ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡುನಂಟ್ ಇವರ ಪುಣ್ಯ ತಿಥಿಯ ದಿನ ಕುಂದಾಪುರದಲ್ಲಿ ಆರೋಗ್ಯ ತಪಾಸಣೆ ಶಿಬಿರ

ಕುಂದಾಪುರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡುನಂಟ್ ಇವರ ಪುಣ್ಯ ತಿಥಿ ಯಾದ ಈ ದಿನ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದ ಎದುರು ಆರೋಗ್ಯ ತಪಾಸಣೆ ಶಿಭಿರ ವನ್ನು ಆಯೋಜಿಸಲಾಯಿತು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ಗಾಟಿಸಿ ಪುಷ್ಪಾರ್ಚನೆ ಗೈದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಮತ್ತು ರೆಡ್ ಕ್ರಾಸಿನ ಸಿಭಂದಿಗಳು ಉಪಸ್ಥಿತರಿದ್ದರು. 167 ಜನರು ಇದರ ಪ್ರಯೋಜನ ಪಡೆದರು.