HOLY ROSARY CHURCH, KUNDAPUR – 450 th JUBILEE SOUVENIR 2021

ಫಿಟ್ ಇಂಡಿಯಾ ಪ್ರೀಡಂ ರನ್ ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮ


ಅಕ್ಟೋಬರ್ 30ರಂದು ಭಂಡಾರ್ಕಾರ್ಸ್ ಕಾಲೇಜಿನ ಏನ್ ಎಸ್ ಎಸ್ ಘಟಕ , ಮಂಗಳೂರಿನ ಯಾನೆಪೋಯ ದಂತ ವಿಜ್ಞಾನ ಕಾಲೇಜಿನ ಏನ್ ಏಸ್ ಎಸ್ ಘಟಕ, ನಾವುಂದ ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್ ನಾವುಂದ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ಫ್ರಿಡಂ ರನ್ 3.0 ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುಂದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಿತು.
ಸುಮಾರು 200 ಏನ್ ಎಸ್ ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀಚ್ ಪರಿಸರವನ್ನು ಸ್ವಚ್ಚಗೊಳಿಸಿದರು.
ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಹಾಗೂ ಸ್ಥಾಪಕ ಅದ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಎಲ್ಲಾ ಲಯನ್ಸ್ ಸದಸ್ಯರು, ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಶಿಧರ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ದಿನೇಶ್ ಆಚಾರ್ ವಂದಿಸಿದರು.ಯೆನೆಪೋಯ ಕಾಲೇಜಿನ ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ. ಇಮ್ರಾನ್, ಭಂಡಾರ್ಕರ್ಸ್ ಕಾಲೇಜಿನ ಏನ್ ಎಸ್ ಎಸ್ ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್ ಹಾಗೂ ಅರುಣ್ ಎ ಎಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಶುಭಕಾರಾಚಾರಿ ಹಾಗೂ ಉಪನ್ಯಾಸಕರಾದ ಅಣ್ಣಪ್ಪ ಪೂಜಾರಿ, ಶರಣ್ ಹಾಗೂ ಸಂತೋಷ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ವಿದುಷಿ ಸುಜಾತ ಗುರವ್ ಹಿಂದುಸ್ಥಾನಿ ಗಾಯನ ನಡೆಯಲಿದೆ


ವಿದುಷಿ ಶ್ರೀಮತಿ ಸುಜಾತ ಗುರವ್ ಅವರ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ನ. 6 ರಂದು ಆದಿತ್ಯವಾರ ಕುಂದಾಪುರದ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ (ರಿ.) ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ಖಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಮತ್ತು ಶ್ರೀ ಪ್ರಕಾಶ್ ರಾವ್ ಸ್ಮಾರಕ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮಕ್ಕೆ ಸಂಗೀತಾಸಕ್ತರನ್ನ ಆಹ್ವಾನಿಸಲಾಗಿದೆ.
ತಬಲಾದಲ್ಲಿ ಟಿ. ರಂಗ ಪೈ, ಮಣಿಪಾಲ, ಹಾರ್ಮೋನಿಯಂನಲ್ಲಿ ಶಶಿಕಿರಣ, ಮಣಿಪಾಲ ಸಹಕರಿಸಲಿದ್ದಾರೆ. ಶ್ರೀಮತಿ ಸುಜಾತ ಗುರವ್ ಪ್ರಸಿದ್ಧ ಸಂಗೀತಕಾರ ಸಂಗಮೇಶ್ವರ ಗುರವ್ ಅವರ ಪುತ್ರಿಯಾಗಿದ್ದಾರೆ. ಇವರ ಸಹೋದರ ಕೈವಲ್ಯ ಕುಮಾರ್ ಗುರವ್ ಸಹ ಇವರ ಗುರುವಾಗಿದ್ದಾರೆ.

ಸೌದಿ ಅರೇಬಿಯಾ ಕಾನೂನು ಉಲಂಘನೆ; ವಾರದೊಳಗೆ 17,153 ಜನರ ಬಂಧನ

ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ ಪೋಷಕ -ಶಿಕ್ಷಕ ಸಂಘದ (ಪಿಟಿಎ) ಸಭೆ/ Milagris College Kalyanpur Parent-Teacher Association (PTA) meeting

SGFI ನ್ಯಾಷನಲ್ಸ್‌ನ ರೋಲರ್ ಸ್ಕೇಟಿಂಗ್‌ನಲ್ಲಿ ಮೌಂಟ್ ಕಾರ್ಮೆಲ್‌ನ ಜೆಸ್ನಿಯಾ ಕೊರೆಯಾಗೆ ಚಿನ್ನದ ಪದಕ/Jesnia Correa of Mount Carmel Rolls to Victory in Roller Skating at SGFI Nationals

ಕರ್ನಾಟಕ ರಾಜ್ಯ ಚಾಂಪಿಯನ್‌ ಶಿಪ್‌ನಲ್ಲಿ ಬಾರ್ಕೂರಿನ ಪವರ್‌ಲಿಫ್ಟರ್ ರೋಶನ್ ಲೋಬೊಗೆ ಬೆಳ್ಳಿ ಪದಕ

ಬಂಟ್ಟಾಳ ವಲಯದ ಅಲ್ಲಿಪಾದೆ ಚರ್ಚಿನಲ್ಲಿ  ಯಾಜಕಿ ದೀಕ್ಷೆಯ ಸಂಭ್ರಮ/ Priestess ordination ceremony at Allipade Church in Banttala zone

ಶಿವಮೊಗ್ಗ ಡಯಾಸಿಸ್‌ನ ಡಾನ್ ಬಾಸ್ಕೋ ಮಿಷನ್‌ನಲ್ಲಿ ಪ್ರಾದೇಶಿಕ ವಿದ್ಯಾರ್ಥಿಗಳ ನಾಯಕತ್ವ ತರಬೇತಿ ಕಾರ್ಯಕ್ರಮ (RSLTP) ಆರಂಭ/Regional Students Leadership Training Program (RSLTP) begins at Don Bosco Mission, Davanagere, Diocese of Shimog

ಎಸ್.ಎಸ್.ಎಲ್.ಸಿ. ಫಲಿತಾಂಶ – ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಶೇ.92.68 ಫಲಿತಾಂಶ

ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ï SSLC ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ಕಥೊಲಿಕ ಧರ್ಮಪ್ರಾಂತ್ಯಕ್ಕೆ ನಿಯುಕ್ತಿಗೊಂಡ ಇಬ್ಬರಿಗೆ ಗುರುದೀಕ್ಷೆ ಪ್ರದಾನ