ಬಸ್ರೂರುರಿನಲ್ಲಿ ಉಚಿತ ಇಸಿಜಿ ಹಾಗೂ ಟೆಲಿಕನ್ಸಟೇಶನ್ ಶಿಬಿರ

ಕಥೊಲಿಕ್ ಸಭಾ ಉಡುಪಿ ಪ್ರದೇಶ(ರಿ) ಬಸ್ರೂರು ಘಟಕ  ಹಾಗೂ ಮಿತ್ರ ಜ್ಯೋತಿ ಟ್ರಸ್ಟ್  ಮೂಡ್ಕೇರಿ ಬಸ್ರೂರು ಮತ್ತು ಕಾರ್ಡಿಯೋಲಜಿ ಡೋರ್ ಸ್ಟೆಸ್ CAD ಫೌಂಡೇಶನ್ ಟ್ರಸ್ಟ್ ವತಿಯಿಂದ “ಉಚಿತ ಇಸಿಜಿ ಹಾಗೂ ಟೆಲಿಕನ್ಸಟೇಶನ್ ಕಾರ್ಯಕ್ರಮವನ್ನು ಬಸ್ರೂರು ಸಂತ ಮೇರಿ ಫಿಲಿಪ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. (ಅ.7)  

  ಕಾರ್ಯಕ್ರಮವನ್ನು ಸಂತ ಮೇರಿ ಫಿಲಿಪ್ ಚರ್ಚಿನ ಗುರುಗಳಾದ ವಂ|ಫಾ|ಚಾರ್ಲ್ಸ್ ನೊರೊನ್ಹಾರವರು ಉದ್ಘಾಟಿಸಿ “ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮೂಡಿ ಬರಲಿ, ಇದರಿಂದ ಹ್ರದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಜಾಗ್ರತರಾಗಲು ಹಾಗೂ ಕಾಳಾಜಿ ವಹಿಸಲು ತುಂಬಾ ಸಹಕಾರಿಯಾಗುತ್ತದೆ” ಎಂದು ಶುಭ ಹಾರೈಸಿದರು. ಕಾರ್ಯಕ್ರಮವು ಡಾ|ಪದ್ಮನಾಭ ಇವರ ಮಾರ್ಗದರ್ಶನ ಹಾಗೂ ಸಹಕಾರದಿಂದ ನಡೆಯಿತು.

    ಈ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಮಂದಿ ಫಲಾನುಭವಿಗಳು ಭಾಗಿಯಾಗಿ ಪರೀಕ್ಷೆ ಮಾಡಿಕೊಂಡು ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಮಿತ್ರ ಜ್ಯೋತಿ ಟ್ರಸ್ಟಿನ ಅಧ್ಯಕ್ಷರಾದ ಅಶೋಕ್ ಬಿ.ಕೆ. ಉಪಸ್ಥಿತರಿದ್ದು, ಕಥೊಲಿಕ್ ಸಭಾ ಬಸ್ರೂರು ಘಟಕದ ಅಧ್ಯಕ್ಷ ವಿಕ್ರಮ್ ಡಿಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಮರಿಯಾ ಡಿಸಿಲ್ವಾ ವಂದಿಸಿದರು. ಫ್ಲೈವನ್ ಡಿಸೋಜಾ ನಿರೂಪಿಸಿದರು.