ಶ್ರೀನಿವಾಸಪುರದಲ್ಲಿ ಅಬಕಾರಿ ಪೊಲೀಸರ ದಾಳಿ :730 ಗ್ರಾಮ್ ಗಾಂಜ ವಶ

ಶ್ರೀನಿವಾಸಪುರ: ದಿನಾಂಕ 23.07 2023 ರಂದು ಸಂಜೆ ಶ್ರೀನಿವಾಸಪುರ ನಗರದ ಜಗಜೀವನ್ ರಾಮ್ ಪಾಳ್ಯ ಮುಳ್ಬಾಗಲು ರಸ್ತೆಯ ದರ್ಗಾ ಬಳಿ ದಾಳಿ ಮಾಡಿ ಸಲ್ಮಾನ್ ಎಂಬುವರು TATA ACE tempo ವಾಹನದಲ್ಲಿ 430 gm ಒಣ ಗಾಂಜ ಹಾಗೂ ಮೊಹಮ್ಮದ್ ಹುಸೇನ್ ಸಾಬ್ ಎಂಬುವವರು TVS 50 ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ 300 gm ಒಣಗಿದ ಗಾಂಜಾ ವನ್ನು ಗಿರಾಕಿಗಳಿಗೆ ಮರಾಟಕ್ಕಾಗಿ ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರಡಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ, ದಾಳಿಯಲ್ಲಿ ಶ್ರೀ ರೋಹಿತ್ ಬಿ ಎಸ್ ಅಬಕಾರಿ ನಿರೀಕ್ಷಕರು, ಶ್ರೀನಿವಾಸಪುರ ವಲಯ ಹಾಗೂ ಶ್ರೀಮತಿ ಪುಷ್ಪ ಅಬಕಾರಿ ನಿರೀಕ್ಷಕರು ಕೋಲಾರ ಉಪ ವಿಭಾಗ ರವರು ಮತ್ತು ಸಿಬ್ಬಂದಿಗಳಾದ ಮಂಜುನಾಥ್ ರಾಘವೇಂದ್ರ ಶಿವಾನಂದ್ ಈಶ್ವರ ಭಾಗವಹಿಸಿದ್ದರು. ಒಟ್ಟು 730 ಗ್ರಾಮ್ ಗಾಂಜವನ್ನು ವಶ ಪಡಿಸಿಕೊಳ್ಳಲಾಗಿದೆ