ಪಿಯುಸ್ ನಗರ್ ಚರ್ಚಿನಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರ ಆಚರಣೆ


ಕುಂದಾಪುರ, ಸಂತ ಪಿಯುಸ್ X ಇವರಿಗೆ ಸಮರ್ಪಿಸಲ್ಪಟ್ಟ ಪಿಯುಸ್ ನಗರ್, ಹಂಗಳೂರು ಚರ್ಚಿನಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರವನ್ನು ಎ.2 ರಂದು ಆಚರಿಸಲಾಯಿತು. ಇಗರ್ಜಿಯ ಮುಂಭಾಗದ ದ್ವಾರದ ಒಳಗಡೆ, ಆಶಿರ್ವಾದದ ಪ್ರಾರ್ಥನ ವಿಧಿಯನ್ನು ಇಗರ್ಜಿಯ ಧರ್ಮಗುರು ವಂ| ಆಲ್ಬರ್ಟ್ ಕ್ರಾಸ್ತಾ ನಡೆಸಿದರು. ನಂತರ ಚರ್ಚ್ ಆವರಣದಲ್ಲೆ ಮೆರವಣಿಗೆ ಮೂಲಕ ಇಗರ್ಜಿಯೊಳಗೆ ಪ್ರವೇಶಿಸಿ, ಗರಿಗಳ ಭಾನುವಾರದ ಮಹತ್ವವನ್ನು ವಿವರಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಭಕ್ತಾಧಿಗಳು ಈ ಪವಿತ್ರ ದಿನದಲ್ಲಿ ಭಾಗಿಯಾಗಿದ್ದರು.