

ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ನಡೆಸಿಕೊಟ್ಟರು. ಕುಂದಾಪುರ ರೋಟರಿ ದಕ್ಷಿಣ, ರೋಟರಿ ಜಿಲ್ಲಾ ನಿಧಿಯೊಂದಿಗೆ ಈ ಯೋಜನೆ ರೂಪಿಸಲು ಸಹಕರಿಸಿದುದಕ್ಕೆ ಅಭಿನಂದಿಸಿದರು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಮತ್ತು ಸಚಿನ್ ನಕ್ಕತ್ತಾಯ ಉಪಸ್ಥಿತರಿದ್ದರು.