

ಕುಂದಾಪುರ, ಜೂ.16; ಸಂತ ಪಿಯುಸ್ ಹತ್ತನೇ ಚರ್ಚ್ ಹಂಗ್ಳೂರಿನಲ್ಲಿ ದಿನಾಂಕ 15ರ ರವಿವಾರದಂದು ದಿವ್ಯ ಬಲಿ ಪೂಜೆಯೊಂದಿಗೆ ಅಪ್ಪಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು ನಾಲ್ಕು ಮಂದಿ ಧರ್ಮಗುರುಗಳು ಬಲಿಪೂಜೆಯನ್ನು ಅರ್ಪಿಸಿದರು. ಕಟ್ಕೆರೆಯ ಕಾರ್ಮೆಲ್ ಆಶ್ರಮದ ವಂ. ಗುರು ಜೊ.ಸಿ. ಸಿದ್ದಕಟ್ಟೆ ಪ್ರವಚನ ನೀಡಿದರು.
ಬಲಿಪೂಜೆಯ ನಂತರ ಅಪ್ಪಂದಿರಿಗೆ ಶುಭಾಶಯ ಕೋರುವ ಕಾರ್ಯಕ್ರಮವು ಧರ್ಮಕೇಂದ್ರದ ವಂ. ಗುರು ಆಲ್ಬರ್ಟ್ ಕ್ರಾಸ್ತಾ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ವಂ. ಗುರು ಜೊ.ಸಿ. ಸಿದ್ದಕಟ್ಟೆ ಇವರು ಉಪಸ್ಥಿತರಿದ್ದರು. ಇವರೊಂದಿಗೆ ವೇದಿಕೆಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷ ಶ್ರೀ. ಜೇಮ್ಸ್ ಡಿಮೆಲ್ಲೊ, ಕಾರ್ಯದರ್ಶಿ ಶ್ರೀಮತಿ ರೇಷ್ಮಾ ಡಿಸೋಜ, 20 ಆಯೋಗಗಳ ಸಂಯೋಜಕಿ ಶ್ರೀಮತಿ ಲೀನಾ ತಾವ್ರೊ, ಸಂತ ಆನ್ನಾ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟೆರ್ ವೆರೊನಿಕಾ, ಅಪ್ಪಂದಿರ ಪ್ರತಿನಿಧಿ ಶ್ರೀ. ಅಲೆಗ್ಸಾಂಡರ್ ಲುವಿಸ್, ಹಾಗೂ ಕುಟುಂಬ ಆಯೋಗದ ಸಂಚಾಲಕಿ ಶ್ರೀಮತಿ ನತಾಲಿನ್ ಡಿಸೋಜ ಉಪಸ್ಥಿತರಿದ್ದರು.
ಶ್ರೀಮತಿ ನತಾಲಿನ್ ಡಿಸೋಜರವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಅಲೆಗ್ಸಾಂಡರ್ ಲುವಿಸ್ ರವರು ಅಪ್ಪಂದಿರ ಮನದ ಬೇಗುದಿಯನ್ನು ಸಭೆಯ ಮುಂದಿಟ್ಟರು. ವಂ. ಗುರು ಜೊ. ಸಿ. ಸಿದ್ದಕಟ್ಟೆ ಅಪ್ಪಂದಿರ ಪ್ರೀತಿ, ಜವಾಬ್ದಾರಿ, ತ್ಯಾಗ, ಸೇವೆಯ ಬಗ್ಗೆ ತಿಳಿ ಹೇಳಿದರು. ಅಧ್ಯಕ್ಷೀಯ ಭಾಷಣದಲ್ಲಿ ವಂ.ಗುರು. ಆಲ್ಬರ್ಟ್ ಕ್ರಾಸ್ತಾರವರು ತಂದೆಯಂದಿರು ಕುಟುಂಬವನ್ನು ನಿರ್ವಹಿಸುವ ರೀತಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಕುಟುಂಬದ ಒಳಿತಿಗಾಗಿ ಅವರ ದುಡಿಮೆ. ಈ ಬಗ್ಗೆ ಮಾತಾನಾಡಿದರು. ಎಲ್ಲವೂ ಮನ ಮಿಡಿಯುವಂತೆ ಮಾಡಿತು. ಅಪ್ಪಂದಿರು ಈ ಆಚರಣೆಯಿಂದ ತುಂಬಾ ಖುಷಿ ಪಟ್ಟರು.
ಶ್ರೀಮತಿ ಡೋರಾ ಡಿಸೋಜರವರು ವಂದಾನಾರ್ಪಣೆಗೈದರು. ಈ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಸಹಕರಿಸಿದರು. ಶ್ರೀಮತಿ ಲೀನಾ ತಾವ್ರೊ ಕಾರ್ಯಕ್ರಮ ನಿವ೯ಹಿಸಿದರು. ಶ್ರೀಮತಿ ಸುನೀತಾ ಡಿಮೆಲ್ಲೊ ಮನರಂಜನೆಗಾಗಿ ಆಟಗಳನ್ನು ನೆರವೇರಿಸಿದರು. ಅಪ್ಪಂದಿರಿಗೆ ಶುಭಾಶಯ ಕೋರಿ ವಂ. ಗುರು. ಆಲ್ಬರ್ಟ್ ಕ್ರಾಸ್ತಾರವರು ಗೀತೆ ರಚಿಸಿ ಸಂಗೀತ ನೀಡಿದ ಹಾಡನ್ನು Y C S ಮಕ್ಕಳೊಂದಿಗೆ ಹಾಡಿ ಅಪ್ಪಂದಿರಿಗೆ ಶುಭ ಹಾರೈಸಿದರು. ಉಪಾಧ್ಯಕ್ಷರು ಧರ್ಮಗುರುಗಳಿಗೆ ಶಾಲು ಹೊದಿಸಿ ಗೌರವಿಸಿದರು. ಇಬ್ಬರೂ ಧರ್ಮ ಗುರುಗಳು ಅಪ್ಪಂದಿರಿಗೆ ಶಾಲು ಹೊದಿಸಿ ಗೌರವಿಸಿದರು. ನೂರಕ್ಕಿಂತ ಹೆಚ್ಚು ಜನ ಅಪ್ಪಂದಿರು ಉಪಸ್ಥಿತರಿದ್ದರು.



























