ನವದೆಹಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕುಂದಾಪುರ ತಾಲೂಕು ರೆಡ್ ಕ್ರಾಸ್ ಶಾಖೆಗೆ ರಕ್ತ ಸಂಗ್ರಹದ ಬಸ್ಸ್ ಕೊಡುಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ನವ ದೆಹಲಿ ( Indian Red Cross society, national head quarter, New Delhi) ಇವರು ಕುಂದಾಪುರ ತಾಲೂಕು ಶಾಖೆಗೆ ಕೊಡಮಾಡಿದ ರಕ್ತ ಸಂಗ್ರಹದ ಬಸ್ ನ್ನು, ಕುಂದಾಪುರ ಉಪ ವಿಭಾಗಾಧಿಕಾರಿ (Asst. Commissioner) ರಶ್ಮಿ. ಎಸ್ ಆರ್ ಇವರು ಉದ್ಘಾಟಿಸಿದರು. ನಮ್ಮ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತ್ಯನಾರಾಯಣ ಪುರಾಣಿಕ ಸೇರಿ ಮೂರು ಜನ ರಕ್ತದಾನ ಮಾಡಿದರು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು, ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಡಾ. ಸೋನಿ, ಶಾಂತಾರಾಂ ಪ್ರಭು, ಎ. ಮುತ್ತಯ್ಯ ಶೆಟ್ಟಿ, ಸದಾನಂದ ಶೆಟ್ಟಿ ಎನ್, ಎಚ್. ಸುಧಾಕರ ಶೆಟ್ಟಿ, ಡಾ. ಶಾರದಾ ವಿವೇಕ್ , ಬಿ. ಎಮ್ ಚಂದ್ರಶೇಖರ, ವೀರೇಂದ್ರ ಕುಮಾರ್ ಗಟ್ಟಲ್ ಮತ್ತು ರಕ್ತ ನಿಧಿ ಕೇಂದ್ರದ ಸಿಭಂದಿಗಳು ಉಪಸ್ಥಿತರಿದ್ದರು.
ಎ.ಸಿ. ಮೇಡಮ್ ಆಮೇಲೆ ರಕ್ತ ನಿಧಿ ಕೇಂದ್ರ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ವನ್ನು ಸಂದರ್ಶಿಸಿ, ಇಲ್ಲಿಯ ಕಾರ್ಯ ವೈಖರಿಯನ್ನು ಕೊಂಡಾಡಿದರು.