ಪಿಯುಸ್ ನಗರ ಕಥೊಲಿಕ್ ಸಭಾದಿಂದ ಪರಿಸರ ಸಂರಕ್ಷಣೆ ಮತ್ತು ವನಮಹೋತ್ಸವ ಕಾರ್ಯಕ್ರಮ


ಕುಂದಾಪುರ, ಜು.12: ಕಥೊಲಿಕ್ ಸಭಾ ಪಿಯುಸ್ ನಗರ ಘಟಕವು ದಿನಾಂಕ 9 ರಂದು ಚರ್ಚಿನ ವಠಾರದಲ್ಲಿ ವನಮಹೋತ್ಸವವನ್ನು ಆಚರಿಸಿತು. ಚರ್ಚಿನ ಧರ್ಮಗುರುಗಳಾದ ವಂ|ಆಲ್ಬರ್ಟ್ ಕ್ರಾಸ್ತಾ, ಗೀಡವನ್ನು ನೆಟ್ಟು ಉದ್ಘಾಟಿಸಿ ಪರಿಸರ ಮತ್ತು ವನಮಹೋತ್ಸವದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಚರ್ಚಿನ ಪಾಲನಮಂಡಳಿ ಉಪಾಧ್ಯಕ್ಷ ಜೆಮ್ಸ್ ಡಿಮೆಲ್ಲೊ, ಕಾರ್ಯದರ್ಶಿ ರೆಶ್ಮಾ ಡಿಸೋಜಾ, ಆಯೋಗಗಳ ಸಂಚಾಲಕಿ ಲೀನಾ ತಾವ್ರೊ, ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಕಥೊಲಿಕ್ ಸಭಾ ಪದಾಧಿಕಾರಿಗಳು, ಸದಸ್ಯರು ಮತು ಧರ್ಮಸಭೆಯವರು ಹಾಜರಿದ್ದರು.
ಪಿಯುಸ್ ನಗರ ಕಥೊಲಿಕ್ ಸಭಾದ ಅಧ್ಯಕ್ಷರಾದ ಆಲೆಕ್ಸಾಂಡ ಲುವಿಸ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಮೀಳಾ ಡೆಸಾ ನಿರೂಪಿಸಿ ವಂದಿಸಿದರು. ಪಿಯುಸ್ ನಗರ ಚರ್ಚಿನ ಪ್ರತಿಯೊಂದು ಕುಟುಂಬಕ್ಕೆ ವಿತರಿಸಲಾಯಿತು.