

ಬೆಂಗಳೂರು : ಬರ ಪರಿಹಾರ ನಿಧಿ ಬಿಡುಗಡೆ ವೇಳೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹಲವು ಸಚಿವರು ಮತ್ತು ಶಾಸಕರೊಂದಿಗೆ ಭಾನುವಾರ ಇಲ್ಲಿ ಧರಣಿ ನಡೆಸಿದರು.
ಶೂನ್ಯತೆ ಮತ್ತು ವಂಚನೆಯ ಪ್ರತೀಕವಾದ ‘ಚೊಂಬು’ ಎಂಬ ದುಂಡನೆಯ ನೀರಿನ ಮಡಕೆಯನ್ನು ಹಿಡಿದುಕೊಂಡ ನಾಯಕರು, ಕಳೆದ ಹಲವು ದಶಕಗಳಲ್ಲಿ ಕಂಡರಿಯದಂತಹ ತೀವ್ರ ಬರ ಎದುರಿಸಲು ಸೂಕ್ತ ಪರಿಹಾರ ಬಿಡುಗಡೆ ಮಾಡದೆ ಕರ್ನಾಟಕಕ್ಕೆ ‘ಮೋಸ’ ಮಾಡಿದೆ ಎಂದು ಆರೋಪಿಸಿದರು.
ವಿಧಾನಸೌಧ ಮತ್ತು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಧರಣಿ ನಡೆಸಿದರು.
ಕರ್ನಾಟಕದಲ್ಲಿ ಒಟ್ಟು 236 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದ್ದು, 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಹೇಳಿದೆ.