ಗಾಂಧಿ ಜಯಂತಿಯ ಪ್ರಯುಕ್ತ ,ಸ್ವಚ್ಛತೆಯೊಂದಿಗೆ…. ಮಹಾತ್ಮನತ್ತ

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್ :ಗಾಂಧಿ ಜಯಂತಿಯ ಪ್ರಯುಕ್ತ ,ಸ್ವಚ್ಛತೆಯೊಂದಿಗೆ…. ಮಹಾತ್ಮನತ್ತ …  ನಮ್ಮ ಚಿತ್ರ….ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಬೆಳ್ಮಣ್ ಜೇಸಿಐ ಘಟಕದ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ  ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ಇವರ ಸಹಯೋಗದೊಂದಿಗೆ ,ಅಬ್ಬನಡ್ಕ  ಪರಿಸರದಲ್ಲಿ ನಡೆಯಿತು. ಜೆಸಿಐ ಬೆಳ್ಮಣ್ ಘಟಕದ  ಅಧ್ಯಕ್ಷರಾದ ಜೆಎಫ್ಎಂ  ಕೃಷ್ಣ ಪವಾರ್, ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಸಂದೀಪ್ ವಿ ಪೂಜಾರಿ ,ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ಉಪಸ್ಥಿತರಿದ್ದು ಈ ಕಾರ್ಯಕ್ರಮದಲ್ಲಿ ಸಹಕರಿಸಿದರು.