ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಕರೋನ ವಾರಿಯರ್ಸ್ ವ್ಯೆದ್ಯರುಗಳಿಗೆ ಸನ್ಮಾನ

ವರದಿ: ವಿಲ್ಫ್ರೆಡ್  ಮಿನೆಜೆಸ್, ಹಂಗಳೂರು

ಕುಂದಾಪುರ, ಫೆ.3: ಇತ್ತೀಚೆಗೆ ಲಯನ್ಸ್ ಕ್ಲಬ್ ಹಂಗಳೂರಿಗೆ ಜಿಲ್ಲಾ ಗವರ್ನರ್ ಆದ ಲಯನ್ N M ಹೆಗಡೆಯವರ ಅಧಿಕ್ರತ ಭೇಟಿಯ ಸಂದರ್ಭದಲ್ಲಿ ಕುಂದಾಪುರ ತಾಲೂಕಿನ ಆರೋಗ್ಯ ಅಧಿಕಾರಿಗಳಾದ ಡಾ! ನಾಗಭೂಷಣ್ ಉಡುಪ ಮತ್ತು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಗಳಾದ ಡಾ! ನಾಗೇಶ್ ಇವರನ್ನು ಸನ್ಮಾನಿಸಲಾಯಿತು.

ಕರೋನ-19 ರ ಅವಧಿಯಲ್ಲಿ ತಮ್ಮ ಜೀವನದ ಹಂಗು ತೊರೆದು ಆಸ್ಪತ್ರೆಯಲ್ಲಿ ರೋಗಿಗಳ ಬಗ್ಗೆ ಬಹಳಷ್ಟು ಮತುವರ್ಜಿವಹಿಸಿ, ಕರೋನವನ್ನು ತಾಲೂಕಿನ ಪ್ರಾಥಮಿಕ ಹಂತದಲ್ಲಿ ಹಿಡಿತದಲ್ಲಿರುವಲ್ಲಿ ಯಶಸ್ವಿಯಾದ ಇರ್ವರು ಆರೋಗ್ಯಾಧಿಕಾರಿಗಳನ್ನು, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಮೇಶ್ ಕೆ ಕುಂದರ್ ಇವರ ನೇತೃತ್ವದಲ್ಲಿ ಜಿಲ್ಲಾ ಗವರ್ನರ್ ಲಯನ್ N M ಹೆಗಡೆ ಮತ್ತು ಲಯನ್ಸ್ ಪದಾಧಿಕಾರಿಗಳು ಸನ್ಮಾನಿಸಿದರು.