ಬಾರ್ಕೂರಿನಲ್ಲಿ ಭಾಗ್ಯವಂತ ಪಾದ್ರೆ ಪಿಯೊರ ಹಬ್ಬ

ಬಾರ್ಕೂರು: ಭಾಗ್ಯವಂತ ಪಾದ್ರೆ ಪಿಯೊರ ವಾರ್ಷಿಕ ಹಬ್ಬವನ್ನು ಪ್ರಥಮವಾಗಿ ಇದೇ ಸಪ್ಟೆಂಬರ್ 23 ರಂದು ಬಾರ್ಕೂರು ಸಂತ ಪೀಟರ್ ಇಗರ್ಜಿಯಲ್ಲಿ ಆಚರಣೆ ಆರಂಭಗೊಂಡಿತು.

ಬೆಂಗಳೂರಿನ ಕಾಪುಚಿನ್ ಧರ್ಮಗುರುಗಳಾದ ಫಾ| ನವೀನ್ ಡಿಸೋಜಾ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಸಂದೇಶವನ್ನು ನೀಡಿದರು. ಬಲಿದಾನದ ತರುವಾಯ ಪಾದ್ರೆ ಪಿಯೊರ ಅವಶೇಷ (ಭಾಗವೊಂದನ್ನು) ಮೆರವಣಿಗೆಯನ್ನು ಮಾಡಲಾಯಿತು. ಕಾರ್ಕಳ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ರೆಕ್ಟರ್ ವಂ|ಫಾ| ಆಲ್ಬನ್ ಡಿಸೋಜಾರು ನವಿಕ್ರತ ಮಾಡಿದ ಚಾಪೆಲ್ ಮತ್ತು ಪಾದ್ರೆ ಪಿಯೊರ ಎರಡು ಪ್ರತಿಮೆಗಳನ್ನು (ಪ್ರತಿಕೃತಿಗಳು) ಆಶಿರ್ವಾದಿಸಿ, ಪಾದ್ರೆ ಪಿಯೊರ ಅವಶೇಷವನ್ನು ಚಾಪೆಲ್ ನಲ್ಲಿ ಪ್ರತಿಷ್ಠಾಪನೆಯನ್ನು ಮಾಡಿದರು.

ಚರ್ಚ್ ಉಪಾಧ್ಯಕ್ಷರಾದ ಹೆರಾಲ್ಡ್ ಡಿಸೋಜಾ, ಕಾರ್ಯದರ್ಶಿ ವಿವೆಟ್ ಲುವಿಸ್, ಸರ್ವ ಆಯೊಗಾಂಚೊ ಸಂಯೋಜಕ ಎರಿಕ್ ಸೋನ್ಸ್, ಕೊನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಜಸ್ಮಿತಾ ಕ್ರಾಸ್ತಾ ಮತ್ತು ಎಲ್ಲಾ ವಾಳೆಯ ಗುರಿಕಾರರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಚರ್ಚ್ ಮತ್ತು ವಿವಿಧ ಇಗರ್ಜಿಗಳಿಂದ ಪಾದ್ರೆ ಪಿಯೊರ ಭಕ್ತಾಧಿಗಳು ಈ ಸಂಭ್ರಮದಲ್ಲಿ ಹಾಜರಿದ್ದರು