ಹೈಕಾಡಿ ರಾಜೀವ್ ಶೆಟ್ಟಿಯವರ ಅಳಿಯನ ಕಾರು, ಅಪಘಾತ ಸ್ಥಳದಲ್ಲೆ ಸಾವು

JANANUD.COM NETWORK

ಕುಂದಾಪುರ,ಫೆ.20; ರೈತ ಸಂಘದ ಗೌರವನ್ವಿತ ಸದಸ್ಯರಾದ ಶಾಡಿಗುಂಡಿ ರಾಜೀವ ಶೆಟ್ಟಿಯವರ ಮಗಳು ಹಾಗೂ ಅಳಿಯ ಹಾಗೂ ಮಕ್ಕಳೊಂದಿಗೆ ಇಂದು ಮುಂಜಾನೆ ಬೆಂಗಳೂರಿಂದ ಊರಿಗೆ ಬರುವಾಗ ಹಾಸನ ಸಮೀಪ ಅಪಘಾತ ಉಂಟಾಗಿದ್ದು. ಈ ಅಪಘಾತದಲ್ಲಿ ಹೈಕಾಡಿ ರಾಜೀವ್ ಶೆಟ್ಟಿಯವರ ಅಳಿಯ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಮಗಳಿಗೆ ಮತ್ತು ಮೊಮ್ಮಕ್ಕಳಿಗೆ ಗಂಭೀರ ಗಾಯಗಳು ಉಂಟಾಗಿದ್ದು ಅವರು ಹಾಸನದ ಖಾಸಗಿ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಅಪಘಾತದ ಭೀಕರತೆಗೆ ಕಾರು ತುಂಬಾ ಜಖಂಗೊಂಡಿದೆ.