ನಿವೇದಿತಾ ಪ್ರೌಢ ಶಾಲೆಗೆ ಸಹಾಯ ಧನ ಕೊಡುಗೆ ಹಾಗೂ ವೃತ್ತಿ ಮಾರ್ಗದರ್ಶನ

ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ರೊ ಕೆ. ಪಾಂಡುರಂಗ ಭಟ್ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವೃತ್ತಿ ಮಾರ್ಗದರ್ಶನ ನೀಡಿ, ಶಾಲಾ ವಾಹನದ ನಿರ್ವಹಣೆಗೆ ಸಹಾಯ ಧನ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸುಬ್ಬು ಮಾಸ್ಟರ್ , ಇಂಟರ್ಯಾಕ್ಟ ಕ್ಲಬ್ಬಿನ ಸಂಯೋಜಕ ಪ್ರದೀಪ್ ಕುಮಾರ್ ಶೆಟ್ಟಿ, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.