ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಚಿನ್ನದ ಪದಕ ಪಡೆದಿರುವ ಮಿಸ್ಸಾ ತಬಸ್ಸುಮ್ ಗೆ ಸನ್ಮಾನ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,   ಸಂಪಾದಕರು:ಬರ್ನಾಡ್ ಡಿ’ಕೋಸ್ತಾ

ಶ್ರೀನಿವಾಸಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ 2021-22 ನೇ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಕಾಲೇಜಿನ ವಿದ್ಯಾರ್ಥಿನಿ ಮಿಸ್ಸಾ ತಬಸ್ಸುಮ್ ಅವರನ್ನು ಅಭಿನಂದಿಸಲಾಯಿತು . ಪ್ರಾಂಶುಪಾಲ ಎಸ್.ಸಣ್ಣ ವೀರಯ್ಯ , ಉಪನ್ಯಾಸಕರಾದ ಎಸ್.ಮಧು , ಡಾ.ವೆಂಕಟನಾರಾಯಣ , ಡಾ.ಮಂಜುನಾಥ್ , ಡಾ . ಮೃತ್ಯುಂಜಯ್ , ಎಚ್.ಮಹದೇವಯ್ಯ , ಚಿನ್ನಪ್ಪರೆಡ್ಡಿ , ಬಿ.ನವೀನ್ ಕುಮಾರ್ , ಪ್ರತಿಭಾ , ಪದ್ಮ ಇದ್ದರು.