ಗಾಂಧೀಜಿ ಬದುಕು ಮಾದರಿ, ಅವರ ಜೀವನ ದರ್ಶನ ಸರ್ವಕಾಲಿಕ ಮೌಲ್ಯ ಪಡೆದಿದೆ : ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಹಾತ್ಮಾ ಗಾಂಧೀಜಿ ಬದುಕು ಮಾದರಿಯಾಗಿದೆ. ಅವರ ಜೀವನ ದರ್ಶನ ಸರ್ವಕಾಲಿಕ ಮೌಲ್ಯ ಪಡೆದಿದೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಗಾಂಧೀಜಿ ಅವರ ತತ್ವ ಸಿದ್ಧಾಂತ ಪಾಲನೆ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ದೇಶ ಸೇವೆ ಸ್ಮರಣೀಯ. ಅವರು ಪ್ರತಿಭೆ, ಧೈರ್ಯ ಮತ್ತು ದೂರದೃಷ್ಟಿಗೆ ಹೆಸರಾಗಿದ್ದಾರೆ. ಅವರ ದೇಶ ಸೇವೆಯನ್ನು ಜನರು ಇಂದಿಗೂ ಸ್ಮರಿಸುತ್ತಾರೆ ಎಂದು ಹೇಳಿದರು.
ಶಿರಸ್ತೇದಾರ್ ಮನೋಹರ ಮಾನೆ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಶ್ರೀನಿವಾಸಯ್ಯ, ಚಿಕ್ಕನಾರಾಯಣಗೌಡ, ನಿರ್ಮಲ, ಪದ್ಮ ಇದ್ದರು.