ಸಂತ ಲಾರೆನ್ಸ್‌ ಪ ಪೂ ಮೂಡುಬೆಳ್ಳೆ ಯಲ್ಲಿ ಡಾ ಬಿ ಆರ್ ಅಂಭೇಡ್ಕರ್ ಜಯಂತಿ ಆಚರಣೆ

JANANUDI.COM NETWORK

ಭಾರತದ ಸಂವಿಧಾನ ರಚನೆ, ಅಸ್ಪ್ರಶ್ಯತೆಯ ವಿರುದ್ಧ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಜಾಗೃತಿಯನ್ನು ಮೂಡಿಸಲು ಅಂಭೆಡ್ಕರ್ ಅವರ ನಾಯಕತ್ವ ನಮಗೆ ಸದಾ ಪ್ರೆರಣೆಯಾಗಿದೆ” ಎಂದು ಇತಿಹಾಸ ಉಪನ್ಯಾಸಕರಾದ ನವೀನ್ ಕೊರೆಯಾ , ಮೂಡುಬೆಳ್ಳೆ ಸಂತ ಲಾರೆನ್ಸ್‌ ಪ ಪೂ ಕಾಲೇಜಿನಲ್ಲಿ ನಡೆದ ಅಂಭೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಶತೆಯನ್ನು ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ವಹಿಸಿದ್ದರು. ವಿಧ್ಯಾರ್ಥಿ ನಾಯಕರಾದ ಕು. ಜೆಮಿಮಾ ಅರಾನ್ಹಾ, ಸುನೀಲ್ ಕುಮಾರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಜೋನ್ ಕ್ಯಾಸ್ತಲೀನೊ ಸ್ವಾಗತಿಸಿ , ನಿರ್ವಹಿಸಿದರು. ಉಪನ್ಯಾಸಕ ಜೋಸೆಪ್ ಡಿಸೋಜ ವಂದಿಸಿದರು.