ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ದೀಪಾವಳಿ ದೀಪಾಂಜಲಿ ಕಾರ್ಯಕ್ರಮ


ಕುಂದಾಪುರ, ಅ. 29: ‘ಅಜ್ಞಾನ ಎಂಬುದು ತೊಲಗಿ ಜ್ಞಾನ ಎಂಬ ಜ್ಯೋತಿ ನಮ್ಮಲ್ಲಿ ಬೆಳಗಬೇಕು, ಕೆಟ್ಟದನ್ನು ಬಿಟ್ಟು ಒಳ್ಳೆದನ್ನು ಆರಂಭಿಸಬೇಕು, ದುಷ್ಟತನಕ್ಕೆ ಸೋಲುಂಟಾಗಿ, ಒಳ್ಳೆತನಕ್ಕೆ ಜಯವಾಗಬೇಕು, ಹಿಂದೆ ನಾವೆಲ್ಲ ಎಲ್ಲರೂ ಒಟ್ಟಾಗಿ ದೀಪಾವಳಿ ಆಚರಿಸುತಿದ್ದೇವು, ಸಿಹಿ ತಿಂಡಿಗಳಿಗೆ ಕಾತರಿಸುತ್ತೀದ್ದೆವು, ಯೇಸು ಸ್ವಾಮಿ ಹೇಳಿದ್ದನು, ನಿನ್ನ ದೀಪವನ್ನು ಪೆಟ್ಟಿಗೆಯಲ್ಲಿ ಅವಿತಿಡಬೇಡ, ಎತ್ತರದ ಜಾಗದಲ್ಲಿಟ್ಟು ಎಲ್ಲರೂ ಅದರ ಬೆಳಕು ಸಿಗುವಂಗಾಗಬೇಕೆಂದು, ಹೀಗೆ ನಾವೆಲ್ಲರೂ ಜಗತ್ತಿನ ದೀಪಗಾಬೇಕು” ಎಂದು ಕುಂದಾಪುರ ವಲಯ ಪ್ರಧಾನ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.
ಅವರು ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ದೀಪವಾಳಿ ಪ್ರಯುಕ್ತ ಕುಂದಾಪುರ ಸಂತ ಮೇರಿಸ್ ಶಾಲಾ ಪ್ರಾಂಗಣದಲ್ಲಿ ನಡೆದಲ್ಲಿ ಅ.28 ರಂದು ಭಾವೈಕ್ಯದ ದೀಪಾಂಜಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ ಮಾತನಾಡಿ “ಈ ಬೆಳಕಿನ ಹಬ್ಬ ದ್ವೇಷ ಮೋಸ ಎಂಬ ಕತ್ತಲನ್ನು ಕರಗಿಸಬೇಕು, ಮನ ಕುಲದಲ್ಲಿ ಪ್ರೀತಿ ಮಮತೆಯ ಸಹಬಾಳ್ವೆಯ ಬೆಳಕು ಬೆಳಗಬೇಕು, ಭಾರತ ಒಂದಾಗಲಿ ಐಕ್ಯತೆ ನಮ್ಮ ಮಂತ್ರವಾಗಲಿ, ನಮ್ಮ ನೆಡಿಗೆ ಕತ್ತಲೆಯಿಂದ ಬೆಳಕಿನಡೆ ಸಾಗಲಿ, ಎಲ್ಲಾ ಮನುಷರಲ್ಲಿ ಒಳೆದು ಇದೆ ಕೆಟ್ಟದು ಇದೆ, ಆದರೆ ನಾವು ಕೆಟ್ಟದನ್ನು ಸೋಲಿಸುವಂತರಾಗಬೇಕು, ನಮ್ಮ ವಿಜಯದ ಸಂಕೇತ ಒಳ್ಳೆದಾಗಿರಲಿ, ನಾವೆಲ್ಲಾ ಮಾನವೀಯತೆಯನು ಹಂಚಿಕೊಳ್ಳೋಣ, ನಮ್ಮ ಮನೆ, ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ಪ್ರಪಂಚ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿ ಬರಬೇಕು” ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಪೋಷಕ ಸಮಾಜ ಸೇವಕ ಉದ್ಯಮಿ ಮಂಜೀತ್ ನಾಗರಾಜ್, ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯೊಳಗೆ ಹಣತೆ ಜೊತೆ ಮತ್ತು ಭಾವಚಿತ್ರ ಸ್ಪಧೆಯ ವಿಜೇತರಿಗೆ ಬಹುಮಾನ ನೀಡಿ “ದೀಪಾವಳಿಗೊಂದು ಅರ್ಥವಿದೆ, ಪಟಾಕಿ ಅಂದರೆ ನಮ್ಮೊಳಗಿನ ಕೆಟ್ಟತನ ದುಷ್ಟತನ ಪಟಾಕಿಯಂತೆ ಸಿಡಿದು ಹೋರ ನಡೆಯಬೇಕು, ದೀಪಾವಳಿ ಸಮಯದ ಸಿಹಿತಿಂಡಿಗಳಿಗೂ ಅದರದೇ ಆದ ಅರ್ಥವಿದೆಯೆಂದು’ ಅವರು ತಿಳಿಸಿದರು. ಹಣತೆ ಜೊತೆ ಭಾವಚಿತ್ರದ ಸ್ಪಧೆಯಲ್ಲಿ ನಿಶಾ ಮತ್ತು ಕುಟುಂಬ ಪ್ರಥಮ, ಜಯಶೀಲ ಕೆ. ಮತ್ತು ತಂಡ ದ್ವೀತಿಯ ಮತ್ತು ಜೆ.ಸಿ.ಐ. ಸಿಟಿ ಬೈಂದೂರು ತ್ರತೀಯ ಬಹುಮಾನ ಪಡೆದರು. ಇನ್ನು ಹಲವು ಸಮಾಧಾಕರ ಬಹುಮಾನಗಳು ಮತ್ತು ಕಿರು ಅಟಗಳ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಎಸ್.ಪಿ. ಮ್ಯುಜಿಕಲ್ ಹರೀಶ್ ಕಂಚುಗೋಡು, ದೀಕ್ಷಾ ಬ್ರಹ್ಮವರ, ಸುರಕ್ಷಾ ಕಂಚುಗೋಡು, ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಮನೋರಂಜನಾ ನಿರೂಪಣೆಯನ್ನು ಶ್ರೀಶ ಆಚಾರ್ಯ ನಡೆಸಿಕೊಟ್ಟರು.
ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷೆ ಶಾಂತಿ ಪಿರೇರಾ ಸ್ವಾಗತಿಸಿದರು, ವಿನೋದ್ ಕ್ರಾಸ್ಟೊ, ಡಾ|ಸೋನಿ ಡಿಕೋಸ್ತಾ, ವಿಲ್ಸನ್ ಡಿ ಆಲ್ಮೇಡಾ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು, ಕಾರ್ಯಕ್ರಮದ ಸಂಚಾಲಕ ಅಲ್ಡ್ರಿನ್ ಡಿಸೋಜಾ ನಿರೂಪಿಸಿದರು.