

ಕುಂದಾಪುರ; ಆಚಾರ್ಯ ಕುಟುಂಬಸ್ಥರು ಇತ್ತೀಚಿಗೆ ತಮ್ಮನ್ನು ಅಗಲಿದ ಸಹೋದರಿ ಕೆ ಲಲಿತಾ ಆಚಾರ್ಯ ನೆನಪಿಗಾಗಿ ಐವತ್ತು ಸಾವಿರ ಮೌಲ್ಯದ ರಕ್ತ ನಿಧಿ ಕೇಂದ್ರಕ್ಕೆ ಉಪಯೋಗ ಇರುವ ಉಪಕರಣವನ್ನು ಹಸ್ತಾಂತರಿಸಿದರು. ರೆಡ್ ಕ್ರಾಸನ ಸಭಾಪತಿ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ಸೀತಾರಾಮ ಶೆಟ್ಟಿ ಹಾಗೂ ಆಚಾರ್ಯ ಕುಟುಂಬಸ್ಥರು ಉಪಸ್ಥಿತರಿದ್ದರು