

ಬೆಂಗಳೂರು, ಜೂನ್ 03: ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕ್ಷಮೆ ಕೇಳುವುದಿಲ್ಲವೆಂದ ಉದ್ದಟತನ ಮೆರೆದಿದ್ದ ನಟ ಕಮಲ್ ಹಸನ್ಗೆ ಹೈಕೋರ್ಟ್ ಭಾರೀ ಚಾಟಿ ಬೀಸಿದೆ.ಮೊದಲು ಕನ್ನಡಿಗರ ಕ್ಷಮೆ ಕೇಳಿ. ಆಮೇಲೆ ಅರ್ಜಿ ವಿಚಾರಣೆ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಇಂದು ಸ್ಪಷ್ಟಪಡಿಸಿದೆ.
ಥಗ್ ಲೈಫ್ ಸಿನಿಮಾ ಬಿಡುಗಡೆ ನಿರ್ಬಂಧವನ್ನು ತೆರವು ಮಾಡುವಂತೆ ಕಮಲ್ ಹಾಸನ್ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮೊದಲು ಕನ್ನಡಿಗರ ಕ್ಷಮ ಕೇಳಿ, ನಂತರವೇ ಅರ್ಜಿವಿಚಾರಣೆ ನಡೆಸುತ್ತೇವೆ ಎಂದು ಹೈಕೋರ್ಟ್ ಕಮಲ್ಹಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕಮಲ್ಹಸನ್ ಯಾರೇ ಇರಲಿ, ನೆಲ- ಜಲ ವಿಚಾರದಲ್ಲಿ ರಾಜಿ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಮಲ್ಹಸನ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಪ್ರಸನ್ನ ಅವರು ಯಾವುದೋ ಭಾಷೆಯಿಂದ ಕನ್ನಡ ಹುಟ್ಟಿದೆ ಎಂದರೆ ಹೇಗೆ? ಇಂದಿನ ಪರಿಸ್ಥಿತಿಗೆ ಕಮಲ್ ಹಸನ್ ನೇರ ರಾರಣ. ಮೊದಲು ಆ ಬಗ್ಗೆ ಕ್ಷಮೆ ಕೇಳಿ. ಬಳಿಕ ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ. ಎಂದು ಹೇಳಿದ್ದಾರೆ.
ಸಿನಿಮಾ ಬಿಡುಗಡೆಗೆ ತೊಂದರೆ ಆಗುತ್ತದೆ ಎಂದು ಅರ್ಜಿ ಹಾಕಿದ್ದೀರಿ. ‘ನನಗೆ ತಲೆಯಲ್ಲಿ ಬುದ್ಧಿ ಇಲ್ಲದೇ ಆ ರೀತಿ ಮಾತನಾಡಿದೆ’ ಎಂದು. ಕನ್ನಡಿಗರ ಕ್ಷಮೆ ಕೇಳಿ. ಈ ಹಿಂದೆ ರಾಜಗೋಪಾಲಾಚಾರಿ ಕ್ಷಮೆ ಕೇಳಿದ್ದರು. ಬಳಿಕ ಪರಿಸ್ಥಿತಿ ತಣ್ಣಣಾಯ್ತು ಎಂದು ನ್ಯಾಯಮೂರ್ತಿ ಪ್ರಸನ್ನ, ಕಮಲ್ ಹಸನ್ಗೆ ಮಾತಿನ ಚಾಟಿ ಬಿಸಿದರು. ಥಗ್ ಲೈಫ್ ಸಿನಿಮಾ ಪ್ರಚಾರದ ವೇಳೆ ಕಮಲ್ಹಸನ್ ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದೆ ಎಂಬ ಅಗತ್ಯವಿಲ್ಲದ ಅಸಂಬದ್ಧ ಹೇಳಿಕೆ ನೀಡಿದ್ದರು. ಇದಕ್ಕೆ ಕನ್ನಡಿಗರು ಹಾಗೂ ಕನ್ನಡ ಪರ ಸಂಘಟನೆಗಳ ಆಕ್ರೋಷಕ್ಕೆ ಕಾರಣವಾಗಿ, ಥಗ್ ಲೈಫ್ ಸಿನಿಮಾ ಬಿಡುಗಡೆಗೆ ನೀಷೆದದ ಬೆದರಿಕೆ ಹಾಕಿತ್ತು. ಫಿಲ್ಮ್ ಚೆಂಬರ್ ಕೂಡ ಕ್ಷಮೆ ಕೇಳಲು ಒತ್ತಾಯಿಸಿತ್ತು.