುರದ ವಿದ್ಯಾರ್ಥಿನಿ ಮೇಘನಾ ಇವರಿಂದ ಎಸಿಎಸ್ ಟಿಎಂ ಇಂಟೆರ್ ರ್ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ಪ್ರಬಂಧ ಮಂಡನೆ

ಶ್ರೀನಿವಾಸಪುರ ಅರಣ್ಯ ಒತ್ತುವರಿದಾರರ ಮತ್ತು ಅರಣ್ಯ ಇಲಾಖೆ ಮಧ್ಯೆ ಸಂಘರ್ಷ

ಶ್ರೀನಿವಾಸಪುರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭ

ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 3 – ದಿನ 8 “ಕೆಸರು ಗದ್ದೆಯಲ್ಲೊಂದಿನ”

ಮಿಲಾಗ್ರಿಸ್ ಕಾಲೇಜ್ ಕೈಗಾರಿಕಾ ಪೂರ್ವ ಭೇಟಿ ತರಬೇತಿ ಕಾರ್ಯಕ್ರಮ / Milagres College – Pre-Industrial Visit Training Program

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜ್ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ನಿಯೋಜನೆ ಕೋಶದಿಂದ ಕೈಗಾರಿಕಾ ಭೇಟಿ / Industrial visit by Milagres College Career Guidance and Placement Cell, Kalyanpur

ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 3 – ದಿನ 7