ಪಿಯುಸ್ ನಗರ ಕಥೊಲಿಕ್ ಸಭಾ ಘಟಕದಿಂದ ಥಾವ್ನ್ ಭಾಷಣ್ ಸ್ಪರ್ಧೆ

ಕುಂದಾಪುರ, ಸೆ. 4: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇವರ ನಿರ್ದೇಶನದಲ್ಲಿ ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಘಟಕದ ಭಾಷಣ ಸ್ಪರ್ಧೆಯು, ಪಿಯುಸ್ ನಗರ ಚರ್ಚಿನ ಸಭಾಭವನದಲ್ಲಿ ನಡೆಯಿತು. ಭಾಷಣ ಸ್ಪರ್ಧೆಯು 1 ರಿಂದ 4 ನೇ ಕ್ಲಾಸಿನ ಮಕ್ಕಳಿಎ “ನನ್ನ ಊರು” 5 ರಿಂದ 7 ಕ್ಲಾಸಿನ ಮಕ್ಕಳಿಗೆ ಪ್ಲ್ಯಾಸ್ಟಿಕಿ “ದುಸ್ಪರಿಣಾಮ”  8 ರಿಂದ 10 ನೇ ಕ್ಲಾಸ್ ಮಕ್ಕಳಿಗೆ “ವಿವಿಧತೆ ಮತ್ತು ವಿಭಿನ್ನತೆಯಲ್ಲಿ  ಭಾರತದ ಏಕತೆ” ಮತ್ತು 16 ರಿಂದ 25 ವರ್ಷದ ಒಳಗಿನವರಿಗೆ ಕನ್ನಡ ಮತ್ತು ಕೊಂಕಣಿಯಲ್ಲಿ “ನವ್ಯ ಭಾರತದ ದ್ವನಿಯಾಗೋಣ” ವಿಷಯದ ಕುರಿತು ಭಾಷಗಳನು ನಡೆಯಿತು.

     1 ನೇ ವಿಭಾಗದಲ್ಲಿ ಸ್ಟೇರಲ್ ಮಸ್ಕರೇನ್ಹಾಸ್, ಪ್ರಥಮ.ಅನೋಲ್ಯ ಡಿಸೋಜಾ, ದ್ವೀತಿಯ. ಸೆಲ್ವಿಟಾ ಡಿಸೋಜಾ, ತ್ರತೀಯ. 2ನೇ ವಿಭಾಗದಲ್ಲಿ ರೀಯೊನಾ ಡಿಸೋಜಾ, ಪ್ರಥಮ. 3 ನೇ ವಿಭಾಗದಲ್ಲಿ ಬ್ರೆಂಡನ್ ರೆಬೆಲ್ಲೊ, ಪ್ರಥಮ. ಜೆನಿಶಾ ಡಿಸೋಜಾ ದ್ವೀತಿಯ.ಒಲ್ಗಾ ಡಿಮೆಲ್ಲೊ ತ್ರತೀಯ, 16 ರಿಂದ 25 ವರ್ಷದ ಒಳಗಿನವರ ಕನ್ನಡ ವಿಭಾಗದಲ್ಲಿ ಸೀಮೊನ್ ಪಿರೇರಾ, ಕೊಂಕಣಿ ವಿಭಾಗದಲ್ಲಿ ಅಲ್ವಿಟಾ ನಜರೇತ್ ಪ್ರಥಮ. ಸ್ಥಾನ ಪಡೆದರು.ಸ್ಪರ್ಧೆಯಲ್ಲಿ ಭಾಗವಹಿಸಿದರೆಲ್ಲರಿಗೂ ಬಹುಮಾನವನ್ನು ನೀಡಿ ಸಂಘಟಕರು ಸ್ಪರ್ಧಿಗಳಿಗೆ ಪ್ರೇರಣೆ ನೀಡಿದರು. ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ನಿವ್ರತ್ತ ಶಿಕ್ಷಕ ಎಲ್.ಜೆ.ಫೆರ್ನಾಂಡಿಸ್,ಕುಂದಾಪುರ ವಲಯ ಕಥೊಲಿಕ್ ಸಭೆಯ ಮಾಜಿ ನಿಕಟಪೂರ್ವ ಅಧ್ಯಕ್ಷೆ ಮೇಬಲ್ ಡಿಸೋಜಾ ತೀರ್ಪುಗಾರಾಗಿದ್ದರು.

   ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಘಟಕದ ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿಮೆಲ್ಲೊ, ನಿಯೋಜಿತ ಅಧ್ಯಕ್ಷ ಅಲೆಕ್ಸಾಂಡರ್ ಲೂವಿಸ್, ರೀಟಾ ಕ್ವಾಡರ್ಸ್ ತೀರ್ಪುಗಾರರನ್ನು ಪರಿಚಯಿಸಿದರು ಅಧ್ಯಕ್ಷ ರೇಮಿ ಫೆರ್ನಾಂಡಿಸ್ ಸ್ವಾಗತಿಸಿದರು. ಖಜಾಂಚಿ ಸಂತಾನ್ ಕ್ರಾಸ್ತಾ ಧನ್ಯವಾದಗಳನ್ನು ಸಮರ್ಪಿಸಿದರು, ಕಾರ್ಯದರ್ಶಿ ಪ್ರಮೀಳಾ ಡೆಸಾ ನಿರೂಪಿಸಿದರು.