ಪಟಾಕಿ ಸಿಡಿತದಿಂದಾಗಿ ಇಬ್ಬರ ಕಣ್ಣಿಗೆ ಹಾನಿ ಡಾ.ಮಂಜುನಾಥ್ ಕಾದ ಎಣ್ಣೆ ಪಟಾಕಿ ಸಿಡಿತದಿಂದ ೮ ಮಂದಿಗೆ ಸುಟ್ಟಗಾಯ ಚಿಕಿತ್ಸೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ ೧೫ ಕ್ಕೂ ಹೆಚ್ಚು ಮಂದಿ ಮಕ್ಕಳು , ಹಿರಿಯರು ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಳು , ಸುಟ್ಟಗಾಯಗಳಿಂದ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಧಾವಿಸಿದ್ದು , ನಗರದ ವಿವೇಕ ನೇತಾಲಯದಲ್ಲಿ ಬಾಲಕನೊಬ್ಬನ ಕಾರ್ನಿಯಾಗೆ ಗಾಯವಾಗಿದ್ದು , ಚಿಕಿತ್ಸೆ ನೀಡಿದ್ದಾಗಿ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ತಿಳಿಸಿದರು . ಪರಿಸರ ಕಾಳಜಿಯಿಂದ ಅನೇಕರು ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆಯಾಗಿದ್ದು , ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲವಾದರೂ , ಇಬ್ಬರು ಮಕ್ಕಳ ಕಾರ್ನಿಯಾಗೆ ಹಾನಿಯಾಗಿದ್ದು , ಚಿಕಿತ್ಸೆ ನೀಡಿದ್ದಾಗಿ ಅವರು ತಿಳಿಸಿದರು . ಈ ಕುರಿತು ಮಾಹಿತಿ ನೀಡಿದ ಅವರು , ಮುನ್ನಚ್ಚರಿಕೆ ದೃಷ್ಟಿಯಿಂದ ದಿನದ ೨೪ ಗಂಟೆಗಳು ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದ್ದು , ಸಂಪೂರ್ಣ ದೃಷ್ಟಿಹಾನಿಯಂತೆಯ ಯಾವುದೇ ಪ್ರಕರಣಗಳು ವರದಿಯಾಗಲ್ಲ ಎಂದು ತಿಳಿಸಿದರು . ಹಿಂದಿನ ವರ್ಷಗಳಿಗಿಂತ ಈ ಬಾರಿ ಪಟಾಕಿ ಸಿಡಿತದಿಂದಾಗಿ ಚಿಕಿತ್ಸೆಗೆ ಬಂದವರ ಸಂಖ್ಯೆ ಕುಸಿತವಾಗಿದ್ದು , ಜನರಲ್ಲಿ ಜಾಗೃತಿ ಮೂಡಿರುವುದು ಮತ್ತು ಪರಿಸರ ಕಾಳಜಿಯಿಂದ ಹಸಿರು ಪಟಾಕಿ ಮಾತ್ರ ಸಿಡಿಸಲು ಮುಂದಾಗಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು . ವೈದ್ಯ ಹೆಚ್.ಆರ್.ಮಂಜುನಾಥ್ ಅವರು ಹೇಳುವಂತೆ ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು . ಪರಿಸರ ಮಾತ್ರವಲ್ಲ ಕಣ್ಣಿನ ರಕ್ಷಣೆಗೂ ಸಹಕಾರಿ ಎಂದರು . ಇಷ್ಟಕ್ಕೂ ಪಟಾಕಿ ಸಿಡಿಸಲೇ ಬೇಕಾದಲ್ಲಿ ಪೋಷಕರು ಎಚ್ಚರಿಕೆಯಿಂದ ಮಕ್ಕಳಿಂದ ಪಟಾಕಿ ಹೊಡೆಸಬೇಕು ಎಂದು ತಿಳಿಸಿದರು .
ನಗರದ ಶಂಕರನೇತಾಲಯದಲ್ಲೂ ಒಂದೆರಡು ಪ್ರಕರಣಗಳು ವರದಿಯಾಗಿದ್ದು , ಸಣ್ಣಪುಟ್ಟ ಪ್ರಕರಣ ಹೊರತುಪಡಿಸಿ ದೃಷ್ಟಿಗೆ ತೊಂದರೆಯಾಗುವ ಯಾವುದೇ ಪ್ರಕರಣ ಬರಲಿಲ್ಲ ಎಂದು ನೇತ್ರ ತಜ್ಞ ಡಾ.ಶಂಕರ್‌ ನಾಯಕ್ ತಿಳಿಸಿದರು .
ಸಾಮಾನ್ಯವಾಗಿ ಪಟಾಕಿ ಸಿಡಿಸುವಾಗ ಪಟಾಕಿಯೊಳಗಿನ ರಾಸಾಯನಿಕದಿಂದ , ಸಿಡಿತದ ವೇಗಕ್ಕೆ ಮಣ್ಣು ಮತ್ತು ಬೆಂಕಿಯಿಂದ ಎರಡೂ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದು ಶಂಕರ್‌ ನಾಯಕ್ ತಿಳಿಸಿದರು .

ಸುಟ್ಟ ಗಾಯಗಳಿಗೆ ಆಯುರ್ವೇದ ಚಿಕಿತ್ಸೆ

ನಗರದ ಹಳೆ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಯ್ಯಶೆಟ್ಟಿ ಸುಟ್ಟಗಾಯಗಳ ಚಿಕಿತ್ಸಾಯಲಯಕ್ಕೆ ಕಾದ ಎಣ್ಣೆಯಿಂದ ಮೊಣಕಾಲು , ಮೊಣಕೈ ಸುಟ್ಟ ಗಾಯಾಳುಗಳು ನಾಲ್ವರು ಬಂದು ಚಿಕಿತ್ಸೆ ಪಡೆದಿದ್ದಾರೆ ಎಂದು ಚಿಕಿತ್ಸಾಲಯದ ಪಾರಂಪರಿಕ ವೈದ್ಯ ಮಂಜುನಾಥ್ ತಿಳಿಸಿದರು . ಪಟಾಕಿ ಸಿಡಿತದಿಂದಲೂ ನಾಲ್ವರ ಕೈಗೆ ಸುಟ್ಟ ಗಾಯವಾಗಿದ್ದು , ಪುಟ್ಟ ಬಾಲಕನೊಬ್ಬನ ಕೈಗೆ ಹೆಚ್ಚಿನ ಗಾಯವಾಗಿದ್ದು , ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು . ಪ್ರತಿವರ್ಷ ಅಡುಗೆ ಎಣ್ಣೆ ಪಟಾಕಿ ಬೆಂಕಿಯ ಸುಟ್ಟ ಗಾಯಗಳ ೨೫ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು , ಈ ಬಾರಿ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿ , ಜನತೆಯಲ್ಲಿ ಅರಿವು ಮೂಡಿದೆ ಎಂದರು . ಇದೇ ರೀತಿ ಜಿಲ್ಲಾಸತೆ , ಜಾಲಪ್ಪ ಆಸ್ಪತ್ರೆ , ನೇತದೀಪ ರೋಟರಿ ಕಣ್ಣಾಸತೆಗೂ ಕೆಲವು ಗಾಯಾಳುಗಳು ಬಂದು ಚಿಕಿತ್ಸೆ ಪಡೆದಿದ್ದು , ಒಟ್ಟಾರೆ ೧೫ ಕ್ಕೂ ಹೆಚ್ಚು ಮಂದಿ ಪಟಾಕಿ ಅವಾಂತರದಿಂದ ಸುಟ್ಟಗಾಯಗಳು ಹಾಗೂ ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದಾರೆ .