ಸಬ್ಲಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಮತ್ತು ದಾನಿಗಳ ನೆರವಿನ ಕಾರ್ಯಕ್ರಮ

JANANUDI.COM NETWORK


ಕುಂದಾಪುರ, ಸಬ್ಲಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (30 12 2021) ರಂದು ಶ್ರೀಯುತ ಶಂಕರ್ ಪೂಜಾರಿ ಶಿಕ್ಷಕರು ಇವರು ವರ್ಗಾವಣೆಯಾದ ಪ್ರಯುಕ್ತ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ದಾನಿಗಳ ನೆರವಿನ ಕಾರ್ಯಕ್ರಮ ನಡೆಯಿತು.
ಸಬ್ಲಾಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕರ್ ಪೂಜಾರಿ ಇವರು ವರ್ಗಾವಣೆಯಾದ ಪ್ರಯುಕ್ತ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷೆಯಾದ ಶ್ರೀಮತಿ ಜಲಾಜಾಕ್ಷಿ ವಹಿಸಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿ ಶುಭ ಕೋರಿದರು.
ನಂತರದ ಕಾರ್ಯಕ್ರಮದಲ್ಲಿ ಲ್ಯಾನ್ಸ್ ಕ್ಲಬ್ ಕುಂದಾಪುರ ಇವರಿಂದ ಕೊಡಮಾಡಲ್ಪಟ್ಟ ಶಾಲಾ ಬ್ಯಾಗುಗಳನ್ನು, ಶಾಲಾ ವಿದ್ಯಾರ್ಥಿಗಳಿಗೆ ಡಾ. ರವೀಂದ್ರ ತಲ್ಲೂರು ಇದರ ಪ್ರಯೋಜಕರಾದ ಕುಂದಾಪುರ ಲ್ಯಾನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ವಿತರಿಸಿದರು. ದಿವಂಗತ ರಾಧ ಮತ್ತು ಮಂಜು ಪೂಜಾರಿ ಇವರ ಸ್ಮರಣಾರ್ಥ ಇವರ ಮಕ್ಕಳು ಶಾಲೆಗೆ ಮಿಕ್ಸರ್ ನೀಡಿದರು. ರಾಜು ಕೋಟ್ಯಾನ್ ಉಪಸ್ಥಿತರಿದ್ದರು.
ಅತಿಥಿಗಳಾಗಿ ಹಟ್ಟಿಯಂಗಡಿ ಪಂಚಾಯತ್ ಸದಸ್ಯರಾದ ಶ್ರೀಮತಿ ಸಂಧ್ಯಾ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ, ಶ್ರೀ ಗಣೇಶ್ ಪೇಂಟರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಮಂಜಯ್ಯ ಶೆಟ್ಟಿ, ಶ್ರೀ ಸೂಲ್ಯಣ್ಣ ಶೆಟ್ಟಿ ಪ್ರಸ್ತಾವಿಕ ನುಡಿಯನ್ನು ನುಡಿದರು. ಸಬ್ಲಾಡಿ ರಮೇಶ್ ಆಚಾರ್ಯರು ಮತ್ತು ಸಂತೋಷ್ ಕುಮಾರ್ ಕಾರ್ಯಕ್ರಮವನ್ನು ನೆರವೇರಿಸಿದರು. ಜಯರಾಮ್ ಪಟಗಾರ ಅತಿಥಿಗಳನ್ನು ಸ್ವಾಗತಿಸಿದರು, ಸಂತೋμï ಕುಮಾರ್ ಶೆಟ್ಟಿ ಧನ್ಯವಾದಗಳನ್ನು ಸಮರ್ಪಿಸಿದರು.