ಕ್ರಿಕೆಟ್ ಆಡುತ್ತಿರುವಾಗ ತೆಂಗಿನ ಮರ ಉರುಳಿ ಬಿದ್ದು: ಚಿಕ್ಕ ಬಾಲಕನ ಮೃತ್ಯು

JANANUDI.COM NETWORK

ಮೈಸೂರು: ಮಕ್ಕಳು ಕ್ರಿಕೆಟ್ ಆಡುವಾಗ  ಒಮ್ಮೇಲೆ ತೆಂಗಿನ ಮರ ಉರುಳಿದ್ದು, ಅದು 6 ವರ್ಷದ ಬಾಲಕನ ಮೈಮೇಲೆ  ಬಿದ್ದು ಬಾಲಕ ಮೃತಪಟ್ಟಿರುವ ದುಖಕರ ಘಟನೆ ಮೈಸೂರು ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.

      ಮೃತ  ಪಟ್ಟ ಬಾಲಕ 6 ವರ್ಷದ ಅಭಯ್ ಎಂದು ತಿಳಿದು ಬಂದಿದೆ. ಅಭಯ್ ತೋಟದಲ್ಲಿ ಕ್ರಿಕೆಟ್ ಆಡುವಾಗ ಧಿಡೀರ್ ನೆ ತೆಂಗಿನ ಮರವೊಂದು ಬುಡ ಸಮೇತ ಉರುಳಿ ಬಿದ್ದು ಅನಿರೀಕ್ಷಿತ ದುರ್ಘಟನೆ ನಡೆಯಿತು. ಈ ಘಟನೆಯಲ್ಲಿ  ಅಭಯ್ ಜತೆಗಿದ್ದ ಬಾಲಕಿಗೆ ಗಾಯವಾಗಿದ್ದು ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 ಬಿಳಿಗೆರೆ ಪೊಲೀಸ್ ಠಾಣಾದ ಪೊಲೀಸರು ಪ್ರಕರಣವನ್ನು ದಾಖಲಾಗಸಿಕೊಂಡಿದ್ದಾರೆ.