ದೆಹಲಿ, ಡಿ. 26 ; ಭಾರತದ ಖ್ಯಾತ ಅರ್ಥ ಶಾಸ್ತ್ರಜ್ನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ತಮ್ಮ 92 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಮಾಜಿ ಪ್ರಧಾನಿ ಅವರನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು
ಸಿಂಗ್ ಅವರು 33 ವರ್ಷಗಳ ಅವಧಿಯ ನಂತರ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾದ ತಿಂಗಳುಗಳ ನಂತರ ಅವರು ಅಕ್ಟೋಬರ್ 1991 ರಲ್ಲಿ ರಾಜ್ಯಸಭೆಯನ್ನು ಪ್ರವೇಶಿಸಿದರು.
ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿ, ಸಿಂಗ್ ಅವರು 33 ವರ್ಷಗಳ ಅವಧಿಯ ನಂತರ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.
ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಸೆಪ್ಟೆಂಬರ್ 26, 1932 ರಂದು ಜನಿಸಿದರು.
ಡಾ. ಮನಮೋಹನ್ ಸಿಂಗ್ ಅವರು 1972 ರಲ್ಲಿ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅವರು 1982-1985 ರ ಅವಧಿಯಲ್ಲಿ ಆರ್ಬಿಐ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದರು. ಅವರು ಸಿಖ್ ಸಮುದಾಯದ ಏಕೈಕ ಸಿಖ್ ಪ್ರಧಾನಿ ಮಂತ್ರಿಯಾಗಿದ್ದರು. ಭಾರತ ದೇಶ ಮತ್ತು ಈಡೀ ಜಗತ್ತು ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾಲದಲ್ಲಿ, ಅವರ ಆರ್ಥಿಕ ಪರಿಸ್ಥಿತಿಯಿಂದ ಭಾರತವನ್ನು ತ್ತಮ್ಮ ಆರ್ಥಿಕ ನೀತಿಗಳಿಂದ ಮೇಲಕ್ಕೆ ಎತ್ತಿದಂತ ಧಿಮಂತ ಪ್ರಧಾನಿಯಾಗಿದ್ದರು.