

ಕುಂದಾಪುರ : ಸ್ಥಳೀಯ ರಾಮ ಮಂದಿರ ರಸ್ತೆಯ ನಿವಾಸಿ ಗಣೇಶ್ ನಾವಡ(64 ) ಅವರು ಅಲ್ಪ ಕಾಲದ ಅಸೌಖ್ಯದಿಂದ ದಿ.27.10 22ರ ಗುರುವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಎಸ್.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಾಗಿದ್ದ ಇವರು ಜಿಲ್ಲೆಯ ಹಲವೆಡೆ ಸೇವೆ ಸಲ್ಲಿಸಿದ್ದರು.ರಾಜ್ಯದ ಖ್ಯಾತ ಕ್ರಿಕೆಟ್ ತಂಡ ಚಕ್ರವರ್ತಿ ಯ ಮಾಜಿ ಸ್ಪಿನ್ನರ್ ಆಗಿದ್ದ ಇವರು ಚಕ್ರವರ್ತಿ ತಂಡದ ಯಶಸ್ವಿನಲ್ಲಿ ಗಣನೀಯ ಪಾತ್ರ ವಹಿಸಿದ್ದರು. ಮೃತರು ಪತ್ನಿ,ತಾಯಿ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಗಣೇಶ್ ನಾವಡರು ಸಂತ ಮೇರಿಸ್ ಪ್ರೌಢಶಾಲೆಯ ಮತ್ತು ಭಂಡಾರಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಪ್ರೌಢಶಾಲೆಯಲ್ಲಿರುವಾಗಲೇ ಅವರು ಉತ್ತಮ ಕ್ರಿಕೆಟರ್ ಆಗಿದ್ದರು. ತಾಲೂಕು ಮಟ್ಟದ ಕ್ರಿಕೆಟ್ ಕೂಟದಲ್ಲಿ ನಿರಂತರ ಎರಡು ವರ್ಷ, ಪ್ರಸ್ತೂತ ಜನನುಡಿ ಡಾಟ್ ಕಾಮ್ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಜೊತೆ ಕ್ರಿಕೆಟ್ ನಲ್ಲಿ ಉತ್ತಮ ವೇಗದ ಬೌಲರ್ ಆಗಿ ಆಡಿ ಹೆಸರು ಗಳಿಸಿದ್ದರು. ಮುಂದೆ ಕಾಲೇಜ್ ಜೀವನದಲ್ಲಿ ಕೂಡ ಉತ್ತಮ ಕ್ರಿಕೆಟರ್ ಆಗಿ ಹೆಸರು ಗಳಿಸಿ, ಚಕ್ರವರ್ತಿ ಕ್ಲಬಿಗೆ ಸೇರಿ ಖ್ಯಾತರಾದರು.
ಜನನುಡಿ ಡಾಟ್ ಕಾಮ್ ಸಂಸ್ಥೆ ಗಣೇಶ್ ನಾವಡರ ಕುಟುಂಬಕ್ಕೆ ಸಾಂತ್ವಾನ ಬಯಸುತ್ತದೆ ಮತ್ತುವರ ಆತ್ಮಕ್ಕೆ ಶಾಂತಿ ಕೋರಿ, ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ.