ಭಾರತದಲ್ಲಿ ಕ್ರೂರತೆ ದ್ವೇಷ ಮೀರುತ್ತದೆ :ಮನೆ ಬಾಗಿಲಲ್ಲಿ ಎಸೆದ ಮಿಠಾಯಿ ತಿಂದು ನಾಲ್ವರು ಚಿಕ್ಕ ಮಕ್ಕಳು ಸಾವು

JANANUDI.COM NETWORK

ಉತ್ತರ ಪ್ರದೇ ಮಾ. 23: ಮನೆ ಬಾಗಿಲಲ್ಲಿ ಯಾರೋ ಎಸೆದ ಮಿಠಾಯಿ ತಿಂದು ನಾಲ್ಕು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶ ಕುಶಿನಗರದ ಸಿಸಾಯಿ ಗ್ರಾಮದ ಲಾತೂರ್ ತೋಲಾ ಎಂಬಲ್ಲಿ ನಡೆದಿದೆ.
ರಸಗುಲ್ ಎಂಬವರ ಮೂವರು ಮಕ್ಕಳಾದ ಮಂಜನಾ (7), ಸ್ವೀಟಿ (5), ಸಮರ್ (3) ಮತ್ತು ಅವರ ಸಹೋದರಿ ಖುಷ್ಬೂ ಅವರ ಮಗ ಆಯುಷ್ (5) ಮೃತ ದುರ್ದೈವಿಗಳು. ಮಕ್ಕಳು ಮನೆಯ ಬಾಗಿಲಲ್ಲಿ ಎಸೆದ ಮಿಠಾಯಿ ತಿಂದು ಘಟನೆ ನಡೆದಿದೆ.ಯಾರೋ ದುಷ್ಕರ್ಮಿಗಳು ವಿಷಯುಕ್ತ ಮಿಠಾಯಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆಯ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.