ಹಿಜಾಬ್- ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ರಾಜ್ಯ ಬಂದ್‌ ಕರೆಗೆ ಶ್ರೀನಿವಾಸಪುರದಲ್ಲಿ ಬೆಂಬಲ ವ್ಯಕ್ತವಾಗಿದೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಹಿಜಾಬ್ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕರ್ನಾಟಕ ಅಮೀರ್ ಎ ಶರೀಯತ್‌ನ ಮೌಲಾನಾ ಸಗೀರ್ ಅಹ್ಮದ್ ಕರೆ ನೀಡಿರುವ ರಾಜ್ಯ ಬಂದ್‌ಗೆ ಶ್ರೀನಿವಾಸಪುರ ಗುರುವಾರ ಬೆಂಬಲ ವ್ಯಕ್ತವಾಗಿದೆ .
ಮುಸ್ಲಿಮರಿಗೆ ಸೇರಿದ ಬಹುತೇಕ ಅಂಗಡಿಗಳು , ಮಳಿಗೆಗಳು , ಹೊಟೇಲ್ ಗಳು ತೆರೆಯಲಿಲ್ಲ . ಕೆಲವು ಶಿಕ್ಷಣ ಸಂಸ್ಥೆಗಳು , ಮದ್ರಸಗಳಿಗೆ ರಜೆ ಸಾರಲಾಗಿದೆ . ಅಲ್ಲದೆ ಆಜಾದ್ ರಸ್ತೆ, ರಾಜಾಜಿ ರಸ್ತೆ, ಟಿಪ್ಪು ಸರ್ಕಲ್, ತರಕಾರಿ ಮಾರುಕಟ್ಟೆ, ಮಟನ್ ಮಾರ್ಕೆಟ್, ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡಿವೆ .
ಮುಸ್ಲಿಂ ಮಾಲಕತ್ವದ ಕಚೇರಿಗಳು , ಅಂಗಡಿಗಳು , ಮಳಿಗೆಗಳು , ಹೊಟೇಲ್ ಗಳು ವರ್ಕ್ ಶಾಪ್‌ಗಳು , ಅಂಚೆ ಕಛೇರಿ ರಸ್ತೆಯ ಫುಟ್ ವೀರ್ ಅಂಗಡಿಗಳು, ಗುತ್ತಿಗೆ ಸಂಸ್ಥೆಗಳು ಕೂಡ ಮುಚ್ಚಲ್ಪಟ್ಟಿವೆ .
ಮುಸ್ಲಿಂ ಸಂಘಟನೆಗಳೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ .