ಚೊಕ್ಕನಹಳ್ಳಿ ಗ್ರಾಮದ ಡಾ. ರಾಮೇಗೌಡ (53) ಕೊರೊನಾಗೆ ಬಲಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಚೊಕ್ಕನಹಳ್ಳಿ ಗ್ರಾಮದ ಡಾ. ರಾಮೇಗೌಡ (53) ಗುರುವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅವರು ಎರಡು ದಶಕಗಳಿಂದ ಬೆಂಗಳೂರು ದೊಡ್ಡ ಬಾಣಸವಾಡಿ ಸೇರಿದಂತೆ 5 ಸ್ಥಳಗಳಲ್ಲಿ ರಾಶಿ ಡೈಗ್ನಾಸ್ಟಿಕ್ ಸೆಂಟರ್ಸ್ ಸ್ಥಾಪಿಸಿ 200ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕಲ್ಪಿಸಿದ್ದರು. ತಿಂಗಳ ಹಿಂದೆ ತಂದೆಯನ್ನು ಕಳೇದುಕೊಂಡಿದ್ದರು. ಅವರಿಗೆ 8 ದಿನಗಳ ಹಿಂದೆ ಕೊರೊನಾ ಪಾಸಿಟೀವ್ ಕಾಣಿಸಿಕೊಂಡು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು
ಹೇಳಲಾಗಿದೆ.