ಜಿಲ್ಲಾ ಮಹಿಳಾ ಸಂಘಟನೆ ತಾಡಿಗೋಳ್ ಸಮೀಪ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದಕ್ಕೆ ಕ್ರಮ ಜರುಗಿಸುವಂತೆ ಆಗ್ರಹ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಗುರುವಾರ ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ಸದಸ್ಯರು, ಈಚೆಗೆ ತಾಡಿಗೋಳ್ ಸಮೀಪ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ನಳಿನಿ ಗೌಡ, ಶಾಂತಮ್ಮ ಶಿಲ್ಪ, ನೇತ್ರ, ಅರುಣ, ರತ್ನ, ರುಚಿತ, ಶಾಮಲ, ಲಕ್ಷ್ಮಿ, ಶಶಿ ರಾಜು, ಶ್ರೀನಾಥ್ ಇದ್ದರು.