ಪಶುವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಮೂಕ ಪ್ರಾಣಿಗಳ ಆರೋಗ್ಯ ರಕ್ಷಣೆಯನ್ನು ಮಾಡಿ : ಆರ್.ಸೆಲ್ವಮಣಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಪಶುವೈದ್ಯ ವೃತ್ತಿಯು ಶ್ರೇಷ್ಠ ಪ್ರಾಣಿ ಸೇವಾ ವೃತ್ತಿಯಾಗಿದ್ದು , ಎಲ್ಲಾ ಪಶುವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ , ಮೂಕ ಪ್ರಾಣಿಗಳ ಆರೋಗ್ಯ ರಕ್ಷಣೆಯನ್ನು ಮಾಡಿ , ರೈತರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢಗೊಳಿಸಬೇಕಾಗಿ ಜಿಲ್ಲಾಧಿಕಾರಿಗಳಾದ ಡಾ . ಆರ್ . ಸೆಲ್ವಮಣಿ ರವರು ಅಭಿಪ್ರಾಯಪಟ್ಟರು . ನಗರದ ಪಶುಆಸ್ಪತ್ರೆ ಸಂಕೀರ್ಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ , ಕೋಲಾರ ರವರ ಸಂಯುಕ್ತಾಶ್ರಯದಲ್ಲಿ ನಡೆದ “ ಕುರಿಗಳಲ್ಲಿ ಕಂಡುಬರುವ ರೋಗಗಳ ನಿರ್ವಹಣೆ ಹಾಗೂ ಹಸುಗಳಲ್ಲಿ ಬಂಜೆತನ ನಿವಾರಣೆ ” ಎಂಬ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು . ತಾಂತ್ರಿಕ ಕಾರ್ಯಾಗಾರಗಳನ್ನು ಪ್ರತಿ ತಿಂಗಳಲ್ಲಿ ಒಮ್ಮೆ ಹಮ್ಮಿಕೊಂಡು ಪಶುವೈದ್ಯ ವೃತ್ತಿಯಲ್ಲಿನ ಇತ್ತೀಚಿನ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ತಿಳಿದುಕೊಂಡು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಕರ್ತವ್ಯ ನಿರ್ವಹಣೆಯನ್ನು ಉತ್ತಮಗೊಳಿಸಬೇಕೆಂದು ತಿಳಿಸಿದರು.ಜಿಲ್ಲೆಯಲ್ಲಿ ಹೈನೋದ್ಯೋಮ , ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆಗೆ ಅತೀ ಹೆಚ್ಚಿನ ಅವಕಾಶಗಳಿದ್ದು , ಅದನ್ನು ಸದುಪಯೋಗಪಡಿಸಿಕೊಂಡು ಈ ಬಗ್ಗೆ ರೈತರಲ್ಲಿ ಹೆಚ್ಚು ಹೆಚ್ಚು ವಿಸ್ತರಣಾ ಚಟುವಟಿಕೆಗಳನ್ನು ಇಲಾಖಾ ವತಿಯಿಂದ ಹಮ್ಮಿಕೊಳ್ಳಬೇಕೆಂದು . ಸಭೆಯಲ್ಲಿ ಹಾಜರಿದ್ದ ಎಲ್ಲಾ ಪಶುವೈದ್ಯರಿಗೆ ತಿಳಿಸಿದರು . ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಎನ್.ಜಗದೀಶ್‌ಕುಮಾರ್‌ ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ . ಕೆ.ಎನ್ ಮಂಜುನಾಥರೆಡ್ಡಿ ಹಾಗೂ ಪಶುವೈದ್ಯರಾದ ಡಾ . ಗಂಗತುಳಸಿರಾಮಯ್ಯ , ಡಾ.ಸಿ.ಹೆಚ್ ಆದಂಷಫೀವುಲ್ಲಾ . ಡಾ.ಅಪ್ಟಲ್ ಪಾಷ , ಡಾ . ಎಸ್ ಶ್ರೀನಿವಾಸಗೌಡ , ಡಾ . ಎಸ್.ವಿಶ್ವನಾಥ ಮತ್ತು ಜಿಲ್ಲೆಯ ಎಲ್ಲಾ ಪಶುವೈದ್ಯರು ಹಾಜರಿದ್ದರು .